ಪರ್ಯಾಯ ಸರ್ಕಾರ: ವಿವರಕ್ಕೆ ರಾಷ್ಟ್ರಪತಿ ಸೂಚನೆ
ನವದೆಹಲಿ, ಏ. 21 (ಪಿಟಿಐ): ಪರ್ಯಾಯ ಸರ್ಕಾರ ರಚನೆಯ ಬಗ್ಗೆ ವಿವರ ನೀಡುವಂತೆ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೇಳಿದ್ದಾರೆ.
***
ಮರುಜನ್ಮ ಪಡೆಯುತ್ತಿರುವ 3 ಕೆರೆಗಳು
ಬೆಂಗಳೂರು, ಏ. 21– ಜಲಮಾಲಿನ್ಯದಿಂದ ಕಲುಷಿತಗೊಂಡಿರುವ ನಗರದ ಮೂರು ಕೆರೆಗಳು ಸದ್ಯದಲ್ಲೇ ಮರುಜನ್ಮ ಪಡೆದು ಸ್ವಚ್ಛತೆಯ ತಾಣಗಳಾಗಿ ಕಂಗೊಳಿಸಲಿವೆ.
ಇಂಡೊ–ನಾರ್ವೆ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಈಗಾಗಲೇ ಕೈಗೆತ್ತಿಕೊಂಡಿರುವ ಕೆರೆಗಳ ಸ್ವಚ್ಛತೆ ಕಾಮಗಾರಿಯಿಂದ ಹೆಬ್ಬಾಳ, ಮಡಿವಾಳ ಹಾಗೂ ಅಗರಂ ಕೆರೆಗಳು ಕೆಲವೇ ದಿನಗಳಲ್ಲಿ ಶುದ್ಧ ನೀರನ್ನು ಹೊಂದಲಿವೆ. ಅಷ್ಟೇ ಅಲ್ಲದೆ, ಪ್ರವಾಸಿಗರನ್ನು ಆಕರ್ಷಿಸುವ ಹಲವು ಚಟುವಟಿಕೆಗಳನ್ನು ಒಳಗೊಂಡ ಸುಂದರ ತಾಣಗಳಾಗಿ ಪರಿವರ್ತನೆಯನ್ನು ಕಾಣಲಿವೆ.