<p><strong>ಮತೀಯ ಶಕ್ತಿಗಳ ವಿರುದ್ಧ ಸಮರಕ್ಕೆ ರಂಗ ಸಮರ್ಥ</strong></p>.<p>ಬೆಂಗಳೂರು, ನ. 24– ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳದೆ, ಮತೀಯವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಸಂಯುಕ್ತ ರಂಗಕ್ಕಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>’ಮತೀಯವಾದಿ ಶಕ್ತಿಗಳನ್ನು ಎದುರಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು‘ ಎಂದು ಅವರು ಹೇಳಿದರು.</p>.<p>ಎರಡು ದಿನಗಳ ಭೇಟಿಗಾಗಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಪತ್ರಕರ್ತರು ’ಜಾತ್ಯತೀತ ಶಕ್ತಿಗಳ ಹಿತದೃಷ್ಟಿಯಿಂದ ಸಂಯುಕ್ತರಂಗವು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳ್ಳುವುದೇ?’ ಎಂದು ಪ್ರಶ್ನಿಸಿದಾಗ ’ಸಂಯುಕ್ತರಂಗವು ಇತರ ಎಲ್ಲ ಪಕ್ಷಗಳಷ್ಟೇ ಸದೃಢವಾಗಿದೆ ಎಂದು ಸಮರ್ಥಿಸಿಕೊಂಡರು.</p>.<p><strong>ಜನತೆಯ ಸಂತಸಕ್ಕೆ ಸ್ಲೀವಾ ಆದ್ಯತೆ</strong></p>.<p>ಬೆಂಗಳೂರು, ನ. 24– ’ನಾನು ಹೇಗೆ ಸಂತೋಷವಾಗಿದ್ದೇನೆಯೋ ಅದೇ ರೀತಿ ವಿಶ್ವದ ಜನರನ್ನು ಸಂತೋಷದಿಂದ ಇರುವಂತೆ ಮಾಡುವುದಕ್ಕೆ ನನ್ನ ಪ್ರಥಮ ಆದ್ಯತೆ’.</p>.<p>’ಇದಕ್ಕಾಗಿ ಆತಿ ಶೀಘ್ರದಲ್ಲಿಯೇ ವಿಶ್ವ ಪರ್ಯಟನೆ ಆರಂಭಿಸುತ್ತೇನೆ. ಧರ್ಮಾರ್ಥ ಕಾರ್ಯಗಳಿಗಾಗಿ ಹಣ ಸಂಗ್ರಹಣೆ ಮಾಡುವ ಉದ್ದೇಶದಿಂದ ಸಂಘಟಿಸುವ ಎಲ್ಲಾ ಕಾರ್ಯಕ್ರಮಗಳಿಗೆ ನೆರವು<br />ನೀಡುತ್ತೇನೆ‘.</p>.<p>ಶನಿವಾರ ರಾತ್ರಿ 46ನೇ ವಿಶ್ವಸುಂದರಿಯಾಗಿ ಆಯ್ಕೆಯಾದ ಗ್ರೀಸ್ ದೇಶದ ಚೆಲುವೆ ಏರಿನ್ ಸ್ಲೀವಾ ಅವರು ವ್ಯಕ್ತಪಡಿಸಿದ ಆಶಯಗಳು ಇವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮತೀಯ ಶಕ್ತಿಗಳ ವಿರುದ್ಧ ಸಮರಕ್ಕೆ ರಂಗ ಸಮರ್ಥ</strong></p>.<p>ಬೆಂಗಳೂರು, ನ. 24– ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳದೆ, ಮತೀಯವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಸಂಯುಕ್ತ ರಂಗಕ್ಕಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>’ಮತೀಯವಾದಿ ಶಕ್ತಿಗಳನ್ನು ಎದುರಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು‘ ಎಂದು ಅವರು ಹೇಳಿದರು.</p>.<p>ಎರಡು ದಿನಗಳ ಭೇಟಿಗಾಗಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಪತ್ರಕರ್ತರು ’ಜಾತ್ಯತೀತ ಶಕ್ತಿಗಳ ಹಿತದೃಷ್ಟಿಯಿಂದ ಸಂಯುಕ್ತರಂಗವು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳ್ಳುವುದೇ?’ ಎಂದು ಪ್ರಶ್ನಿಸಿದಾಗ ’ಸಂಯುಕ್ತರಂಗವು ಇತರ ಎಲ್ಲ ಪಕ್ಷಗಳಷ್ಟೇ ಸದೃಢವಾಗಿದೆ ಎಂದು ಸಮರ್ಥಿಸಿಕೊಂಡರು.</p>.<p><strong>ಜನತೆಯ ಸಂತಸಕ್ಕೆ ಸ್ಲೀವಾ ಆದ್ಯತೆ</strong></p>.<p>ಬೆಂಗಳೂರು, ನ. 24– ’ನಾನು ಹೇಗೆ ಸಂತೋಷವಾಗಿದ್ದೇನೆಯೋ ಅದೇ ರೀತಿ ವಿಶ್ವದ ಜನರನ್ನು ಸಂತೋಷದಿಂದ ಇರುವಂತೆ ಮಾಡುವುದಕ್ಕೆ ನನ್ನ ಪ್ರಥಮ ಆದ್ಯತೆ’.</p>.<p>’ಇದಕ್ಕಾಗಿ ಆತಿ ಶೀಘ್ರದಲ್ಲಿಯೇ ವಿಶ್ವ ಪರ್ಯಟನೆ ಆರಂಭಿಸುತ್ತೇನೆ. ಧರ್ಮಾರ್ಥ ಕಾರ್ಯಗಳಿಗಾಗಿ ಹಣ ಸಂಗ್ರಹಣೆ ಮಾಡುವ ಉದ್ದೇಶದಿಂದ ಸಂಘಟಿಸುವ ಎಲ್ಲಾ ಕಾರ್ಯಕ್ರಮಗಳಿಗೆ ನೆರವು<br />ನೀಡುತ್ತೇನೆ‘.</p>.<p>ಶನಿವಾರ ರಾತ್ರಿ 46ನೇ ವಿಶ್ವಸುಂದರಿಯಾಗಿ ಆಯ್ಕೆಯಾದ ಗ್ರೀಸ್ ದೇಶದ ಚೆಲುವೆ ಏರಿನ್ ಸ್ಲೀವಾ ಅವರು ವ್ಯಕ್ತಪಡಿಸಿದ ಆಶಯಗಳು ಇವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>