<blockquote>ಎಳೆಯ ಮನಸ್ಸುಗಳ ಮೇಲಿನ ಮಾತಿನ ದಾಳಿ ಪರಿಣಾಮ ಘೋರವಾಗಿರುತ್ತದೆ. ಈ ಆಘಾತ ಜೀವನದುದ್ದಕ್ಕೂ ಮಕ್ಕಳ ಮನಸ್ಸನ್ನು ಗಾಯದಂತೆ ಕಾಡಬಹುದು.</blockquote>.<p>ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿಕ್ಷಿಸುವುದು ಸಹಜ ಮತ್ತು ನ್ಯಾಯಸಮ್ಮತವೆಂದು ಸಮಾಜ ಒಪ್ಪಿಕೊಂಡಿದ್ದ ಕಾಲವೊಂದಿತ್ತು. ನಾನು ಓದುತ್ತಿದ್ದ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ, ತಪ್ಪು ಮಾಡಿದ ಮಕ್ಕಳನ್ನು ಬೆತ್ತಲೆ ಮಾಡಿ, ತರಗತಿಯಿಂದ ತರಗತಿಗೆ ಕಳುಹಿಸುವ ಶಿಕ್ಷೆ ಸಾಮಾನ್ಯವಾಗಿತ್ತು. ಪ್ರತಿ ತರಗತಿಗೆ ಅವರು ಕಾಲಿಟ್ಟಾಗ ಉಳಿದ ಮಕ್ಕಳು ಒಕ್ಕೊರಲಿನಲ್ಲಿ ‘ಶೇಮ್... ಶೇಮ್...’ ಎಂದು ಹಾಡುತ್ತಿದ್ದರು. ದೊಣ್ಣೆಯ ಪೆಟ್ಟಿನ ಶಿಕ್ಷೆಯೂ ಸಿಗುತ್ತಿತ್ತು.</p><p>ದೇಹಕ್ಕೆ ಆಗುವ ನೋವು ಕ್ಷಣಿಕವಾಗಿರಬಹುದು. ಆದರೆ, ಮನಸ್ಸಿಗೆ ಆಗುವ ಅವಮಾನ ಮೌನವಾಗಿ ಒಳಗೆ ಇಳಿದು ಬೇರು ಬಿಡುತ್ತಿತ್ತು. ಒಮ್ಮೆ ಈ ರೀತಿಯ ಶಿಕ್ಷೆಗೆ ಒಳಗಾದ ಮಕ್ಕಳು ನಂತರವೂ ಸಹಪಾಠಿಗಳಿಂದ ಪದೇ ಪದೇ ಅವಹೇಳನಕ್ಕೆ ಒಳಗಾಗುತ್ತಿದ್ದರು. ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತಿತ್ತು. ಆ ದೃಷ್ಟಿಯಲ್ಲಿ ಕರುಣೆ ಇರುತ್ತಿರಲಿಲ್ಲ, ತಿರಸ್ಕಾರ ಮತ್ತು ತಮಾಷೆ ಇರುತ್ತಿತ್ತು. ಆ ಅವಮಾನ ಮಗುವಿನ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿತ್ತು.