<p><strong>ಎಂಜಿನಿಯರುಗಳ ಬಡ್ತಿಗೆ ‘ಪ್ರತಿಭೆ’ ಮಾನದಂಡ</strong></p>.<p><strong>ಬೆಂಗಳೂರು, ಮೇ 13– </strong>ಎಂಜಿನಿಯರು ಗಳಿಗೆ ಬಡ್ತಿ ನೀಡುವಾಗ ಸೇವಾ ಹಿರಿತನವೊಂದನ್ನೇ ಪರಿಗಣಿಸುವುದು ಅಸಾಧ್ಯ. ಪ್ರತಿಭೆಯೇ ಬಡ್ತಿಗೆ ಅಳತೆಗೋಲು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಹೇಳಿದರು.</p>.<p>ಎಂಜಿನಿಯರುಗಳ ಸಂಘಟನೆಗಳ ದಕ್ಷಿಣ ಭಾರತೀಯ ಒಕ್ಕೂಟದ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತರುಣ ಎಂಜಿನಿಯರ್ಗಳು ಬಹಳ ಬುದ್ಧಿವಂತ<br />ರಿದ್ದು, ಬಡ್ತಿ ನೀಡುವಾಗ ಅವರಿಗೆ ಅವಕಾಶ ಕೊಡುವುದು ಸಮಂಜಸ ಎಂದು ಸೂಚ್ಯವಾಗಿ ಹೇಳಿದರು.</p>.<p><strong>ಅಮೆರಿಕದ ಚೆಲ್ಸಿ ಸ್ಮಿತ್ ವಿಶ್ವಸುಂದರಿ</strong></p>.<p><strong>ವಿಂಡ್ಹಾಕ್, ಮೇ 13 (ರಾಯಿಟರ್ಸ್)– </strong>ಅಮೆರಿಕದ ಚೆಲ್ಸಿ ಸ್ಮಿತ್ ಅವರು ಇಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಗಳಲ್ಲಿ 1995ರ ವಿಶ್ವಸುಂದರಿಯಾಗಿ ಆಯ್ಕೆಯಾದರು.</p>.<p>ಭಾರತದ ಮನ್ಪ್ರೀತ್ ಬ್ರಾರ್ ಅವರು ಎರಡನೇ ಸ್ಥಾನ ಗಳಿಸಿದರೆ, ಕೆನಡಾದ ಲಾನಾ ಬುಷ್ಬರ್ಗರ್ ಮೂರನೇ ಸ್ಥಾನ ಪಡೆದರು.</p>.<p>ಕಳೆದ ವರ್ಷದ ವಿಶ್ವಸುಂದರಿ ಭಾರತದ ಸುಸ್ಮಿತಾ ಸೇನ್ ಅವರು ಸ್ಮಿತ್ ಅವರಿಗೆ ಕಿರೀಟಧಾರಣೆ ಮಾಡಿದರು. ಆಫ್ರಿಕಾ ಖಂಡದ ದೇಶವೊಂದರಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದದ್ದು ಇದೇ ಮೊದಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಂಜಿನಿಯರುಗಳ ಬಡ್ತಿಗೆ ‘ಪ್ರತಿಭೆ’ ಮಾನದಂಡ</strong></p>.<p><strong>ಬೆಂಗಳೂರು, ಮೇ 13– </strong>ಎಂಜಿನಿಯರು ಗಳಿಗೆ ಬಡ್ತಿ ನೀಡುವಾಗ ಸೇವಾ ಹಿರಿತನವೊಂದನ್ನೇ ಪರಿಗಣಿಸುವುದು ಅಸಾಧ್ಯ. ಪ್ರತಿಭೆಯೇ ಬಡ್ತಿಗೆ ಅಳತೆಗೋಲು ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಹೇಳಿದರು.</p>.<p>ಎಂಜಿನಿಯರುಗಳ ಸಂಘಟನೆಗಳ ದಕ್ಷಿಣ ಭಾರತೀಯ ಒಕ್ಕೂಟದ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತರುಣ ಎಂಜಿನಿಯರ್ಗಳು ಬಹಳ ಬುದ್ಧಿವಂತ<br />ರಿದ್ದು, ಬಡ್ತಿ ನೀಡುವಾಗ ಅವರಿಗೆ ಅವಕಾಶ ಕೊಡುವುದು ಸಮಂಜಸ ಎಂದು ಸೂಚ್ಯವಾಗಿ ಹೇಳಿದರು.</p>.<p><strong>ಅಮೆರಿಕದ ಚೆಲ್ಸಿ ಸ್ಮಿತ್ ವಿಶ್ವಸುಂದರಿ</strong></p>.<p><strong>ವಿಂಡ್ಹಾಕ್, ಮೇ 13 (ರಾಯಿಟರ್ಸ್)– </strong>ಅಮೆರಿಕದ ಚೆಲ್ಸಿ ಸ್ಮಿತ್ ಅವರು ಇಲ್ಲಿ ನಡೆದ ವರ್ಣರಂಜಿತ ಸ್ಪರ್ಧೆಗಳಲ್ಲಿ 1995ರ ವಿಶ್ವಸುಂದರಿಯಾಗಿ ಆಯ್ಕೆಯಾದರು.</p>.<p>ಭಾರತದ ಮನ್ಪ್ರೀತ್ ಬ್ರಾರ್ ಅವರು ಎರಡನೇ ಸ್ಥಾನ ಗಳಿಸಿದರೆ, ಕೆನಡಾದ ಲಾನಾ ಬುಷ್ಬರ್ಗರ್ ಮೂರನೇ ಸ್ಥಾನ ಪಡೆದರು.</p>.<p>ಕಳೆದ ವರ್ಷದ ವಿಶ್ವಸುಂದರಿ ಭಾರತದ ಸುಸ್ಮಿತಾ ಸೇನ್ ಅವರು ಸ್ಮಿತ್ ಅವರಿಗೆ ಕಿರೀಟಧಾರಣೆ ಮಾಡಿದರು. ಆಫ್ರಿಕಾ ಖಂಡದ ದೇಶವೊಂದರಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದದ್ದು ಇದೇ ಮೊದಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>