<p><strong>ಮಾಮೂಲು ಸ್ಥಿತಿಗೆ ಮಂಗಳೂರು, ಸುರತ್ಕಲ್</strong></p><p>ಮಂಗಳೂರು, ಜ. 4– ಕಳೆದ ಆರು ದಿನಗಳಿಂದ ಗಲಭೆಪೀಡಿತವಾಗಿರುವ ಸುರತ್ಕಲ್ ಮತ್ತು ಮಂಗಳೂರು ನಗರದಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಂಟ್ವಾಳ ಪರಿಸರದಲ್ಲಿ ಕೆಲವು ಕಡೆ ಹಿಂಸಾಚಾರ ನಡೆದಿರುವುದು ಬಿಟ್ಟರೆ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿ<br>ಸಲಾಗಿದೆ.</p><p>ಸುರತ್ಕಲ್ ಪ್ರದೇಶದ ಕಾಟಿಪಳ್ಳ, ಕೃಷ್ಣಾಪುರದಲ್ಲಿ ನಿನ್ನೆ ಕರ್ಫ್ಯೂ ಸಡಿಲಿಸಿದಾಗ ಗುಂಪು ಘರ್ಷಣೆಗಳಾಗಿ ಇರಿತದ ಪ್ರಕರಣ ನಡೆದಿರುವುದರಿಂದ, ಇಂದು ಬೆಳಿಗ್ಗೆ ಅವೆರಡೂ ಸ್ಥಳಗಳಲ್ಲಿ ಕರ್ಫ್ಯೂ ಸಡಿಲಿಸಲಿಲ್ಲ. ಆದರೆ ಸುರತ್ಕಲ್ನ ಉಳಿದ ಕಡೆಗಳಲ್ಲಿ ನಾಲ್ಕು ಗಂಟೆಗಳ ಕಾಲ ಮಾತ್ರ ಕರ್ಫ್ಯೂ ಸಡಿಲಿಸ<br>ಲಾಗಿದ್ದು ಯಾವುದೇ ಘಟನೆ ನಡೆದಿಲ್ಲ.</p><p><strong>ಸರ್ಕಾರ: ಬಿಜೆಪಿ ನಿಯಂತ್ರಣ ಇಲ್ಲ ಕುಶಭಾವು ಠಾಕ್ರೆ</strong></p><p>ಬೆಂಗಳೂರು, ಜ. 4– ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯನ್ನು ‘ಹಿಂದಿನ ಸೀಟಿನಲ್ಲಿ ಕುಳಿತು ನಿಯಂತ್ರಿಸುವ ಕೆಲಸವನ್ನು’ ತಮ್ಮ ಪಕ್ಷ ಮಾಡುತ್ತಿಲ್ಲವೆಂದು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಇಂದು ಇಲ್ಲಿ<br>ಸ್ಪಷ್ಟಪಡಿಸಿದರು.</p><p>ಅದೇ ವೇಳೆ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದೂ ಅವರು ಹೇಳಿದರು.</p><p>ಇಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದ ನಂತರ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಮೂಲು ಸ್ಥಿತಿಗೆ ಮಂಗಳೂರು, ಸುರತ್ಕಲ್</strong></p><p>ಮಂಗಳೂರು, ಜ. 4– ಕಳೆದ ಆರು ದಿನಗಳಿಂದ ಗಲಭೆಪೀಡಿತವಾಗಿರುವ ಸುರತ್ಕಲ್ ಮತ್ತು ಮಂಗಳೂರು ನಗರದಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಂಟ್ವಾಳ ಪರಿಸರದಲ್ಲಿ ಕೆಲವು ಕಡೆ ಹಿಂಸಾಚಾರ ನಡೆದಿರುವುದು ಬಿಟ್ಟರೆ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿ<br>ಸಲಾಗಿದೆ.</p><p>ಸುರತ್ಕಲ್ ಪ್ರದೇಶದ ಕಾಟಿಪಳ್ಳ, ಕೃಷ್ಣಾಪುರದಲ್ಲಿ ನಿನ್ನೆ ಕರ್ಫ್ಯೂ ಸಡಿಲಿಸಿದಾಗ ಗುಂಪು ಘರ್ಷಣೆಗಳಾಗಿ ಇರಿತದ ಪ್ರಕರಣ ನಡೆದಿರುವುದರಿಂದ, ಇಂದು ಬೆಳಿಗ್ಗೆ ಅವೆರಡೂ ಸ್ಥಳಗಳಲ್ಲಿ ಕರ್ಫ್ಯೂ ಸಡಿಲಿಸಲಿಲ್ಲ. ಆದರೆ ಸುರತ್ಕಲ್ನ ಉಳಿದ ಕಡೆಗಳಲ್ಲಿ ನಾಲ್ಕು ಗಂಟೆಗಳ ಕಾಲ ಮಾತ್ರ ಕರ್ಫ್ಯೂ ಸಡಿಲಿಸ<br>ಲಾಗಿದ್ದು ಯಾವುದೇ ಘಟನೆ ನಡೆದಿಲ್ಲ.</p><p><strong>ಸರ್ಕಾರ: ಬಿಜೆಪಿ ನಿಯಂತ್ರಣ ಇಲ್ಲ ಕುಶಭಾವು ಠಾಕ್ರೆ</strong></p><p>ಬೆಂಗಳೂರು, ಜ. 4– ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯನ್ನು ‘ಹಿಂದಿನ ಸೀಟಿನಲ್ಲಿ ಕುಳಿತು ನಿಯಂತ್ರಿಸುವ ಕೆಲಸವನ್ನು’ ತಮ್ಮ ಪಕ್ಷ ಮಾಡುತ್ತಿಲ್ಲವೆಂದು ಬಿಜೆಪಿ ಅಧ್ಯಕ್ಷ ಕುಶಭಾವು ಠಾಕ್ರೆ ಇಂದು ಇಲ್ಲಿ<br>ಸ್ಪಷ್ಟಪಡಿಸಿದರು.</p><p>ಅದೇ ವೇಳೆ, ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂದೂ ಅವರು ಹೇಳಿದರು.</p><p>ಇಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶದ ನಂತರ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>