</p><p>ನಾನೊಮ್ಮೆ ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ (ಎನ್ಎಲ್ಪಿ) ಪ್ರಯೋಗಿಸುವ ಒಬ್ಬ ಜೀವನ ಮಾರ್ಗದರ್ಶಕರನ್ನು ಭೇಟಿ ಮಾಡಿದ್ದೆ. ಅವರು ಮನಸ್ಸಿನೊಳಗೆ ಹುದುಗಿಕೊಂಡಿರುವ ಭಯ, ತಪ್ಪುಕಲ್ಪನೆಗಳು ಮತ್ತು ನೋವಿನ ನೆನಪುಗಳನ್ನು ಗುರುತಿಸಿ, ವ್ಯಕ್ತಿಯನ್ನು ಮಾನಸಿಕ ಖಿನ್ನತೆಯಿಂದ ಹೊರತರುವ ಕೆಲಸ ಮಾಡುತ್ತಿದ್ದರು. ಮಾತುಕತೆಯ ನಡುವೆ ಅವರು, ನನ್ನ ಬಳಿ ಬರುವ ನೂರು ಪ್ರಕರಣಗಳಲ್ಲಿ ಶೇ 99ರಷ್ಟು ಜನರ ಸಮಸ್ಯೆಗಳ ಮೂಲವು ಅವರ ಶಾಲಾ ದಿನಗಳಲ್ಲಿಯೇ ಇರುತ್ತದೆ ಎಂದರು. ಕೆಲವರು, ಸ್ನೇಹಿತರು ಅಥವಾ ಸಹಪಾಠಿಗಳಿಂದ ನಿರಂತರ ಅವಮಾನಕ್ಕೆ ಗುರಿಯಾಗಿದ್ದರೆ, ಇನ್ನೂ ಕೆಲವರು ಶಿಕ್ಷಕರಿಂದ ತಾರತಮ್ಯ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿರುತ್ತಾರೆ. ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲೇ ಆತ್ಮಹತ್ಯೆ ಪ್ರಯತ್ನ ಮಾಡಿರುತ್ತಾರೆ.</p><p>ಕಹಿ ಅನುಭವಗಳು ಕಾಲದೊಂದಿಗೆ ಮಾಯವಾಗುವುದಿಲ್ಲ. ವ್ಯಕ್ತಿ ದೊಡ್ಡವನಾದ ಮೇಲೂ, ಅನೈಚ್ಛಿಕವಾಗಿ, ತನ್ನ ಇಂದಿನ ಬದುಕಿನ ಸಂದರ್ಭಗಳಿಗೆ ಹಳೆಯ ಪಾತ್ರಗಳು ಮತ್ತು ನೋವಿನ ಅನುಭವಗಳನ್ನು ಅಳವಡಿಸಿಕೊಳ್ಳುತ್ತಾನೆ. ನಾವು ಇಂದು ಮನೆಯಲ್ಲೋ, ಕಚೇರಿಯಲ್ಲೋ ಅಥವಾ ಸಮಾಜದಲ್ಲೋ ಅದೇ ಪಾತ್ರಗಳನ್ನು ಜೋಡಿಸಿಕೊಳ್ಳುತ್ತೇವೆ. ಆಗ ಬಾಲ್ಯದಲ್ಲಿ ಅನುಭವಿಸಿದ ಅದೇ ಭಯ, ಅದೇ ಒತ್ತಡ, ಅದೇ ಖಿನ್ನತೆ ಮತ್ತೆ ಜೀವಂತವಾಗುತ್ತದೆ. ಪರಿಸ್ಥಿತಿ ಬದಲಾಗಿರಬಹುದು, ಆದರೆ ಮನಸ್ಸಿನ ಪ್ರತಿಕ್ರಿಯೆ ಬದಲಾಗುವುದಿಲ್ಲ.</p><p>ಇಂದು ದೈಹಿಕ ಶಿಕ್ಷೆಗೆ ಶಾಲೆಗಳಲ್ಲಿ ಅವಕಾಶವಿಲ್ಲ. ಹಾಗೆಂದು, ಹಿಂಸೆ ಸಂಪೂರ್ಣವಾಗಿ ನಿಂತಿದೆಯೇ? ರೂಪ ಬದಲಾಗಿದೆ ಅಷ್ಟೇ. ಇಂದಿನ ದಿನಗಳಲ್ಲಿ, ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಎಂಬುದು ಚರ್ಚೆಯ ವಿಷಯವಾಗಿದೆ. ಸಣ್ಣ, ದಪ್ಪ, ಕಪ್ಪು, ಬಿಳಿ, ಎತ್ತರ, ಕುಳ್ಳ, ಮಿತಿ ಮೀರಿದ ಬೆಳವಣಿಗೆ, ತುಂಬಾ ಪೀಚಾಗಿರುವುದು –ಇಂತಹ ಪದಗಳು ಸಾಮಾನ್ಯ ಮಾತಿನಂತೆ ಬಳಕೆಯಾಗುತ್ತಿವೆ. ಇವು ಮಕ್ಕಳನ್ನು ಅಳೆಯುವ ಮಾನದಂಡ ಆಗುವುದು ಆತಂಕಕಾರಿ ವಿಷಯ. ಇಂಥ ಮಾತುಗಳು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಸಾಮಾನ್ಯವಲ್ಲ.</p><p>ಒಂದು ಕ್ಷಣದ ಟಿಪ್ಪಣಿ, ಒಂದು ನಗೆಚಟಾಕಿ ಅಥವಾ ಯಾರೋ ಮಾಡಿದ ತಮಾಷೆ, ಒಂದು ಮಗುವಿನ ಆತ್ಮಸ್ಥೈರ್ಯವನ್ನು ಮೌನವಾಗಿ ಕುಗ್ಗಿಸಿಬಿಡುತ್ತದೆ. ಅಂದು ತರಗತಿಗಳಲ್ಲಿ ನಡೆದ ಅವಮಾನಗಳು ಹೇಗೆ ಜೀವನಪೂರ್ತಿ ಮನಸ್ಸಿನಲ್ಲಿ ಉಳಿಯುತ್ತಿದ್ದವೋ, ಅದೇ ರೀತಿ ಇಂದು ಡಿಜಿಟಲ್ ಜಗತ್ತಿನಲ್ಲಿ ನಡೆಯುವ ಬಾಡಿ ಶೇಮಿಂಗ್ ಕೂಡ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ವ್ಯತ್ಯಾಸ ಇಷ್ಟೇ– ದೌರ್ಜನ್ಯ ಎಸಗುವವರು ಅಂದು ಕೈಯಲ್ಲಿ ದೊಣ್ಣೆ ಹಿಡಿದಿದ್ದರು, ಇಂದು ಕೀಬೋರ್ಡ್ ಹಿಡಿದಿದ್ದಾರೆ.</p><p>ಮಕ್ಕಳು ತಮ್ಮದೇ ದೇಹವನ್ನು, ತಮ್ಮದೇ ಅಸ್ತಿತ್ವವನ್ನು ತಿರಸ್ಕರಿಸುವ ಹಂತಕ್ಕೆ ತಲಪುವಾಗ, ಅದು ಬರೀ ವೈಯಕ್ತಿಕ ಸಮಸ್ಯೆಯಾಗಿ ಉಳಿಯುವುದಿಲ್ಲ. ಅದು ನಮ್ಮ ಸಮಾಜದ ಸಂವೇದನಾಶೀಲತೆಯ ಕೊರತೆಯ ಪ್ರತಿಬಿಂಬವಾಗುತ್ತದೆ. ದೇಹದ ಬಣ್ಣ, ಆಕಾರ, ಬೆಳವಣಿಗೆ, ಕೂದಲಿನ ಬಣ್ಣ, ಕನ್ನಡಕ, ಹಲ್ಲು –ಇವು ದೇಹ ಬೆಳವಣಿಗೆಯ ಸಹಜ ಭಾಗಗಳು; ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅವು ಮೌಲ್ಯಮಾಪನದ ಮಾನದಂಡಗಳಲ್ಲ. ಆದರೆ ನಾವು ಅರಿವಿಲ್ಲದೆ, ನಗುತ್ತಾ, ತಮಾಷೆ ಮಾಡುತ್ತಾ, ಮಕ್ಕಳ ಮನಸ್ಸಿನಲ್ಲಿ ಹೀನಭಾವನೆಗಳನ್ನು ಬಿತ್ತುತ್ತೇವೆ.