<p><strong>ಜಲನೀತಿ: ಕೇಂದ್ರ ಸೂತ್ರಕ್ಕೆ ತಮಿಳುನಾಡು ತಿರಸ್ಕಾರ</strong></p>.<p>ಮದ್ರಾಸ್, ಫೆ. 3 (ಪಿಟಿಐ)– ರಾಷ್ಟ್ರೀಯ ಜಲನೀತಿ ರೂಪಿಸುವ ಸಲುವಾಗಿ ಕೇಂದ್ರ ಜಲ ಆಯೋಗವು ಕಳುಹಿಸಿರುವ ಕರಡು ಮಾರ್ಗದರ್ಶಿ ಸೂತ್ರಗಳನ್ನು ತಮಿಳುನಾಡು ತಿರಸ್ಕರಿಸಿದೆ. ನದೀತೀರದ ರಾಜ್ಯಗಳ ಹಕ್ಕನ್ನು ನಿರಾಕರಿಸಬಾರದು ಎಂದು ಆಗ್ರಹಪಡಿಸಿದೆ.</p>.<p>ರಾಷ್ಟ್ರೀಯ ಜಲನೀತಿಗೆ ಮಾರ್ಗದರ್ಶಿ ಸೂತ್ರಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ಕೈಬಿಡುವಂತೆ ಜಯಲಲಿತಾ ಅವರು ಇಂದು ಕರೆದಿದ್ದ ಸರ್ವಪಕ್ಷ ಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.</p>.<p><strong>ನಾಣಯ್ಯ ಸಮಿತಿ ಶಿಫಾರಸಿಗೆ ಸರ್ವಪಕ್ಷ ಒಪ್ಪಿಗೆ</strong></p>.<p>ಬೆಂಗಳೂರು, ಫೆ. 3– ಭೂಮಿಯ ಗುಣ, ಆಯಾ ಪ್ರದೇಶದಲ್ಲಿ ಕಾಲಕಾಲಕ್ಕೆ ಎದುರಾಗುವ ಬರಗಾಲದ ಪರಿಸ್ಥಿತಿ, ಕೃಷಿಕ್ಷೇತ್ರ ಮತ್ತು ಬೆಳೆ ಸ್ಥಿತಿ, ಆರ್ಥಿಕ ಹಿನ್ನಡೆಯಂಥ ಅಂಶಗಳನ್ನು ರಾಷ್ಟ್ರೀಯ ಜಲನೀತಿಯನ್ನು ಸಿದ್ಧಪಡಿಸುವಾಗ ಗಂಭೀರವಾಗಿ ಪರಿಗಣಿಸಬೇಕು ಎಂಬ ಸಲಹೆಯನ್ನು ಕರ್ನಾಟಕ ಮಾಡಿದೆ.</p>.<p><strong>ದೇವನೂರ, ಗೀತಾ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ</strong></p>.<p>ಬೆಂಗಳೂರು, ಫೆ. 3– ಲೇಖಕ ದೇವನೂರ ಮಹಾದೇವ, ಭಾಷಾ ವಿಜ್ಞಾನದ ಪ್ರಾಧ್ಯಾಪಕ ಡಾ. ಎಚ್.ಎಸ್.ಬಿಳಿಗಿರಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ–ಕನ್ನಡ ನಿಘಂಟಿನ ಪ್ರಧಾನ ಸಂಪಾದಕ ಪ್ರೊ. ಎನ್.ಬಸವಾರಾಧ್ಯ, ಲೇಖಕಿ ಗೀತಾ ನಾಗಭೂಷಣ ಹಾಗೂ ಕವಿ, ವಿಮರ್ಶಕ, ನಾಟಕಕಾರ, ಅನುವಾದಕ ಬಿ.ಎ. ಸನದಿ ಅವರಿಗೆ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪುರಸ್ಕರಿಸಿ ಕನ್ನಡ ಸಾಹಿತ್ಯ ಅಕಾಡೆಮಿ 1995ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.</p>.<p>ಕನ್ನಡ ಸಾಹಿತ್ಯದ 16 ಪ್ರಕಾರಗಳ ಒಟ್ಟು 18 ಲೇಖಕರ ಉತ್ತಮ ಕೃತಿಗಳಿಗಾಗಿ 1994ನೇ ಸಾಲಿನ ಪ್ರಶಸ್ತಿಗಳನ್ನು ಕೂಡ ಅಕಾಡೆಮಿ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಲನೀತಿ: ಕೇಂದ್ರ ಸೂತ್ರಕ್ಕೆ ತಮಿಳುನಾಡು ತಿರಸ್ಕಾರ</strong></p>.