ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ಕಾಂಗ್ರೆಸ್ ಪಕ್ಷವು ಗಂಭೀರ ವಾಗಿ ಪರಿಗಣಿಸಿದ್ದು, ಹಿರಿಯ ನಾಯಕ ಹಾಗೂ ರಾವ್ ಅವರ ಅತ್ಯಂತ ನಿಕಟವರ್ತಿಯಾಗಿರುವ ಪ್ರಣವ್ ಮುಖರ್ಜಿ, ಮತಂಗ್ ಸಿಂಗ್, ಮಾಜಿ ಸಚಿವರಾದ ಎಸ್.ಬಿ. ಚವ್ಹಾಣ್ ಹಾಗೂ ಸುರೇಶ್ ಕಲ್ಮಾಡಿ ಅವರ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ ಕದ್ದಾಲಿಕೆ ವಿವಾದ ಕುರಿತು ಚರ್ಚಿಸಿತು.