</p><p>ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಬದುಕನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸುವ ಜವಾಬ್ದಾರಿ ತಾಯ್ತಂದೆ ಮತ್ತು ಶಿಕ್ಷಕರ ಮೇಲಷ್ಟೇ ಇಲ್ಲ, ಸಮಾಜದ ಮೇಲು ಇದೆ. ಕುಟುಂಬ, ಶಾಲೆ, ಸ್ನೇಹವಲಯ ಮತ್ತು ಸೋಷಿಯಲ್ ಮೀಡಿಯಾ, ಎಲ್ಲವೂ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ. ಯಾರೋ ಎಂದೋ ಮಾಡಿದ ಒಂದು ಅವಮಾನ ಜೀವನವನ್ನೇ ಮಸುಕಾಗಿಸಬಹುದು.</p><p>ನಾವು ಕೈಯಲ್ಲಿ ದೊಣ್ಣೆ ಹಿಡಿಯದೇ ಇರಬಹುದು. ಆದರೆ, ಸಂವೇದನಾಶೀಲರಾಗದೇ ಇದ್ದಾಗ ನಮ್ಮ ಮಾತುಗಳ ಮೂಲಕ ಅದೆಷ್ಟೋ ಮನಸ್ಸುಗಳನ್ನು ಗಾಯಗೊಳಿಸುತ್ತಲೇ ಇರುತ್ತೇವೆ. ಮಕ್ಕಳಿಗೆ ಸುರಕ್ಷಿತ, ಗೌರವಪೂರ್ಣ ಮತ್ತು ಆತ್ಮಸ್ಥೈರ್ಯ ತುಂಬಿದ ಬದುಕನ್ನು ನೀಡಬೇಕೆಂದರೆ, ಬದಲಾವಣೆ ನಮ್ಮ ಮಾತಿನಿಂದಲೇ ಆರಂಭವಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಎಳೆಯ ಮನಸ್ಸುಗಳ ಮೇಲಿನ ಮಾತಿನ ದಾಳಿ ಪರಿಣಾಮ ಘೋರವಾಗಿರುತ್ತದೆ. ಈ ಆಘಾತ ಜೀವನದುದ್ದಕ್ಕೂ ಮಕ್ಕಳ ಮನಸ್ಸನ್ನು ಗಾಯದಂತೆ ಕಾಡಬಹುದು.</blockquote>.<p>ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿಕ್ಷಿಸುವುದು ಸಹಜ ಮತ್ತು ನ್ಯಾಯಸಮ್ಮತವೆಂದು ಸಮಾಜ ಒಪ್ಪಿಕೊಂಡಿದ್ದ ಕಾಲವೊಂದಿತ್ತು. ನಾನು ಓದುತ್ತಿದ್ದ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ, ತಪ್ಪು ಮಾಡಿದ ಮಕ್ಕಳನ್ನು ಬೆತ್ತಲೆ ಮಾಡಿ, ತರಗತಿಯಿಂದ ತರಗತಿಗೆ ಕಳುಹಿಸುವ ಶಿಕ್ಷೆ ಸಾಮಾನ್ಯವಾಗಿತ್ತು. ಪ್ರತಿ ತರಗತಿಗೆ ಅವರು ಕಾಲಿಟ್ಟಾಗ ಉಳಿದ ಮಕ್ಕಳು ಒಕ್ಕೊರಲಿನಲ್ಲಿ ‘ಶೇಮ್... ಶೇಮ್...’ ಎಂದು ಹಾಡುತ್ತಿದ್ದರು. ದೊಣ್ಣೆಯ ಪೆಟ್ಟಿನ ಶಿಕ್ಷೆಯೂ ಸಿಗುತ್ತಿತ್ತು.