ಎಪಿಎಂಸಿ ಪೂರ್ಣ ಬಂದ್ ಬೆಂಗಳೂರು, ಜುಲೈ 2– ಈಗಾಗಲೇ ಏರಿಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಶೇ 2ರಿಂದ ಶೇ 1ಕ್ಕೆ ಇಳಿಸುವವರೆಗೆ ವ್ಯಾಪಾರ ಸ್ಥಗಿತಗೊಳಿಸುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಜಂಟಿ ಕ್ರಿಯಾ ಸಮಿತಿ ಬಿಗಿ ನಿಲುವು ತಾಳುವುದರೊಂದಿಗೆ ರಾಜ್ಯದ ನಿಯಂತ್ರಿತ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಸದ್ಯ ಪುನರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ.
ಸರ್ಕಾರ ಅಭದ್ರ: ಎಚ್ಚರಿಕೆ ಹುಬ್ಬಳ್ಳಿ, ಜುಲೈ 2– ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಂದ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರ ಅಭದ್ರವಾಗಿದೆ, ಇಂತಹವರ ವಿರುದ್ಧ ಪಟೇಲರು ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಜನತಾದಳದಿಂದ ಉಚ್ಚಾಟನೆ ಗೊಂಡಿರುವ ರಾಮಕೃಷ್ಣ ಹೆಗಡೆ ಹೇಳಿದ್ದಾರೆ.