<p><strong>ಏಕಕಾಲದಲ್ಲಿ ಚುನಾವಣೆಗೆ ಪಟೇಲ್ ವಿರೋಧ</strong></p>.<p>ಮೈಸೂರು, ಮೇ 13– ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ತಮ್ಮ ಸರ್ಕಾರ ವಿರೋಧಿಸಿದ್ದು, ಈ ಸಂಬಂಧ ಕಾನೂನು ಮತ್ತು ಸಂಸದೀಯ ಸಚಿವ ಎಂ.ಸಿ. ನಾಣಯ್ಯ ಅವರು ಮುಖ್ಯ ಚುನಾವಣಾ ಕಮಿಷನರ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಸರ್ಕಾರದ ಅಧಿಕಾರದ ಅವಧಿ ಡಿ.16ಕ್ಕೆ ಮುಗಿಯುತ್ತದೆ. ಈ ಅವಧಿಯನ್ನು ಕಡಿತ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವಧಿ ಮುಗಿಯುವ 3 ವಾರಗಳ ಮುಂಚೆ ಚುನಾವಣೆ ನಡೆಸಿದರೆ ಸಾಕು. ಇದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರದ ಜತೆ ಚರ್ಚಿಸದೆ ಚುನಾವಣಾ ಆಯೋಗ ಏಕಾಏಕಿ ದಿನಾಂಕ ನಿಗದಿ ಮಾಡಲಾಗದು ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ವಿಧಾನಸಭೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರುವ ಸಂಬಂಧವಾಗಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು <br>ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದರು.</p>.<p><strong>ದೇವರ ಕಲಶ ಬಿದ್ದು ಗಾಯಗೊಂಡ ಸಿದ್ದರಾಮಯ್ಯ</strong></p>.<p>ಮೈಸೂರು, ಮೇ 13– ಮೈಸೂರು ತಾಲ್ಲೂಕು ಸಿದ್ಧರಾಮನ ಹುಂಡಿಯ ಸಿದ್ಧರಾಮೇಶ್ವರ ದೇವಾಲಯದ ಉತ್ಸವದಲ್ಲಿ ಇಂದು ಭಾಗವಹಿಸಿದ್ದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯ ಮೇಲೆ ಆಕಸ್ಮಿಕವಾಗಿ ದೇವರ ಕಲಶ ಬಿದ್ದದ್ದರಿಂದ ಅವರು ಗಾಯಗೊಂಡರು.</p>.<p>ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ಇಂದು ಸಿದ್ಧರಾಮೇಶ್ವರ ದೇವರ ಪ್ರತಿಷ್ಠಾಪನೆ ನೆರವೇರಿಸುವ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ದೇವರ ಮೆರವಣಿಗೆ ಇತ್ತು. ದೇವರ ಕಲಶ ಹೊರುವವರ ಪಕ್ಕದಲ್ಲೇ ಉಪಮುಖ್ಯಮಂತ್ರಿ ಇದ್ದುದರಿಂದ ಕಲಶ ಜಾರಿ ಅವರ ತಲೆಯ ಮೇಲೆ ಬಿತ್ತು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಏಕಕಾಲದಲ್ಲಿ ಚುನಾವಣೆಗೆ ಪಟೇಲ್ ವಿರೋಧ</strong></p>.<p>ಮೈಸೂರು, ಮೇ 13– ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ತಮ್ಮ ಸರ್ಕಾರ ವಿರೋಧಿಸಿದ್ದು, ಈ ಸಂಬಂಧ ಕಾನೂನು ಮತ್ತು ಸಂಸದೀಯ ಸಚಿವ ಎಂ.ಸಿ. ನಾಣಯ್ಯ ಅವರು ಮುಖ್ಯ ಚುನಾವಣಾ ಕಮಿಷನರ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಸರ್ಕಾರದ ಅಧಿಕಾರದ ಅವಧಿ ಡಿ.16ಕ್ಕೆ ಮುಗಿಯುತ್ತದೆ. ಈ ಅವಧಿಯನ್ನು ಕಡಿತ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವಧಿ ಮುಗಿಯುವ 3 ವಾರಗಳ ಮುಂಚೆ ಚುನಾವಣೆ ನಡೆಸಿದರೆ ಸಾಕು. ಇದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರದ ಜತೆ ಚರ್ಚಿಸದೆ ಚುನಾವಣಾ ಆಯೋಗ ಏಕಾಏಕಿ ದಿನಾಂಕ ನಿಗದಿ ಮಾಡಲಾಗದು ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p>ವಿಧಾನಸಭೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರುವ ಸಂಬಂಧವಾಗಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು <br>ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದರು.</p>.<p><strong>ದೇವರ ಕಲಶ ಬಿದ್ದು ಗಾಯಗೊಂಡ ಸಿದ್ದರಾಮಯ್ಯ</strong></p>.<p>ಮೈಸೂರು, ಮೇ 13– ಮೈಸೂರು ತಾಲ್ಲೂಕು ಸಿದ್ಧರಾಮನ ಹುಂಡಿಯ ಸಿದ್ಧರಾಮೇಶ್ವರ ದೇವಾಲಯದ ಉತ್ಸವದಲ್ಲಿ ಇಂದು ಭಾಗವಹಿಸಿದ್ದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯ ಮೇಲೆ ಆಕಸ್ಮಿಕವಾಗಿ ದೇವರ ಕಲಶ ಬಿದ್ದದ್ದರಿಂದ ಅವರು ಗಾಯಗೊಂಡರು.</p>.<p>ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ಇಂದು ಸಿದ್ಧರಾಮೇಶ್ವರ ದೇವರ ಪ್ರತಿಷ್ಠಾಪನೆ ನೆರವೇರಿಸುವ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ದೇವರ ಮೆರವಣಿಗೆ ಇತ್ತು. ದೇವರ ಕಲಶ ಹೊರುವವರ ಪಕ್ಕದಲ್ಲೇ ಉಪಮುಖ್ಯಮಂತ್ರಿ ಇದ್ದುದರಿಂದ ಕಲಶ ಜಾರಿ ಅವರ ತಲೆಯ ಮೇಲೆ ಬಿತ್ತು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>