</p><p>ದೇಹಕ್ಕೆ ಆಗುವ ನೋವು ಕ್ಷಣಿಕವಾಗಿರಬಹುದು. ಆದರೆ, ಮನಸ್ಸಿಗೆ ಆಗುವ ಅವಮಾನ ಮೌನವಾಗಿ ಒಳಗೆ ಇಳಿದು ಬೇರು ಬಿಡುತ್ತಿತ್ತು. ಒಮ್ಮೆ ಈ ರೀತಿಯ ಶಿಕ್ಷೆಗೆ ಒಳಗಾದ ಮಕ್ಕಳು ನಂತರವೂ ಸಹಪಾಠಿಗಳಿಂದ ಪದೇ ಪದೇ ಅವಹೇಳನಕ್ಕೆ ಒಳಗಾಗುತ್ತಿದ್ದರು. ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತಿತ್ತು. ಆ ದೃಷ್ಟಿಯಲ್ಲಿ ಕರುಣೆ ಇರುತ್ತಿರಲಿಲ್ಲ, ತಿರಸ್ಕಾರ ಮತ್ತು ತಮಾಷೆ ಇರುತ್ತಿತ್ತು. ಆ ಅವಮಾನ ಮಗುವಿನ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿತ್ತು.</p><p>ನಾನೊಮ್ಮೆ ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ (ಎನ್ಎಲ್ಪಿ) ಪ್ರಯೋಗಿಸುವ ಒಬ್ಬ ಜೀವನ ಮಾರ್ಗದರ್ಶಕರನ್ನು ಭೇಟಿ ಮಾಡಿದ್ದೆ. ಅವರು ಮನಸ್ಸಿನೊಳಗೆ ಹುದುಗಿಕೊಂಡಿರುವ ಭಯ, ತಪ್ಪುಕಲ್ಪನೆಗಳು ಮತ್ತು ನೋವಿನ ನೆನಪುಗಳನ್ನು ಗುರುತಿಸಿ, ವ್ಯಕ್ತಿಯನ್ನು ಮಾನಸಿಕ ಖಿನ್ನತೆಯಿಂದ ಹೊರತರುವ ಕೆಲಸ ಮಾಡುತ್ತಿದ್ದರು. ಮಾತುಕತೆಯ ನಡುವೆ ಅವರು, ನನ್ನ ಬಳಿ ಬರುವ ನೂರು ಪ್ರಕರಣಗಳಲ್ಲಿ ಶೇ 99ರಷ್ಟು ಜನರ ಸಮಸ್ಯೆಗಳ ಮೂಲವು ಅವರ ಶಾಲಾ ದಿನಗಳಲ್ಲಿಯೇ ಇರುತ್ತದೆ ಎಂದರು. ಕೆಲವರು, ಸ್ನೇಹಿತರು ಅಥವಾ ಸಹಪಾಠಿಗಳಿಂದ ನಿರಂತರ ಅವಮಾನಕ್ಕೆ ಗುರಿಯಾಗಿದ್ದರೆ, ಇನ್ನೂ ಕೆಲವರು ಶಿಕ್ಷಕರಿಂದ ತಾರತಮ್ಯ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿರುತ್ತಾರೆ. ಕೆಲವು ಮಕ್ಕಳು ಚಿಕ್ಕವಯಸ್ಸಿನಲ್ಲೇ ಆತ್ಮಹತ್ಯೆ ಪ್ರಯತ್ನ ಮಾಡಿರುತ್ತಾರೆ.