<p>ಮದ್ರಾಸ್, ಫೆ. 3 (ಪಿಟಿಐ)– ರಾಷ್ಟ್ರೀಯ ಜಲನೀತಿ ರೂಪಿಸುವ ಸಲುವಾಗಿ ಕೇಂದ್ರ ಜಲ ಆಯೋಗವು ಕಳುಹಿಸಿರುವ ಕರಡು ಮಾರ್ಗದರ್ಶಿ ಸೂತ್ರಗಳನ್ನು ತಮಿಳುನಾಡು ತಿರಸ್ಕರಿಸಿದೆ. ನದೀತೀರದ ರಾಜ್ಯಗಳ ಹಕ್ಕನ್ನು ನಿರಾಕರಿಸಬಾರದು ಎಂದು ಆಗ್ರಹಪಡಿಸಿದೆ.</p>.<p>ರಾಷ್ಟ್ರೀಯ ಜಲನೀತಿಗೆ ಮಾರ್ಗದರ್ಶಿ ಸೂತ್ರಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ಕೈಬಿಡುವಂತೆ ಜಯಲಲಿತಾ ಅವರು ಇಂದು ಕರೆದಿದ್ದ ಸರ್ವಪಕ್ಷ ಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.</p>.<p><strong>ನಾಣಯ್ಯ ಸಮಿತಿ ಶಿಫಾರಸಿಗೆ ಸರ್ವಪಕ್ಷ ಒಪ್ಪಿಗೆ</strong></p>.<p>ಬೆಂಗಳೂರು, ಫೆ. 3– ಭೂಮಿಯ ಗುಣ, ಆಯಾ ಪ್ರದೇಶದಲ್ಲಿ ಕಾಲಕಾಲಕ್ಕೆ ಎದುರಾಗುವ ಬರಗಾಲದ ಪರಿಸ್ಥಿತಿ, ಕೃಷಿಕ್ಷೇತ್ರ ಮತ್ತು ಬೆಳೆ ಸ್ಥಿತಿ, ಆರ್ಥಿಕ ಹಿನ್ನಡೆಯಂಥ ಅಂಶಗಳನ್ನು ರಾಷ್ಟ್ರೀಯ ಜಲನೀತಿಯನ್ನು ಸಿದ್ಧಪಡಿಸುವಾಗ ಗಂಭೀರವಾಗಿ ಪರಿಗಣಿಸಬೇಕು ಎಂಬ ಸಲಹೆಯನ್ನು ಕರ್ನಾಟಕ ಮಾಡಿದೆ.</p>.<p><strong>ದೇವನೂರ, ಗೀತಾ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ</strong></p>.<p>ಬೆಂಗಳೂರು, ಫೆ. 3– ಲೇಖಕ ದೇವನೂರ ಮಹಾದೇವ, ಭಾಷಾ ವಿಜ್ಞಾನದ ಪ್ರಾಧ್ಯಾಪಕ ಡಾ. ಎಚ್.ಎಸ್.ಬಿಳಿಗಿರಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ–ಕನ್ನಡ ನಿಘಂಟಿನ ಪ್ರಧಾನ ಸಂಪಾದಕ ಪ್ರೊ. ಎನ್.ಬಸವಾರಾಧ್ಯ, ಲೇಖಕಿ ಗೀತಾ ನಾಗಭೂಷಣ ಹಾಗೂ ಕವಿ, ವಿಮರ್ಶಕ, ನಾಟಕಕಾರ, ಅನುವಾದಕ ಬಿ.ಎ. ಸನದಿ ಅವರಿಗೆ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪುರಸ್ಕರಿಸಿ ಕನ್ನಡ ಸಾಹಿತ್ಯ ಅಕಾಡೆಮಿ 1995ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.</p>.<p>ಕನ್ನಡ ಸಾಹಿತ್ಯದ 16 ಪ್ರಕಾರಗಳ ಒಟ್ಟು 18 ಲೇಖಕರ ಉತ್ತಮ ಕೃತಿಗಳಿಗಾಗಿ 1994ನೇ ಸಾಲಿನ ಪ್ರಶಸ್ತಿಗಳನ್ನು ಕೂಡ ಅಕಾಡೆಮಿ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>