<p><strong>ನವದೆಹಲಿ, ಆಗಸ್ಟ್ 11–</strong> ಶರದ್ ಯಾದವ್ ನೇತೃತ್ವದ ಜನತಾದಳ (ಯು) ಜತೆ ಚುನಾವಣೆ ಹೊಂದಾಣಿಕೆ<br>ಮಾಡಿಕೊಳ್ಳಬೇಕೆಂಬ ಲೋಕಶಕ್ತಿಯ ನಾಯಕ ರಾಮಕೃಷ್ಣ ಹೆಗಡೆ ಅವರ ಮನವಿಯನ್ನು ಬಿಜೆಪಿ ಇಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರಿಂದ, ಬಿಜೆಪಿ, ಲೋಕಶಕ್ತಿ ಮತ್ತು ಸಮತಾ ಪಕ್ಷದ ನಡುವಣ ಹೊಂದಾಣಿಕೆಗೆ ತೀವ್ರ ಅಪಾಯ ಎದುರಾಗಿದೆ.</p><p>ಜನತಾದಳ (ಯು)ಗೆ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟಕ್ಕೆ ಪ್ರವೇಶ ನೀಡುವ ಬಗೆಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು, ರಾಮಕೃಷ್ಣ ಹೆಗಡೆ ಅವರು ತಮ್ಮ ಬಳಿ ಬಂದು ಮಾತುಕತೆ ನಡೆಸಿದ<br>ನಂತರ, ಕುಶಭಾವು ಠಾಕರೆ ಅವರು ತಿಳಿಸಿದ್ದಾರೆ.</p><p><strong>ಭಾರತದ ಹೆಲಿಕಾಪ್ಟರಿನತ್ತ ಪಾಕ್ ಕ್ಷಿಪಣಿ: ತಪ್ಪಿದ ಗುರಿ</strong></p><p><strong>ನವದೆಹಲಿ, ಆಗಸ್ಟ್ 11 (ಪಿಟಿಐ)–</strong> ಪಾಕ್ ವಿಮಾನವನ್ನು ಭಾರತದ ಮಿಗ್ ವಿಮಾನಗಳು ಹೊಡೆದು ಉರುಳಿಸಿದ ಸ್ಥಳಕ್ಕೆ ಪತ್ರಕರ್ತರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರಿನತ್ತ ಪಾಕಿಸ್ತಾನವು ಇಂದು ಕ್ಷಿಪಣಿಯೊಂದನ್ನು ಹಾರಿಸಿತು. ಆದರೆ ಕ್ಷಿಪಣಿ ಗುರಿ ತಪ್ಪಿದ್ದು ಯಾರಿಗೂ ಅಪಾಯವಾಗಿಲ್ಲ.</p><p>ಭಾರತದ ಅಧಿಕಾರಿಗಳು ಹಾಗೂ ಪತ್ರಕರ್ತರು ನಾಲಿಯಾ ವಾಯುನೆಲೆಯಿಂದ ಮೂರು ಹೆಲಿಕಾಪ್ಟರುಗಳಲ್ಲಿ ಕಚ್ನ ಖಾರಿ ಕೊಲ್ಲಿಯತ್ತ ಹೋಗುತ್ತಿದ್ದಾಗ ಪಾಕ್ ಪಡೆಗಳು ಭೂಮಿಯಿಂದ ಆಕಾಶಕ್ಕೆ ಹೊಡೆಯುವ ಕ್ಷಿಪಣಿಯನ್ನು ಹಾರಿಸಿದವು.</p><p>ಕ್ಷಿಪಣಿಯು ಹೆಲಿಕಾಪ್ಟರಿನಿಂದ ಕೆಲವು ನೂರು ಮೀಟರ್ ದೂರದಲ್ಲಿ ಹಾರಿಹೋಯಿತು. ಹೆಲಿಕಾಪ್ಟರ್ ಗಡಿಯಿಂದ 4 ಕಿ.