</p><p>ಕಹಿ ಅನುಭವಗಳು ಕಾಲದೊಂದಿಗೆ ಮಾಯವಾಗುವುದಿಲ್ಲ. ವ್ಯಕ್ತಿ ದೊಡ್ಡವನಾದ ಮೇಲೂ, ಅನೈಚ್ಛಿಕವಾಗಿ, ತನ್ನ ಇಂದಿನ ಬದುಕಿನ ಸಂದರ್ಭಗಳಿಗೆ ಹಳೆಯ ಪಾತ್ರಗಳು ಮತ್ತು ನೋವಿನ ಅನುಭವಗಳನ್ನು ಅಳವಡಿಸಿಕೊಳ್ಳುತ್ತಾನೆ. ನಾವು ಇಂದು ಮನೆಯಲ್ಲೋ, ಕಚೇರಿಯಲ್ಲೋ ಅಥವಾ ಸಮಾಜದಲ್ಲೋ ಅದೇ ಪಾತ್ರಗಳನ್ನು ಜೋಡಿಸಿಕೊಳ್ಳುತ್ತೇವೆ. ಆಗ ಬಾಲ್ಯದಲ್ಲಿ ಅನುಭವಿಸಿದ ಅದೇ ಭಯ, ಅದೇ ಒತ್ತಡ, ಅದೇ ಖಿನ್ನತೆ ಮತ್ತೆ ಜೀವಂತವಾಗುತ್ತದೆ. ಪರಿಸ್ಥಿತಿ ಬದಲಾಗಿರಬಹುದು, ಆದರೆ ಮನಸ್ಸಿನ ಪ್ರತಿಕ್ರಿಯೆ ಬದಲಾಗುವುದಿಲ್ಲ.</p><p>ಇಂದು ದೈಹಿಕ ಶಿಕ್ಷೆಗೆ ಶಾಲೆಗಳಲ್ಲಿ ಅವಕಾಶವಿಲ್ಲ. ಹಾಗೆಂದು, ಹಿಂಸೆ ಸಂಪೂರ್ಣವಾಗಿ ನಿಂತಿದೆಯೇ? ರೂಪ ಬದಲಾಗಿದೆ ಅಷ್ಟೇ. ಇಂದಿನ ದಿನಗಳಲ್ಲಿ, ವಿಶೇಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಎಂಬುದು ಚರ್ಚೆಯ ವಿಷಯವಾಗಿದೆ. ಸಣ್ಣ, ದಪ್ಪ, ಕಪ್ಪು, ಬಿಳಿ, ಎತ್ತರ, ಕುಳ್ಳ, ಮಿತಿ ಮೀರಿದ ಬೆಳವಣಿಗೆ, ತುಂಬಾ ಪೀಚಾಗಿರುವುದು –ಇಂತಹ ಪದಗಳು ಸಾಮಾನ್ಯ ಮಾತಿನಂತೆ ಬಳಕೆಯಾಗುತ್ತಿವೆ. ಇವು ಮಕ್ಕಳನ್ನು ಅಳೆಯುವ ಮಾನದಂಡ ಆಗುವುದು ಆತಂಕಕಾರಿ ವಿಷಯ. ಇಂಥ ಮಾತುಗಳು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಸಾಮಾನ್ಯವಲ್ಲ.</p><p>ಒಂದು ಕ್ಷಣದ ಟಿಪ್ಪಣಿ, ಒಂದು ನಗೆಚಟಾಕಿ ಅಥವಾ ಯಾರೋ ಮಾಡಿದ ತಮಾಷೆ, ಒಂದು ಮಗುವಿನ ಆತ್ಮಸ್ಥೈರ್ಯವನ್ನು ಮೌನವಾಗಿ ಕುಗ್ಗಿಸಿಬಿಡುತ್ತದೆ. ಅಂದು ತರಗತಿಗಳಲ್ಲಿ ನಡೆದ ಅವಮಾನಗಳು ಹೇಗೆ ಜೀವನಪೂರ್ತಿ ಮನಸ್ಸಿನಲ್ಲಿ ಉಳಿಯುತ್ತಿದ್ದವೋ, ಅದೇ ರೀತಿ ಇಂದು ಡಿಜಿಟಲ್ ಜಗತ್ತಿನಲ್ಲಿ ನಡೆಯುವ ಬಾಡಿ ಶೇಮಿಂಗ್ ಕೂಡ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ವ್ಯತ್ಯಾಸ ಇಷ್ಟೇ– ದೌರ್ಜನ್ಯ ಎಸಗುವವರು ಅಂದು ಕೈಯಲ್ಲಿ ದೊಣ್ಣೆ ಹಿಡಿದಿದ್ದರು, ಇಂದು ಕೀಬೋರ್ಡ್ ಹಿಡಿದಿದ್ದಾರೆ.