ನವದೆಹಲಿ, ಜ. 20 (ಪಿಟಿಐ, ಯುಎನ್ಐ)– ಹವಾಲ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಹಾಗೂ ಕಾಂಗ್ರೆಸ್(ಐ)ನಲ್ಲಿ ಭಿನ್ನಮತ ಬಲಗೊಳ್ಳುತ್ತಿದೆ. ಈ ಪ್ರಕರಣದ ಸಂಬಂಧ ವಿಸ್ತೃತ ಚರ್ಚೆಗೆ ಕೂಡಲೇ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆಯಬೇಕು ಎಂದು ಹಿರಿಯ ನಾಯಕ ಕೆ.ಕರುಣಾಕರನ್ ಹಾಗೂ ಪರಿಸರ ಖಾತೆ ಸಚಿವ ರಾಜೇಶ್ ಪೈಲಟ್ ಅವರು ಪ್ರಧಾನಿಯವರನ್ನು ಒತ್ತಾಯಪಡಿ
ಸಿದ್ದಲ್ಲದೆ ಪಕ್ಷ ಮೌನ ವಹಿಸಿರುವುದನ್ನು ಪ್ರಶ್ನಿಸಿ ಪೈಲಟ್ ಅವರು ರಾಜೀನಾಮೆಗೆ ಮುಂದಾಗಿದ್ದಾರೆ.