ನವದೆಹಲಿ, ಜ. 6 (ಯುಎನ್ಐ, ಪಿಟಿಐ)– ರೋಜಾ– ಲಖನೌ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಸತ್ತವರ ಸಂಖ್ಯೆ 51ಕ್ಕೆ ಏರಿದೆ.
ಈ ಘಟನೆಯಲ್ಲಿ 14 ಮಂದಿ ಪ್ರಯಾಣಿ ಕರು ತೀವ್ರವಾಗಿ ಗಾಯಗೊಂಡಿದ್ದು, ಇತರ 48 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮುರಾದಾಬಾದ್ ವಿಭಾಗದ ಕರನಾ ರೈಲು ನಿಲ್ದಾಣದ ಬಳಿ ದುರಂತ ಸಂಭವಿಸಿತು. ಈ ಪ್ರದೇಶದಲ್ಲಿ ದಟ್ಟವಾಗಿ ಮಂಜು ಕವಿದಿದ್ದರಿಂದ ರೈಲ್ವೆ ಸಿಗ್ನಲ್ಗಳನ್ನು ಗ್ರಹಿ ಸಲು ಚಾಲಕನಿಗೆ ಸಾಧ್ಯವಾಗಲಿಲ್ಲ. ಇದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.
ಕೆ.ಪಿ.ಎಸ್. ಗಿಲ್ಗೆ ಶಿಕ್ಷೆ ಕಾಯಂ
ಚಂಡಿಗಢ, ಜ. 6 (ಪಿಟಿಐ)– ಐಎಎಸ್ ಅಧಿಕಾರಿ ರೂಪನ್ ಡಿಯೋಲ್ ಬಜಾಜ್ ಅವರ ಜತೆ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಕೆ.ಪಿ.ಎಸ್. ಗಿಲ್ ಅವರು ಅಸಭ್ಯ ವಾಗಿ ವರ್ತಿಸಿದರು ಎನ್ನಲಾದ ಪ್ರಕರಣವನ್ನು ಚಂಡಿಗಢ ಕೋರ್ಟ್ ಇಂದು ಎತ್ತಿಹಿಡಿಯಿತು.
ಗಿಲ್ ಅವರು ಬಜಾಜ್ ಅವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಈ ಹಿಂದೆ ಕೆಳ ಕೋರ್ಟ್ ನೀಡಿದ್ದ ತೀರ್ಪನ್ನು ಚಂಡಿಗಢ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಅಮರ್ ದತ್ತ ಅವರು ಊರ್ಜಿತಗೊಳಿಸಿದರು.