ವಿಸರ್ಜನೆಗೆ ಪ್ರತಿಪಕ್ಷಗಳ ಪರಸ್ಪರ ದೂಷಣೆ
ನವದೆಹಲಿ, ಏ. 26 (ಯುಎನ್ಐ, ಪಿಟಿಐ): ವಾಜಪೇಯಿ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಅಪರೂಪದ ‘ಏಕತೆ’ಯನ್ನು ತೋರಿದ ವಿರೋಧ ಪಕ್ಷಗಳು, ಈಗ ಲೋಕಸಭೆ ವಿಸರ್ಜನೆಯ ಹಿನ್ನೆಲೆಯಲ್ಲಿ ಪರಸ್ಪರ ದೂಷಿಸತೊಡಗಿವೆ.
ತಾನು ಪರ್ಯಾಯ ಸರ್ಕಾರ ರಚಿಸಲು ಸಾಧ್ಯವಾಗದ್ದಕ್ಕೆ ಕಾರಣ ಮುಲಾಯಂ ಸಿಂಗ್ ಎಂದು ಕಾಂಗ್ರೆಸ್ ದೂರಿದ್ದರೆ, ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಸಮಾಜವಾದಿ ಪಕ್ಷ, ಆರ್ಎಸ್ಪಿ ಹಾಗೂ ಫಾರ್ವರ್ಡ್ ಬ್ಲಾಕ್ ಕಾರಣ ಎಂದು ಸಿಪಿಎಂ ಮುಖಂಡ ಹರ್ಕಿಷನ್ ಸಿಂಗ್ ಸುರ್ಜಿತ್ ಆರೋಪಿಸಿದ್ದಾರೆ. ಈ ಪಕ್ಷಗಳ ‘ಜನಾಂಗೀಯ’ ನಿಲುವಿನಿಂದಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.