ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಸಭೆ ಮತ್ತು ಜನತಾದಳದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಸಂಯುಕ್ತ ರಂಗದ ಅಧ್ಯಕ್ಷ ಸ್ಥಾನವನ್ನು ಗೌಡರು ತೆರವು ಮಾಡಬೇಕೆಂದು ಬಂದ, ಸ್ಪಷ್ಟ ಅಭಿಪ್ರಾಯವು ರಾತ್ರಿ ನಡೆದ ರಂಗದ ಚಾಲನಾ ಸಮಿತಿ ಸಭೆಯಲ್ಲೂ ಪ್ರತಿಧ್ವನಿಸಿತು. ಕೊನೆಗೆ ಗೌಡರು ಸಂಯುಕ್ತ ರಂಗಕ್ಕೆ ಅನಿವಾರ್ಯವೆನಿಸಿದರೆ ತಾವು ತಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ಇಂಗಿತವನ್ನು ವ್ಯಕ್ತಪಡಿಸಿದರೆಂದು ರಂಗದ ವಕ್ತಾರ ಎಸ್. ಜೈಪಾಲ್ ರೆಡ್ಡಿ ವರದಿಗಾರರಿಗೆ ತಿಳಿಸಿದರು.