ನವದೆಹಲಿ, ಫೆ. 27– ಕಾವೇರಿ ನದಿ ವಿವಾದವನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ಹಲವಾರು ಯತ್ನ ಮೊದಲಿನಿಂದ ನಡೆದಿದ್ದು, ಅದೆಲ್ಲವೂ ಕರ್ನಾಟಕದ ತಿರಸ್ಕಾರ ಮನೋಭಾವದಿಂದ ವಿಫಲವಾಗಿದೆ. ತಾನು ನದಿಯ ಮೇಲ್ಭಾಗದಲ್ಲಿರುವ ಒಂದೇ ಕಾರಣಕ್ಕೆ ಹೆಚ್ಚಿನ ಪಾಲಿನ ನೀರನ್ನು ಕರ್ನಾಟಕವೇ ಬಳಿಸಿಕೊಳ್ಳುತ್ತ ಬಂದಿದೆ. ಆದ್ದರಿಂದ ನ್ಯಾಯಮಂಡಲಿಯ ಕಲಾಪವನ್ನು ಮುಂದೂಡಬೇಕೆಂದು ಕೋರಿರುವ ಅದರ ಅರ್ಜಿಯು ತಿರಸ್ಕಾರ ಯೋಗ್ಯವಾಗಿದೆ ಎಂದು ತಮಿಳುನಾಡು ಉತ್ತರಿಸಿದೆ.