ಮೈಸೂರು ಭೂಹಗರಣ:ಬೊಕ್ಕಸಕ್ಕೆ ₹ 60 ಕೋಟಿ ನಷ್ಟ
ಬೆಂಗಳೂರು, ಸೆ. 21– ಮೈಸೂರು ನಗರದ ಸುತ್ತಮುತ್ತಲಿನ ಜಮೀನನ್ನುನಿವೇಶನಗಳನ್ನಾಗಿ ಮಾಡಿ ವಿವಿಧ ಹಂತಗಳಲ್ಲಿ ನಡೆಸಿರುವ ಅವ್ಯವಹಾರಗಳಿಂದಾಗಿ ಸರ್ಕಾರಕ್ಕೆ ಸುಮಾರು 60 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ದು ಇದರ ಬಗ್ಗೆ ತೀವ್ರ ತನಿಖೆ ನಡೆದಿದ್ದು, ಈಗಾಗಲೇ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಕಂದಾಯ ಸಚಿವ ರಮೇಶ್ ಸಿ. ಜಿಗಜಿಣಗಿ ಅವರು ಇಂದು ಇಲ್ಲಿ ತಿಳಿಸಿದರು.