<p>ಪಾಕ್ ಕ್ರಿಕೆಟ್ ತಂಡಕ್ಕೆ ರಕ್ಷಣೆ; ಪ್ರಧಾನಿ ಭರವಸೆ</p>.<p>ನವದೆಹಲಿ, ಜ. 15 (ಯುಎನ್ಐ)– ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಹಾಳುಮಾಡಲು ನಡೆಸುವ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲಾಗುವುದು ಎಂದು ಪ್ರಧಾನಿ ಎ.ಬಿ.ವಾಜಪೇಯಿ ಅವರು ಹೇಳಿದ್ದಾರೆ.</p>.<p>ದೆಹಲಿಯ ಫಿರೋಜ್ಶಾ ಕೋಟ್ಲಾ ಮೈದಾನದ ಪಿಚ್ ಅನ್ನು ಅಗೆದು ಹಾಕಿದವರು ‘ಯಾರ ಪರವಾಗಿ ಆಡುತ್ತಿದ್ದಾರೆ?’ ಎಂದು ಕೇಳಿದ ಅವರು, ‘ಕತ್ತಲಲ್ಲಿ ಬಂದು ಅಂಗಣ ಅಗೆಯುವುದು ಧೈರ್ಯದ ಕೆಲಸವೇ’ ಎಂದು ತಮ್ಮ ಅಧಿಕೃತ ನಿವಾಸದಲ್ಲಿ ಕ್ರೀಡಾಳುಗಳ ಒಂದು ತಂಡವನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಶ್ನಿಸಿದರು.</p>.<p>‘ಕ್ರೀಡೆಯಲ್ಲಿ ರಾಜಕೀಯ ಬೇಡ’ ಎಂದ ಅವರು, ‘ಭಾರತ–ಪಾಕಿಸ್ತಾನದ ನಡುವಿನ ಕ್ರೀಡಾ ಬಾಂಧವ್ಯಕ್ಕೆ ಹುಳಿ ಹಿಂಡುವ ಯತ್ನ ಫಲಿಸದು’ ಎಂದರು.</p>.<p>ಶಬರಿಮಲೆ ದುರಂತ<br>ನ್ಯಾಯಾಂಗ ತನಿಖೆ</p>.<p>ತಿರುವನಂತಪುರ, ಜ. 15 (ಪಿಟಿಐ, ಯುಎನ್ಐ)– ಶಬರಿಮಲೆ ಸಮೀಪದ ಪಂಬಾ ಬೆಟ್ಟದಲ್ಲಿ ಗುರುವಾರ ಭೂಕುಸಿತ ಮತ್ತು ಕಾಲ್ತುಳಿತಕ್ಕೆ ಸಿಕ್ಕಿ 52 ಯಾತ್ರಿಕರು ಮೃತಪಟ್ಟ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸರ್ಕಾರ ಇಂದು ಆದೇಶ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾಕ್ ಕ್ರಿಕೆಟ್ ತಂಡಕ್ಕೆ ರಕ್ಷಣೆ; ಪ್ರಧಾನಿ ಭರವಸೆ</p>.<p>ನವದೆಹಲಿ, ಜ. 15 (ಯುಎನ್ಐ)– ಪಾಕಿಸ್ತಾನ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಹಾಳುಮಾಡಲು ನಡೆಸುವ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲಾಗುವುದು ಎಂದು ಪ್ರಧಾನಿ ಎ.ಬಿ.ವಾಜಪೇಯಿ ಅವರು ಹೇಳಿದ್ದಾರೆ.</p>.<p>ದೆಹಲಿಯ ಫಿರೋಜ್ಶಾ ಕೋಟ್ಲಾ ಮೈದಾನದ ಪಿಚ್ ಅನ್ನು ಅಗೆದು ಹಾಕಿದವರು ‘ಯಾರ ಪರವಾಗಿ ಆಡುತ್ತಿದ್ದಾರೆ?’ ಎಂದು ಕೇಳಿದ ಅವರು, ‘ಕತ್ತಲಲ್ಲಿ ಬಂದು ಅಂಗಣ ಅಗೆಯುವುದು ಧೈರ್ಯದ ಕೆಲಸವೇ’ ಎಂದು ತಮ್ಮ ಅಧಿಕೃತ ನಿವಾಸದಲ್ಲಿ ಕ್ರೀಡಾಳುಗಳ ಒಂದು ತಂಡವನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಶ್ನಿಸಿದರು.</p>.<p>‘ಕ್ರೀಡೆಯಲ್ಲಿ ರಾಜಕೀಯ ಬೇಡ’ ಎಂದ ಅವರು, ‘ಭಾರತ–ಪಾಕಿಸ್ತಾನದ ನಡುವಿನ ಕ್ರೀಡಾ ಬಾಂಧವ್ಯಕ್ಕೆ ಹುಳಿ ಹಿಂಡುವ ಯತ್ನ ಫಲಿಸದು’ ಎಂದರು.</p>.<p>ಶಬರಿಮಲೆ ದುರಂತ<br>ನ್ಯಾಯಾಂಗ ತನಿಖೆ</p>.<p>ತಿರುವನಂತಪುರ, ಜ. 15 (ಪಿಟಿಐ, ಯುಎನ್ಐ)– ಶಬರಿಮಲೆ ಸಮೀಪದ ಪಂಬಾ ಬೆಟ್ಟದಲ್ಲಿ ಗುರುವಾರ ಭೂಕುಸಿತ ಮತ್ತು ಕಾಲ್ತುಳಿತಕ್ಕೆ ಸಿಕ್ಕಿ 52 ಯಾತ್ರಿಕರು ಮೃತಪಟ್ಟ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಕೇರಳ ಸರ್ಕಾರ ಇಂದು ಆದೇಶ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>