ಮೀ. ಒಳಗಿದ್ದಾಗ ಈ ದಾಳಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಆಗಸ್ಟ್ 11–</strong> ಶರದ್ ಯಾದವ್ ನೇತೃತ್ವದ ಜನತಾದಳ (ಯು) ಜತೆ ಚುನಾವಣೆ ಹೊಂದಾಣಿಕೆ<br>ಮಾಡಿಕೊಳ್ಳಬೇಕೆಂಬ ಲೋಕಶಕ್ತಿಯ ನಾಯಕ ರಾಮಕೃಷ್ಣ ಹೆಗಡೆ ಅವರ ಮನವಿಯನ್ನು ಬಿಜೆಪಿ ಇಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರಿಂದ, ಬಿಜೆಪಿ, ಲೋಕಶಕ್ತಿ ಮತ್ತು ಸಮತಾ ಪಕ್ಷದ ನಡುವಣ ಹೊಂದಾಣಿಕೆಗೆ ತೀವ್ರ ಅಪಾಯ ಎದುರಾಗಿದೆ.</p><p>ಜನತಾದಳ (ಯು)ಗೆ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟಕ್ಕೆ ಪ್ರವೇಶ ನೀಡುವ ಬಗೆಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು, ರಾಮಕೃಷ್ಣ ಹೆಗಡೆ ಅವರು ತಮ್ಮ ಬಳಿ ಬಂದು ಮಾತುಕತೆ ನಡೆಸಿದ<br>ನಂತರ, ಕುಶಭಾವು ಠಾಕರೆ ಅವರು ತಿಳಿಸಿದ್ದಾರೆ.</p><p><strong>ಭಾರತದ ಹೆಲಿಕಾಪ್ಟರಿನತ್ತ ಪಾಕ್ ಕ್ಷಿಪಣಿ: ತಪ್ಪಿದ ಗುರಿ</strong></p><p><strong>ನವದೆಹಲಿ, ಆಗಸ್ಟ್ 11 (ಪಿಟಿಐ)–</strong> ಪಾಕ್ ವಿಮಾನವನ್ನು ಭಾರತದ ಮಿಗ್ ವಿಮಾನಗಳು ಹೊಡೆದು ಉರುಳಿಸಿದ ಸ್ಥಳಕ್ಕೆ ಪತ್ರಕರ್ತರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರಿನತ್ತ ಪಾಕಿಸ್ತಾನವು ಇಂದು ಕ್ಷಿಪಣಿಯೊಂದನ್ನು ಹಾರಿಸಿತು. ಆದರೆ ಕ್ಷಿಪಣಿ ಗುರಿ ತಪ್ಪಿದ್ದು ಯಾರಿಗೂ ಅಪಾಯವಾಗಿಲ್ಲ.</p><p>ಭಾರತದ ಅಧಿಕಾರಿಗಳು ಹಾಗೂ ಪತ್ರಕರ್ತರು ನಾಲಿಯಾ ವಾಯುನೆಲೆಯಿಂದ ಮೂರು ಹೆಲಿಕಾಪ್ಟರುಗಳಲ್ಲಿ ಕಚ್ನ ಖಾರಿ ಕೊಲ್ಲಿಯತ್ತ ಹೋಗುತ್ತಿದ್ದಾಗ ಪಾಕ್ ಪಡೆಗಳು ಭೂಮಿಯಿಂದ ಆಕಾಶಕ್ಕೆ ಹೊಡೆಯುವ ಕ್ಷಿಪಣಿಯನ್ನು ಹಾರಿಸಿದವು.</p><p>ಕ್ಷಿಪಣಿಯು ಹೆಲಿಕಾಪ್ಟರಿನಿಂದ ಕೆಲವು ನೂರು ಮೀಟರ್ ದೂರದಲ್ಲಿ ಹಾರಿಹೋಯಿತು. ಹೆಲಿಕಾಪ್ಟರ್ ಗಡಿಯಿಂದ 4 ಕಿ.ಮೀ. ಒಳಗಿದ್ದಾಗ ಈ ದಾಳಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>