ಬೆಂಗಳೂರು, ಫೆ. 3– ಲೇಖಕ ದೇವನೂರ ಮಹಾದೇವ, ಭಾಷಾ ವಿಜ್ಞಾನದ ಪ್ರಾಧ್ಯಾಪಕ ಡಾ. ಎಚ್.ಎಸ್.ಬಿಳಿಗಿರಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ–ಕನ್ನಡ ನಿಘಂಟಿನ ಪ್ರಧಾನ ಸಂಪಾದಕ ಪ್ರೊ. ಎನ್.ಬಸವಾರಾಧ್ಯ, ಲೇಖಕಿ ಗೀತಾ ನಾಗಭೂಷಣ ಹಾಗೂ ಕವಿ, ವಿಮರ್ಶಕ, ನಾಟಕಕಾರ, ಅನುವಾದಕ ಬಿ.ಎ. ಸನದಿ ಅವರಿಗೆ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪುರಸ್ಕರಿಸಿ ಕನ್ನಡ ಸಾಹಿತ್ಯ ಅಕಾಡೆಮಿ 1995ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿದೆ.