<p><strong>ಯಾದವ್ ಗುಂಪಿನ ‘ಬಾಣ’, ಗೌಡರ ಬಣಕ್ಕೆ ‘ಟ್ರ್ಯಾಕ್ಟರ್ ಓಡಿಸುವ ರೈತ’</strong></p><p><strong>ನವದೆಹಲಿ, ಆ. 8 (ಪಿಟಿಐ)–</strong> ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಶರದ್ ಯಾದವ್ ನೇತೃತ್ವದ ಜನತಾ ದಳದ ಬಣಗಳಿಗೆ ಚುನಾವಣಾ ಆಯೋಗ ಇಂದು ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ನೀಡಿತು. </p><p>ಶರದ್ ಯಾದವ್ ಬಣಕ್ಕೆ ಜನತಾ ದಳ (ಯು) ಎಂದು ಹೆಸರು ನೀಡಲಾಗಿದ್ದು ಅದಕ್ಕೆ ‘ಬಾಣ’ವನ್ನು ಚಿಹ್ನೆಯಾಗಿ ಕೊಡಲಾಗಿದೆ. ದೇವೇಗೌಡರ ಬಣಕ್ಕೆ ಜನತಾ ದಳ (ಎಸ್) ಎಂಬ ಹೆಸರನ್ನು ಮತ್ತು ‘ಟ್ರಾಕ್ಟರ್ ಓಡಿಸುತ್ತಿರುವ ರೈತ’ನ ಚಿಹ್ನೆಯನ್ನು ನೀಡಲಾಗಿದೆ.</p> .<p><strong>ಪಟೇಲ್ ಬಣದ ಜತೆ ಮೈತ್ರಿ ಇಲ್ಲ: ಬಿಜೆಪಿ </strong></p>.<p>ಬೆಂಗಳೂರು, ಆ. 8– ಚುನಾವಣಾ ಆಯೋಗವು ಜನತಾ ದಳದ ‘ಚಕ್ರ’ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಬಣ ಹೊಸ ಹೆಸರು– ಚಿಹ್ನೆಯೊಂದಿಗೆ ಬಂದರೂ ಆ ಬಣದೊಂದಿಗೆ ಯಾವುದೇ ರೀತಿ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ತಳ್ಳಿಹಾಕಿದೆ. </p>.<p>‘ನಮ್ಮ ಪಕ್ಷ ಬೇರೆ ರಾಜಕೀಯ ಪಕ್ಷಗಳೊಂದಿಗೆ ವ್ಯವಹರಿಸುತ್ತದೆಯೇ ಹೊರತು ಯಾವುದೇ ಒಂದು ಗುಂಪನ್ನು ಮಾನ್ಯ ಮಾಡುವುದಿಲ್ಲ; ಅಲ್ಲದೆ ಒಂದು ಗುಂಪಿನ ಜತೆ ವ್ಯವಹರಿಸುವುದೂ ಇಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ವೆಂಕಯ್ಯ ನಾಯ್ಡು ಇಂದು ಇಲ್ಲ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದವ್ ಗುಂಪಿನ ‘ಬಾಣ’, ಗೌಡರ ಬಣಕ್ಕೆ ‘ಟ್ರ್ಯಾಕ್ಟರ್ ಓಡಿಸುವ ರೈತ’</strong></p><p><strong>ನವದೆಹಲಿ, ಆ. 8 (ಪಿಟಿಐ)–</strong> ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಶರದ್ ಯಾದವ್ ನೇತೃತ್ವದ ಜನತಾ ದಳದ ಬಣಗಳಿಗೆ ಚುನಾವಣಾ ಆಯೋಗ ಇಂದು ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ನೀಡಿತು. </p><p>ಶರದ್ ಯಾದವ್ ಬಣಕ್ಕೆ ಜನತಾ ದಳ (ಯು) ಎಂದು ಹೆಸರು ನೀಡಲಾಗಿದ್ದು ಅದಕ್ಕೆ ‘ಬಾಣ’ವನ್ನು ಚಿಹ್ನೆಯಾಗಿ ಕೊಡಲಾಗಿದೆ. ದೇವೇಗೌಡರ ಬಣಕ್ಕೆ ಜನತಾ ದಳ (ಎಸ್) ಎಂಬ ಹೆಸರನ್ನು ಮತ್ತು ‘ಟ್ರಾಕ್ಟರ್ ಓಡಿಸುತ್ತಿರುವ ರೈತ’ನ ಚಿಹ್ನೆಯನ್ನು ನೀಡಲಾಗಿದೆ.</p> .<p><strong>ಪಟೇಲ್ ಬಣದ ಜತೆ ಮೈತ್ರಿ ಇಲ್ಲ: ಬಿಜೆಪಿ </strong></p>.<p>ಬೆಂಗಳೂರು, ಆ. 8– ಚುನಾವಣಾ ಆಯೋಗವು ಜನತಾ ದಳದ ‘ಚಕ್ರ’ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಬಣ ಹೊಸ ಹೆಸರು– ಚಿಹ್ನೆಯೊಂದಿಗೆ ಬಂದರೂ ಆ ಬಣದೊಂದಿಗೆ ಯಾವುದೇ ರೀತಿ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ತಳ್ಳಿಹಾಕಿದೆ. </p>.<p>‘ನಮ್ಮ ಪಕ್ಷ ಬೇರೆ ರಾಜಕೀಯ ಪಕ್ಷಗಳೊಂದಿಗೆ ವ್ಯವಹರಿಸುತ್ತದೆಯೇ ಹೊರತು ಯಾವುದೇ ಒಂದು ಗುಂಪನ್ನು ಮಾನ್ಯ ಮಾಡುವುದಿಲ್ಲ; ಅಲ್ಲದೆ ಒಂದು ಗುಂಪಿನ ಜತೆ ವ್ಯವಹರಿಸುವುದೂ ಇಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ವೆಂಕಯ್ಯ ನಾಯ್ಡು ಇಂದು ಇಲ್ಲ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>