ನವದೆಹಲಿ, ಮೇ 7 (ಯುಎನ್ಐ)– ಯಾವುದೇ ಬೆಲೆ ತೆತ್ತಾದರೂ ತೆರಿಗೆಗಳ್ಳತನವನ್ನು ತಡೆಗಟ್ಟುವುದಾಗಿ ಇಂದು ಘೋಷಿಸಿದ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒಟ್ಟು 111 ಕೋಟಿ ರೂಪಾಯಿ ಮೊತ್ತದ, ಹಲವಾರು ವಸ್ತುಗಳ ಮೇಲಿನ ಆಮದು ಸುಂಕವನ್ನೂ ಎಕ್ಸೈಸ್ ಕರವನ್ನೂ ರಿಯಾಯಿತಿಗಳನ್ನು ಪ್ರಕಟಿಸಿದರು.
1997–98ನೇ ಸಾಲಿನ ಆಯವ್ಯಯ ಮುಂಗಡಪತ್ರಕ್ಕೆ ಅಂಗೀಕಾರ ಬಯಸುವ ಹಣಕಾಸು ಮಸೂದೆಯನ್ನು ಅವರು ಇಂದು ಲೋಕಸಭೆಯಲ್ಲಿ ಚರ್ಚೆಗೆ ಮಂಡಿಸಿಸುತ್ತ ಈ ರಿಯಾಯಿತಿಗ ಳನ್ನು ಪ್ರಕಟಿಸಿದರು.