ಹೈದರಾಬಾದ್, ಆ. 25 (ಪಿಟಿಐ)– ಆಲಮಟ್ಟಿ ವಿವಾದದ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಅವರ ಸಂಪುಟಕ್ಕೆ ತೆಲುಗುದೇಶಂ ಪಕ್ಷದ ಸಚಿವರ ರಾಜೀನಾಮೆ ಇಲ್ಲ. ಆದರೆ, ರಾಜ್ಯಕ್ಕೆ ನ್ಯಾಯ ಒದಗಿಸುವ ವಿಚಾರದಲ್ಲಿ ಸಂಧಾನದ ಪ್ರಯತ್ನ ಮುಂದುವರೆಸಲು ಸಂಯುಕ್ತ ರಂಗದಲ್ಲಿರುವ ಪ್ರಮುಖ ಪಕ್ಷವಾದ ತೆಲುಗುದೇಶಂ ಇಂದು ನಿರ್ಧರಿಸಿದೆ.