<p><strong>ರಾಜೀವ್ ಹತ್ಯೆ ಸಂಚು: ಕರುಣಾನಿಧಿ ಹೆಸರು ಕೈಬಿಡಲು ಕೇಂದ್ರ ನಿರ್ಧಾರ</strong></p><p>ಚೆನ್ನೈ, ಆಗಸ್ಟ್ 24– ಜೈನ್ ಆಯೋಗದ ಅಂತಿಮ ವರದಿಯ ಸಂಬಂಧ ಸರ್ಕಾರ ಪ್ರಕಟಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಹೆಸರು ಅಚಾತುರ್ಯದಿಂದಾಗಿ ಸೇರ್ಪಡೆ ಆಗಿರುವುದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಗೃಹ ಸಚಿವ ಎಲ್.ಕೆ. ಅಡ್ವಾಣಿ ತಿಳಿಸಿದ್ದಾರೆ.</p><p>ಅಡ್ವಾಣಿ ಅವರ ಈ ಬಗೆಯ ಹೇಳಿಕೆಯಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ವಿರಸ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಕಂಡುಬಂದಿವೆ.</p><p>ಕೇಂದ್ರದ ಮಾಜಿ ಸಚಿವ ಮತ್ತು ಡಿಎಂಕೆ ಸಂಸದೀಯ ಪಕ್ಷದ ನಾಯಕ ಮುರಸೋಳಿ ಮಾರನ್ ಅವರಿಗೆ ಬರೆದ ಪತ್ರದಲ್ಲಿ ಗೃಹ ಸಚಿವರು ಈ ‘ಪ್ರಮಾದ’ವನ್ನು ಒಪ್ಪಿಕೊಂಡಿದ್ದಾರೆ. ಅಡ್ವಾಣಿ ಅವರ ಪತ್ರದ ಪ್ರತಿಗಳನ್ನು ಮುರಸೋಳಿ ಮಾರನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಬಿಡುಗಡೆ ಮಾಡಿದರು.</p><p><strong>ಹೊಸೂರು ಕಳ್ಳಬಟ್ಟಿ ದುರಂತ ಸತ್ತವರ ಸಂಖ್ಯೆ 54ಕ್ಕೆ ಏರಿಕೆ</strong></p><p>ಚೆನ್ನೈ, ಆಗಸ್ಟ್ 24 (ಪಿಟಿಐ, ಯುಎನ್ಐ)– ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನಲ್ಲಿ ಶನಿವಾರ ಕಳ್ಳಬಟ್ಟಿ ಸೇವಿಸಿದ್ದರಿಂದ ಸತ್ತವರ ಸಂಖ್ಯೆ ಈಗ 54ಕ್ಕೆ ಏರಿದೆ ಎಂದು ಇಲ್ಲಿನ ಶಾಸಕ<br>ಬಿ. ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.</p><p>ಕಳ್ಳಬಟ್ಟಿ ಸೇವನೆಯಿಂದ ಅಸ್ವಸ್ಥರಾಗಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಹೊಸೂರು ಮತ್ತು ಕೃಷ್ಣಗಿರಿ ಆಸ್ಪತ್ರೆಗಳಲ್ಲಿ ಸುಮಾರು 125 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜೀವ್ ಹತ್ಯೆ ಸಂಚು: ಕರುಣಾನಿಧಿ ಹೆಸರು ಕೈಬಿಡಲು ಕೇಂದ್ರ ನಿರ್ಧಾರ</strong></p><p>ಚೆನ್ನೈ, ಆಗಸ್ಟ್ 24– ಜೈನ್ ಆಯೋಗದ ಅಂತಿಮ ವರದಿಯ ಸಂಬಂಧ ಸರ್ಕಾರ ಪ್ರಕಟಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಹೆಸರು ಅಚಾತುರ್ಯದಿಂದಾಗಿ ಸೇರ್ಪಡೆ ಆಗಿರುವುದನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಗೃಹ ಸಚಿವ ಎಲ್.ಕೆ. ಅಡ್ವಾಣಿ ತಿಳಿಸಿದ್ದಾರೆ.</p><p>ಅಡ್ವಾಣಿ ಅವರ ಈ ಬಗೆಯ ಹೇಳಿಕೆಯಿಂದಾಗಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ವಿರಸ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಕಂಡುಬಂದಿವೆ.</p><p>ಕೇಂದ್ರದ ಮಾಜಿ ಸಚಿವ ಮತ್ತು ಡಿಎಂಕೆ ಸಂಸದೀಯ ಪಕ್ಷದ ನಾಯಕ ಮುರಸೋಳಿ ಮಾರನ್ ಅವರಿಗೆ ಬರೆದ ಪತ್ರದಲ್ಲಿ ಗೃಹ ಸಚಿವರು ಈ ‘ಪ್ರಮಾದ’ವನ್ನು ಒಪ್ಪಿಕೊಂಡಿದ್ದಾರೆ. ಅಡ್ವಾಣಿ ಅವರ ಪತ್ರದ ಪ್ರತಿಗಳನ್ನು ಮುರಸೋಳಿ ಮಾರನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಬಿಡುಗಡೆ ಮಾಡಿದರು.</p><p><strong>ಹೊಸೂರು ಕಳ್ಳಬಟ್ಟಿ ದುರಂತ ಸತ್ತವರ ಸಂಖ್ಯೆ 54ಕ್ಕೆ ಏರಿಕೆ</strong></p><p>ಚೆನ್ನೈ, ಆಗಸ್ಟ್ 24 (ಪಿಟಿಐ, ಯುಎನ್ಐ)– ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನಲ್ಲಿ ಶನಿವಾರ ಕಳ್ಳಬಟ್ಟಿ ಸೇವಿಸಿದ್ದರಿಂದ ಸತ್ತವರ ಸಂಖ್ಯೆ ಈಗ 54ಕ್ಕೆ ಏರಿದೆ ಎಂದು ಇಲ್ಲಿನ ಶಾಸಕ<br>ಬಿ. ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.</p><p>ಕಳ್ಳಬಟ್ಟಿ ಸೇವನೆಯಿಂದ ಅಸ್ವಸ್ಥರಾಗಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಹೊಸೂರು ಮತ್ತು ಕೃಷ್ಣಗಿರಿ ಆಸ್ಪತ್ರೆಗಳಲ್ಲಿ ಸುಮಾರು 125 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>