<p><strong>ನವದೆಹಲಿ, ಆ. 13–</strong> ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಬಹುಮತ ಪಡೆದಾಗ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ವಿಜಯಿಯಾದ ಲೋಕಸಭೆ ಸದಸ್ಯರು ಆಯ್ಕೆ ಮಾಡುವರು ಎನ್ನುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇರ ಉತ್ತರ ನೀಡದೆ ನುಣುಚಿಕೊಂಡರು.</p><p>ತಾವು ವಿದೇಶಿ ಮೂಲದವರು ಎಂಬ ಕಾರಣಕ್ಕಾಗಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷವು ತಮ್ಮನ್ನು ಬಿಂಬಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಸೋನಿಯಾ ಗಾಂಧಿ, ಅದಕ್ಕೆ ತಮ್ಮ ಬಳಿ ಉತ್ತರವಿಲ್ಲ, ಈ ಪ್ರಶ್ನೆಗೆ ಭಾರತದ ಜನತೆ ಉತ್ತರ ನೀಡುತ್ತದೆ ಎಂದರು.</p><p>ವ್ಯಕ್ತಿಯ ಆಯ್ಕೆ ಪ್ರಶ್ನೆ ಈಗ ಮುಖ್ಯವಲ್ಲ. ಪಕ್ಷವು ಜನತೆಗೆ ನೀಡುವ ಆಶ್ವಾಸನೆಯ ಈಡೇರಿಕೆ ಮತ್ತು ಕಾರ್ಯಕ್ರಮಗಳ ಜಾರಿ ಮುಖ್ಯ ಎಂದು ಉತ್ತರಿಸಿದರು.</p>.<p>ಮುಂದುವರಿದ ಎನ್ಡಿಎ ಬಿಕ್ಕಟ್ಟು</p><p>ನವದೆಹಲಿ, ಆ. 13– ಜನತಾದಳ (ಯು) ಜತೆ ಸ್ಥಾನ ಹೊಂದಾಣಿಕೆ ಕುರಿತಂತೆ ಬಿಜೆಪಿಯು ಒಪ್ಪಿದೆ ಎಂಬುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದ್ದರೆ, ಅದನ್ನು ಬಿಜೆಪಿಯು ಸ್ಪಷ್ಟವಾಗಿ ಅಲ್ಲಗಳೆಯುವ ಮೂಲಕ ಈ ವಿವಾದ ಮತ್ತೆ ಕಗ್ಗಂಟಾಗಿಯೇ ಮುಂದುವರಿದಿದೆ. </p><p>ಎರಡು ಪಕ್ಷಗಳ ಈ ವಿಭಿನ್ನ ನಿಲುವುಗಳಿಂದ ಮತ್ತಷ್ಟು ಗೊಂದಲ ಮುಂದುವರಿದಿದೆ. ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ, ನಾಳೆ ಕೊನೆಯ ಸುತ್ತಿನ ಚರ್ಚೆಗಾಗಿ ಸೇರುತ್ತಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಖಚಿತವಾಗಿದೆ. ಈ ಸಭೆಯಲ್ಲಿ ತಮ್ಮ ರಾಜ್ಯ ಘಟಕದ ನಿಲುವನ್ನು ಪುನರುಚ್ಚರಿಸುವುದಾಗಿ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ. </p><p>ಆದರೆ ಈ ಹಿನ್ನೆಲೆಯಲ್ಲಿ, ಕಳೆದ ಮೂರು ವಾರಗಳಿಂದ ನನೆಗುದಿಗೆ ಬಿದ್ದಿರುವ ಹೊಂದಾಣಿಕೆ ವಿವಾದದ ಕುರಿತಂತೆ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಆ. 13–</strong> ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಬಹುಮತ ಪಡೆದಾಗ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ವಿಜಯಿಯಾದ ಲೋಕಸಭೆ ಸದಸ್ಯರು ಆಯ್ಕೆ ಮಾಡುವರು ಎನ್ನುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇರ ಉತ್ತರ ನೀಡದೆ ನುಣುಚಿಕೊಂಡರು.</p><p>ತಾವು ವಿದೇಶಿ ಮೂಲದವರು ಎಂಬ ಕಾರಣಕ್ಕಾಗಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪಕ್ಷವು ತಮ್ಮನ್ನು ಬಿಂಬಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಸೋನಿಯಾ ಗಾಂಧಿ, ಅದಕ್ಕೆ ತಮ್ಮ ಬಳಿ ಉತ್ತರವಿಲ್ಲ, ಈ ಪ್ರಶ್ನೆಗೆ ಭಾರತದ ಜನತೆ ಉತ್ತರ ನೀಡುತ್ತದೆ ಎಂದರು.</p><p>ವ್ಯಕ್ತಿಯ ಆಯ್ಕೆ ಪ್ರಶ್ನೆ ಈಗ ಮುಖ್ಯವಲ್ಲ. ಪಕ್ಷವು ಜನತೆಗೆ ನೀಡುವ ಆಶ್ವಾಸನೆಯ ಈಡೇರಿಕೆ ಮತ್ತು ಕಾರ್ಯಕ್ರಮಗಳ ಜಾರಿ ಮುಖ್ಯ ಎಂದು ಉತ್ತರಿಸಿದರು.</p>.<p>ಮುಂದುವರಿದ ಎನ್ಡಿಎ ಬಿಕ್ಕಟ್ಟು</p><p>ನವದೆಹಲಿ, ಆ. 13– ಜನತಾದಳ (ಯು) ಜತೆ ಸ್ಥಾನ ಹೊಂದಾಣಿಕೆ ಕುರಿತಂತೆ ಬಿಜೆಪಿಯು ಒಪ್ಪಿದೆ ಎಂಬುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಹೇಳಿದ್ದರೆ, ಅದನ್ನು ಬಿಜೆಪಿಯು ಸ್ಪಷ್ಟವಾಗಿ ಅಲ್ಲಗಳೆಯುವ ಮೂಲಕ ಈ ವಿವಾದ ಮತ್ತೆ ಕಗ್ಗಂಟಾಗಿಯೇ ಮುಂದುವರಿದಿದೆ. </p><p>ಎರಡು ಪಕ್ಷಗಳ ಈ ವಿಭಿನ್ನ ನಿಲುವುಗಳಿಂದ ಮತ್ತಷ್ಟು ಗೊಂದಲ ಮುಂದುವರಿದಿದೆ. ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ, ನಾಳೆ ಕೊನೆಯ ಸುತ್ತಿನ ಚರ್ಚೆಗಾಗಿ ಸೇರುತ್ತಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವುದು ಖಚಿತವಾಗಿದೆ. ಈ ಸಭೆಯಲ್ಲಿ ತಮ್ಮ ರಾಜ್ಯ ಘಟಕದ ನಿಲುವನ್ನು ಪುನರುಚ್ಚರಿಸುವುದಾಗಿ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ. </p><p>ಆದರೆ ಈ ಹಿನ್ನೆಲೆಯಲ್ಲಿ, ಕಳೆದ ಮೂರು ವಾರಗಳಿಂದ ನನೆಗುದಿಗೆ ಬಿದ್ದಿರುವ ಹೊಂದಾಣಿಕೆ ವಿವಾದದ ಕುರಿತಂತೆ ಬಿಜೆಪಿ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>