<p><strong>ಮತಾಂತರ: ರಾಷ್ಟ್ರೀಯ ಚರ್ಚೆಗೆ ಪ್ರಧಾನಿ ವಾಜಪೇಯಿ ಸಲಹೆ </strong></p><p>ಅಹ್ವಾ (ದಾಂಗ್ ಜಿಲ್ಲೆ), ಜ. 10- ಪ್ರಧಾನಿ ಎ.ಬಿ.ವಾಜಪೇಯಿ ಅವರು ಇಂದು ದೇಶದ ಎಲ್ಲ ಕೋಮಿನ ಜನರಿಗೂ ಸಂಪೂರ್ಣ ರಕ್ಷಣೆಯ ಭರವಸೆಯನ್ನು ನೀಡಿದರಲ್ಲದೆ ಮತಾಂತರದ ವಿಷಯವಾಗಿ ರಾಷ್ಟ್ರೀಯ ಚರ್ಚೆ ನಡೆಯಬೇಕು ಎಂದು ಕರೆ ನೀಡಿದರು.</p><p>ಕೋಮು ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದರು.</p><p>ಈ ಜಿಲ್ಲೆಯಲ್ಲಿ ಹಿಂದೂಗಳು ಹಾಗೂ ಕ್ರೈಸ್ತರ ನಡುವೆ ಘರ್ಷಣೆ ನಡೆದ ಕೆಲವು ಸ್ಥಳಗಳ ಭೇಟಿಯ ನಂತರ ಇಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ದೇಶದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲಾಗುವುದು<br>ಎಂದು ಭರವಸೆ ನೀಡಿದರು.</p><p>‘ಯಾವುದೇ ಕೋಮಿನ ಯಾವನೇ ವ್ಯಕ್ತಿ ಅಥವಾ ಸಂಸ್ಥೆಯು ಇನ್ನೊಂದು ಕೋಮಿನವರ ಮೇಲೆ ನಡೆಸುವ ಹಿಂಸಾಚಾರವನ್ನು ರಾಜ್ಯ ಸರ್ಕಾರಗಳು ಸಹಿಸದೆ ಮಟ್ಟಹಾಕಬೇಕು’ ಎಂದು ಅವರು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತಾಂತರ: ರಾಷ್ಟ್ರೀಯ ಚರ್ಚೆಗೆ ಪ್ರಧಾನಿ ವಾಜಪೇಯಿ ಸಲಹೆ </strong></p><p>ಅಹ್ವಾ (ದಾಂಗ್ ಜಿಲ್ಲೆ), ಜ. 10- ಪ್ರಧಾನಿ ಎ.ಬಿ.ವಾಜಪೇಯಿ ಅವರು ಇಂದು ದೇಶದ ಎಲ್ಲ ಕೋಮಿನ ಜನರಿಗೂ ಸಂಪೂರ್ಣ ರಕ್ಷಣೆಯ ಭರವಸೆಯನ್ನು ನೀಡಿದರಲ್ಲದೆ ಮತಾಂತರದ ವಿಷಯವಾಗಿ ರಾಷ್ಟ್ರೀಯ ಚರ್ಚೆ ನಡೆಯಬೇಕು ಎಂದು ಕರೆ ನೀಡಿದರು.</p><p>ಕೋಮು ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದರು.</p><p>ಈ ಜಿಲ್ಲೆಯಲ್ಲಿ ಹಿಂದೂಗಳು ಹಾಗೂ ಕ್ರೈಸ್ತರ ನಡುವೆ ಘರ್ಷಣೆ ನಡೆದ ಕೆಲವು ಸ್ಥಳಗಳ ಭೇಟಿಯ ನಂತರ ಇಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ದೇಶದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲಾಗುವುದು<br>ಎಂದು ಭರವಸೆ ನೀಡಿದರು.</p><p>‘ಯಾವುದೇ ಕೋಮಿನ ಯಾವನೇ ವ್ಯಕ್ತಿ ಅಥವಾ ಸಂಸ್ಥೆಯು ಇನ್ನೊಂದು ಕೋಮಿನವರ ಮೇಲೆ ನಡೆಸುವ ಹಿಂಸಾಚಾರವನ್ನು ರಾಜ್ಯ ಸರ್ಕಾರಗಳು ಸಹಿಸದೆ ಮಟ್ಟಹಾಕಬೇಕು’ ಎಂದು ಅವರು ಕರೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>