<p>ಚಂದ್ರಪುರ (ಮಹಾರಾಷ್ಟ್ರ), ಆ. 30 (ಪಿಟಿಐ): ಕಾರ್ಗಿಲ್ ಹೋರಾಟಕ್ಕೆ ಮುನ್ನ ಆದ ಬೇಹುಗಾರಿಕೆ ವೈಫಲ್ಯಕ್ಕಾಗಿ ಸರ್ಕಾರವು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಒತ್ತಾಯಿಸಿದರು.</p><p>ವೈಫಲ್ಯದಿಂದಾಗಿ ನೂರಾರು ಮಂದಿ ಧೀರ ಸೈನಿಕರು ಜೀವದ ಬೆಲೆ ತೆರಬೇಕಾಗಿ ಬಂದಿತೆಂದು ಅವರು ಸ್ಮರಿಸಿದರು.</p><p>‘ನಿರ್ಲಕ್ಷ್ಯ ಹಾಗೂ ವೈಫಲ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ನಾಚಿಕೆಯಿಂದ ತಲೆತಗ್ಗಿಸ<br>ಬೇಕು. ಇದರಿಂದ ಕಾರ್ಗಿಲ್ನಲ್ಲಿ ಯುದ್ಧಕ್ಕೆ ಸಮಾನವಾದ ಪರಿಸ್ಥಿತಿ ಉಂಟಾಯಿತು’ ಎಂದು ಸೋನಿಯಾ ಟೀಕಿಸಿದರು.</p><p><strong>ಆಸ್ತಿ ವಿವರ ನೀಡದ ಸಚಿವರ ರಾಜೀನಾಮೆ</strong></p><p>ಬೆಂಗಳೂರು, ಆ. 30– ಗೃಹ ಖಾತೆಯ ಸಹಾಯಕ ಸಚಿವ ಅಶ್ವತ್ಥನಾರಾಯಣ ರೆಡ್ಡಿ ಮತ್ತು ಭಾರಿ ನೀರಾವರಿ ಖಾತೆಯ ಸಹಾಯಕ ಸಚಿವ ನಾಗಪ್ಪ ಸಾಲೋನಿ ಅವರು ಹೈಕೋರ್ಟ್ ನಿರ್ದೇಶನದಂತೆ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.</p><p>ಲೋಕಾಯುಕ್ತಕ್ಕೆ ಸೂಕ್ತ ಕಾಲದಲ್ಲಿ ತಮ್ಮ ಆಸ್ತಿಗಳ ವಿವರ ನೀಡಿಲ್ಲ ಎಂಬ ಕಾರಣಕ್ಕಾಗಿ ಈ ಇಬ್ಬರು ಸಚಿವರು ಮೂರು ದಿನಗಳೊಳಗೆ ರಾಜೀನಾಮೆ ನೀಡಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಈ ಸಚಿವರು ಸಲ್ಲಿಸಿರುವ ರಾಜೀನಾಮೆ ತಮಗೆ ತಲುಪಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸುದ್ದಿಗಾರರಿಗೆ ತಿಳಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಂದ್ರಪುರ (ಮಹಾರಾಷ್ಟ್ರ), ಆ. 30 (ಪಿಟಿಐ): ಕಾರ್ಗಿಲ್ ಹೋರಾಟಕ್ಕೆ ಮುನ್ನ ಆದ ಬೇಹುಗಾರಿಕೆ ವೈಫಲ್ಯಕ್ಕಾಗಿ ಸರ್ಕಾರವು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಒತ್ತಾಯಿಸಿದರು.</p><p>ವೈಫಲ್ಯದಿಂದಾಗಿ ನೂರಾರು ಮಂದಿ ಧೀರ ಸೈನಿಕರು ಜೀವದ ಬೆಲೆ ತೆರಬೇಕಾಗಿ ಬಂದಿತೆಂದು ಅವರು ಸ್ಮರಿಸಿದರು.</p><p>‘ನಿರ್ಲಕ್ಷ್ಯ ಹಾಗೂ ವೈಫಲ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ನಾಚಿಕೆಯಿಂದ ತಲೆತಗ್ಗಿಸ<br>ಬೇಕು. ಇದರಿಂದ ಕಾರ್ಗಿಲ್ನಲ್ಲಿ ಯುದ್ಧಕ್ಕೆ ಸಮಾನವಾದ ಪರಿಸ್ಥಿತಿ ಉಂಟಾಯಿತು’ ಎಂದು ಸೋನಿಯಾ ಟೀಕಿಸಿದರು.</p><p><strong>ಆಸ್ತಿ ವಿವರ ನೀಡದ ಸಚಿವರ ರಾಜೀನಾಮೆ</strong></p><p>ಬೆಂಗಳೂರು, ಆ. 30– ಗೃಹ ಖಾತೆಯ ಸಹಾಯಕ ಸಚಿವ ಅಶ್ವತ್ಥನಾರಾಯಣ ರೆಡ್ಡಿ ಮತ್ತು ಭಾರಿ ನೀರಾವರಿ ಖಾತೆಯ ಸಹಾಯಕ ಸಚಿವ ನಾಗಪ್ಪ ಸಾಲೋನಿ ಅವರು ಹೈಕೋರ್ಟ್ ನಿರ್ದೇಶನದಂತೆ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.</p><p>ಲೋಕಾಯುಕ್ತಕ್ಕೆ ಸೂಕ್ತ ಕಾಲದಲ್ಲಿ ತಮ್ಮ ಆಸ್ತಿಗಳ ವಿವರ ನೀಡಿಲ್ಲ ಎಂಬ ಕಾರಣಕ್ಕಾಗಿ ಈ ಇಬ್ಬರು ಸಚಿವರು ಮೂರು ದಿನಗಳೊಳಗೆ ರಾಜೀನಾಮೆ ನೀಡಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಈ ಸಚಿವರು ಸಲ್ಲಿಸಿರುವ ರಾಜೀನಾಮೆ ತಮಗೆ ತಲುಪಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಸುದ್ದಿಗಾರರಿಗೆ ತಿಳಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>