<p><strong>ಸೇನೆ– ಅತಿಕ್ರಮಣಕಾರರ ವಾಪಸಿಗೆ ಪಾಕ್ ಒಪ್ಪಿಗೆ</strong></p><p><strong>ವಾಷಿಂಗ್ಟನ್, ಜುಲೈ 5 (ಪಿಟಿಐ)–</strong> ಕಾರ್ಗಿಲ್ನಿಂದ ತನ್ನ ಸೇನೆ ಹಾಗೂ ಅತಿಕ್ರಮಣಕಾರರನ್ನು ವಾಪಸ್ ಕರೆಸಿಕೊಳ್ಳಲು ಹಾಗೂ 1972ರ ಶಿಮ್ಲಾ ಒಪ್ಪಂದದಂತೆ ವಾಸ್ತವ ಹತೋಟಿ ರೇಖೆಯನ್ನು ಗೌರವಿಸಲು ಪಾಕಿಸ್ತಾನ ಸಮ್ಮತಿಸುವುದರೊಂದಿಗೆ ಜಮ್ಮು–ಕಾಶ್ಮೀರದ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕೊನೆಯಾಗುವ ಕಾಲ ಹತ್ತಿರವಾಗಿದೆ.</p><p>ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾನುವಾರ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಭೇಟಿ ಮಾಡಿ ಮೂರು ಗಂಟೆ ನಡೆಸಿದ ಮಾತುಕತೆ ಸಮಯದಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವ, ವಾಸ್ತವ ಹತೋಟಿ ರೇಖೆಯನ್ನು ಗೌರವಿಸುವ ಸುಳಿವು ನೀಡಿದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.</p><p>***</p><p><strong>ಎಡದಂಡೆ ನಾಲೆ: ಆಗಸ್ಟ್ನಲ್ಲಿ ನೀರು ಬಿಡುಗಡೆ ಭರವಸೆ</strong></p><p><strong>ಬೆಂಗಳೂರು, ಜುಲೈ 5–</strong> ಪದೇ ಪದೇ ಬಿರುಕು ಬಿಟ್ಟು ರೈತರಿಗೆ ತೊಂದರೆಯಾಗುತ್ತಿರುವ ತುಂಗಭದ್ರಾ ಎಡದಂಡೆ ನಾಲೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ಆಗಸ್ಟ್ 1ರಂದು ನಾಲೆಯಲ್ಲಿ ನೀರು ಬಿಡಲಾಗುತ್ತದೆ ಎಂದು ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ವಿಧಾನಸಭೆಯಲ್ಲಿ ಇಂದು ಆಶ್ವಾಸನೆ ನೀಡಿದರು.</p><p>ಸುಮಾರು ರೂ. 90 ಕೋಟಿ ಅಂದಾಜು ವೆಚ್ಚದಲ್ಲಿ ನಾಲೆಯ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇನೆ– ಅತಿಕ್ರಮಣಕಾರರ ವಾಪಸಿಗೆ ಪಾಕ್ ಒಪ್ಪಿಗೆ</strong></p><p><strong>ವಾಷಿಂಗ್ಟನ್, ಜುಲೈ 5 (ಪಿಟಿಐ)–</strong> ಕಾರ್ಗಿಲ್ನಿಂದ ತನ್ನ ಸೇನೆ ಹಾಗೂ ಅತಿಕ್ರಮಣಕಾರರನ್ನು ವಾಪಸ್ ಕರೆಸಿಕೊಳ್ಳಲು ಹಾಗೂ 1972ರ ಶಿಮ್ಲಾ ಒಪ್ಪಂದದಂತೆ ವಾಸ್ತವ ಹತೋಟಿ ರೇಖೆಯನ್ನು ಗೌರವಿಸಲು ಪಾಕಿಸ್ತಾನ ಸಮ್ಮತಿಸುವುದರೊಂದಿಗೆ ಜಮ್ಮು–ಕಾಶ್ಮೀರದ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸಂಘರ್ಷ ಕೊನೆಯಾಗುವ ಕಾಲ ಹತ್ತಿರವಾಗಿದೆ.</p><p>ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾನುವಾರ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನು ಭೇಟಿ ಮಾಡಿ ಮೂರು ಗಂಟೆ ನಡೆಸಿದ ಮಾತುಕತೆ ಸಮಯದಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವ, ವಾಸ್ತವ ಹತೋಟಿ ರೇಖೆಯನ್ನು ಗೌರವಿಸುವ ಸುಳಿವು ನೀಡಿದರು ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.</p><p>***</p><p><strong>ಎಡದಂಡೆ ನಾಲೆ: ಆಗಸ್ಟ್ನಲ್ಲಿ ನೀರು ಬಿಡುಗಡೆ ಭರವಸೆ</strong></p><p><strong>ಬೆಂಗಳೂರು, ಜುಲೈ 5–</strong> ಪದೇ ಪದೇ ಬಿರುಕು ಬಿಟ್ಟು ರೈತರಿಗೆ ತೊಂದರೆಯಾಗುತ್ತಿರುವ ತುಂಗಭದ್ರಾ ಎಡದಂಡೆ ನಾಲೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ಆಗಸ್ಟ್ 1ರಂದು ನಾಲೆಯಲ್ಲಿ ನೀರು ಬಿಡಲಾಗುತ್ತದೆ ಎಂದು ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ವಿಧಾನಸಭೆಯಲ್ಲಿ ಇಂದು ಆಶ್ವಾಸನೆ ನೀಡಿದರು.</p><p>ಸುಮಾರು ರೂ. 90 ಕೋಟಿ ಅಂದಾಜು ವೆಚ್ಚದಲ್ಲಿ ನಾಲೆಯ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>