</p><p>ಮಕ್ಕಳು ತಮ್ಮದೇ ದೇಹವನ್ನು, ತಮ್ಮದೇ ಅಸ್ತಿತ್ವವನ್ನು ತಿರಸ್ಕರಿಸುವ ಹಂತಕ್ಕೆ ತಲಪುವಾಗ, ಅದು ಬರೀ ವೈಯಕ್ತಿಕ ಸಮಸ್ಯೆಯಾಗಿ ಉಳಿಯುವುದಿಲ್ಲ. ಅದು ನಮ್ಮ ಸಮಾಜದ ಸಂವೇದನಾಶೀಲತೆಯ ಕೊರತೆಯ ಪ್ರತಿಬಿಂಬವಾಗುತ್ತದೆ. ದೇಹದ ಬಣ್ಣ, ಆಕಾರ, ಬೆಳವಣಿಗೆ, ಕೂದಲಿನ ಬಣ್ಣ, ಕನ್ನಡಕ, ಹಲ್ಲು –ಇವು ದೇಹ ಬೆಳವಣಿಗೆಯ ಸಹಜ ಭಾಗಗಳು; ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅವು ಮೌಲ್ಯಮಾಪನದ ಮಾನದಂಡಗಳಲ್ಲ. ಆದರೆ ನಾವು ಅರಿವಿಲ್ಲದೆ, ನಗುತ್ತಾ, ತಮಾಷೆ ಮಾಡುತ್ತಾ, ಮಕ್ಕಳ ಮನಸ್ಸಿನಲ್ಲಿ ಹೀನಭಾವನೆಗಳನ್ನು ಬಿತ್ತುತ್ತೇವೆ.</p><p>ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಬದುಕನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸುವ ಜವಾಬ್ದಾರಿ ತಾಯ್ತಂದೆ ಮತ್ತು ಶಿಕ್ಷಕರ ಮೇಲಷ್ಟೇ ಇಲ್ಲ, ಸಮಾಜದ ಮೇಲು ಇದೆ. ಕುಟುಂಬ, ಶಾಲೆ, ಸ್ನೇಹವಲಯ ಮತ್ತು ಸೋಷಿಯಲ್ ಮೀಡಿಯಾ, ಎಲ್ಲವೂ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ. ಯಾರೋ ಎಂದೋ ಮಾಡಿದ ಒಂದು ಅವಮಾನ ಜೀವನವನ್ನೇ ಮಸುಕಾಗಿಸಬಹುದು.</p><p>ನಾವು ಕೈಯಲ್ಲಿ ದೊಣ್ಣೆ ಹಿಡಿಯದೇ ಇರಬಹುದು. ಆದರೆ, ಸಂವೇದನಾಶೀಲರಾಗದೇ ಇದ್ದಾಗ ನಮ್ಮ ಮಾತುಗಳ ಮೂಲಕ ಅದೆಷ್ಟೋ ಮನಸ್ಸುಗಳನ್ನು ಗಾಯಗೊಳಿಸುತ್ತಲೇ ಇರುತ್ತೇವೆ. ಮಕ್ಕಳಿಗೆ ಸುರಕ್ಷಿತ, ಗೌರವಪೂರ್ಣ ಮತ್ತು ಆತ್ಮಸ್ಥೈರ್ಯ ತುಂಬಿದ ಬದುಕನ್ನು ನೀಡಬೇಕೆಂದರೆ, ಬದಲಾವಣೆ ನಮ್ಮ ಮಾತಿನಿಂದಲೇ ಆರಂಭವಾಗಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>