<p><strong>ಐದು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ</strong></p>.<p><strong>ನವದೆಹಲಿ, ಡಿ. 8 (ಪಿಟಿಐ, ಯುಎನ್ಐ)–</strong> ಮಹಾರಾಷ್ಟ್ರ, ಗುಜರಾತ್, ಬಿಹಾರ, ಒರಿಸ್ಸಾ ಮತ್ತು ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಲಾಗಿದೆ. ಮುಂದಿನ ಫೆಬ್ರುವರಿ ನಾಲ್ಕರಿಂದ 28ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವುದು ಎಂದು ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.</p>.<p><strong>ಜೇಲ್ ಸಿಂಗ್ ಆರೋಗ್ಯ: ಯಥಾಸ್ಥಿತಿ ಮುಂದುವರಿಕೆ</strong></p>.<p><strong>ಚಂಡೀಗಡ, ಡಿ. 8 (ಪಿಟಿಐ)–</strong> ಇಲ್ಲಿನ ಪಿಜಿಐ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಒಂದೇ ರೀತಿಯಲ್ಲಿ ಮುಂದುವರಿದಿದೆ.</p>.<p>ಏತನ್ಮಧ್ಯೆ ಸಂಜೆ ಇಲ್ಲಿಗೆ ಧಾವಿಸಿ ಬಂದ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಸಿಂಗ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿ.ಕೆ. ಕಾಕ್ ಅವರು ಸಚಿವರಿಗೆ ಮಾಜಿ ರಾಷ್ಟ್ರಪತಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.</p>.<p><strong>ಕೆ.ಕೆ. ಹೆಬ್ಬಾರ್ಗೆ ವೆಂಕಟಪ್ಪ ಪ್ರಶಸ್ತಿ</strong></p>.<p><strong>ಬೆಂಗಳೂರು, ಡಿ. 8–</strong> ಪ್ರಖ್ಯಾತ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರಿಗೆ 1994ನೇ ಸಾಲಿನ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ದೊರೆತಿದೆ. ಹೆಬ್ಬಾರ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ನೀಡಲಾಗುವುದು.</p>.<p>ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಕಲಾವಿದರಿಗೆ ವಿಶೇಷ ಪ್ರಶಸ್ತಿಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ, ಚಿತ್ರಕಲೆಗೆ ಗಮನಾರ್ಹ ಕೊಡುಗೆ ನೀಡಿದ ರಾಜ್ಯದ ಕಲಾವಿದರಿಗೆ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ನೀಡಲು ಆರಂಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಐದು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ</strong></p>.<p><strong>ನವದೆಹಲಿ, ಡಿ. 8 (ಪಿಟಿಐ, ಯುಎನ್ಐ)–</strong> ಮಹಾರಾಷ್ಟ್ರ, ಗುಜರಾತ್, ಬಿಹಾರ, ಒರಿಸ್ಸಾ ಮತ್ತು ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಲಾಗಿದೆ. ಮುಂದಿನ ಫೆಬ್ರುವರಿ ನಾಲ್ಕರಿಂದ 28ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವುದು ಎಂದು ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.</p>.<p><strong>ಜೇಲ್ ಸಿಂಗ್ ಆರೋಗ್ಯ: ಯಥಾಸ್ಥಿತಿ ಮುಂದುವರಿಕೆ</strong></p>.<p><strong>ಚಂಡೀಗಡ, ಡಿ. 8 (ಪಿಟಿಐ)–</strong> ಇಲ್ಲಿನ ಪಿಜಿಐ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಒಂದೇ ರೀತಿಯಲ್ಲಿ ಮುಂದುವರಿದಿದೆ.</p>.<p>ಏತನ್ಮಧ್ಯೆ ಸಂಜೆ ಇಲ್ಲಿಗೆ ಧಾವಿಸಿ ಬಂದ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಸಿಂಗ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿ.ಕೆ. ಕಾಕ್ ಅವರು ಸಚಿವರಿಗೆ ಮಾಜಿ ರಾಷ್ಟ್ರಪತಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.</p>.<p><strong>ಕೆ.ಕೆ. ಹೆಬ್ಬಾರ್ಗೆ ವೆಂಕಟಪ್ಪ ಪ್ರಶಸ್ತಿ</strong></p>.<p><strong>ಬೆಂಗಳೂರು, ಡಿ. 8–</strong> ಪ್ರಖ್ಯಾತ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರಿಗೆ 1994ನೇ ಸಾಲಿನ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ದೊರೆತಿದೆ. ಹೆಬ್ಬಾರ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ನೀಡಲಾಗುವುದು.</p>.<p>ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಕಲಾವಿದರಿಗೆ ವಿಶೇಷ ಪ್ರಶಸ್ತಿಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ, ಚಿತ್ರಕಲೆಗೆ ಗಮನಾರ್ಹ ಕೊಡುಗೆ ನೀಡಿದ ರಾಜ್ಯದ ಕಲಾವಿದರಿಗೆ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ನೀಡಲು ಆರಂಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>