<p><strong>ಸಿಯಾಚಿನ್ ವಶಕ್ಕೆ ಪಾಕ್ ಹಠಾತ್ ಯತ್ನ ವಿಫಲ</strong></p>.<p>ನವದೆಹಲಿ, ಜೂನ್ 28– ಕಾರ್ಗಿಲ್ ಪ್ರದೇಶದ ನಂತರ ಈಗ ಸಿಯಾಚಿನ್ ಕಡೆಗೆ ಕಣ್ಣಿಟ್ಟಿರುವ ಪಾಕಿಸ್ತಾನ ಸೇನೆ, ದಕ್ಷಿಣ ಸಿಯಾಚಿನ್ ಹಿಮಪಾತ ಪ್ರದೇಶದ ಇಳಿಜಾರು ನೆಲವನ್ನು ಆಕ್ರಮಿಸಿಕೊಳ್ಳಲು ನಿನ್ನೆ ನಡೆಸಿದ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.</p>.<p>ಪಾಕಿಸ್ತಾನದ ಸೇನೆಯು ಈ ಪ್ರದೇಶಕ್ಕೆ 26ರಂದು ದಾಳಿ ಇಟ್ಟಿತಾದರೂ ಎತ್ತರದ ಪರ್ವತ ಶಿಖರದಲ್ಲಿ ಸಮರ ನಡೆಸಲು ವಿಶೇಷ ತರಬೇತಿ ಹೊಂದಿರುವ ಭಾರತೀಯ ಕಮಾಂಡೊಗಳು ಪ್ರತಿದಾಳಿ ನಡೆಸಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದರು.</p>.<p><strong>ಪ್ರಾಥಮಿಕ ಶಿಕ್ಷಕರ ಪ್ರತಿಭಟನೆ</strong></p>.<p>ಬೆಂಗಳೂರು, ಜೂನ್ 28– ಐದನೇ ವೇತನ ಆಯೋಗದ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.</p>.<p>ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಚಿಕ್ಕಲಾಲ್ಬಾಗ್ನಿಂದ ಮೆರವಣಿಗೆಯಲ್ಲಿ ಹೊರಟ ಹಲವು ಹತ್ತು ಸಾವಿರ ಸಂಖ್ಯೆಯ ಶಿಕ್ಷಕರು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಸಭೆ ಸೇರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಯಾಚಿನ್ ವಶಕ್ಕೆ ಪಾಕ್ ಹಠಾತ್ ಯತ್ನ ವಿಫಲ</strong></p>.<p>ನವದೆಹಲಿ, ಜೂನ್ 28– ಕಾರ್ಗಿಲ್ ಪ್ರದೇಶದ ನಂತರ ಈಗ ಸಿಯಾಚಿನ್ ಕಡೆಗೆ ಕಣ್ಣಿಟ್ಟಿರುವ ಪಾಕಿಸ್ತಾನ ಸೇನೆ, ದಕ್ಷಿಣ ಸಿಯಾಚಿನ್ ಹಿಮಪಾತ ಪ್ರದೇಶದ ಇಳಿಜಾರು ನೆಲವನ್ನು ಆಕ್ರಮಿಸಿಕೊಳ್ಳಲು ನಿನ್ನೆ ನಡೆಸಿದ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.</p>.<p>ಪಾಕಿಸ್ತಾನದ ಸೇನೆಯು ಈ ಪ್ರದೇಶಕ್ಕೆ 26ರಂದು ದಾಳಿ ಇಟ್ಟಿತಾದರೂ ಎತ್ತರದ ಪರ್ವತ ಶಿಖರದಲ್ಲಿ ಸಮರ ನಡೆಸಲು ವಿಶೇಷ ತರಬೇತಿ ಹೊಂದಿರುವ ಭಾರತೀಯ ಕಮಾಂಡೊಗಳು ಪ್ರತಿದಾಳಿ ನಡೆಸಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದರು.</p>.<p><strong>ಪ್ರಾಥಮಿಕ ಶಿಕ್ಷಕರ ಪ್ರತಿಭಟನೆ</strong></p>.<p>ಬೆಂಗಳೂರು, ಜೂನ್ 28– ಐದನೇ ವೇತನ ಆಯೋಗದ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.</p>.<p>ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಚಿಕ್ಕಲಾಲ್ಬಾಗ್ನಿಂದ ಮೆರವಣಿಗೆಯಲ್ಲಿ ಹೊರಟ ಹಲವು ಹತ್ತು ಸಾವಿರ ಸಂಖ್ಯೆಯ ಶಿಕ್ಷಕರು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಸಭೆ ಸೇರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>