ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ

ಮಂಗಳವಾರ, 2–04– 1996
Last Updated 1 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ

ಬೆಂಗಳೂರು, ಏ. 1– ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಹಿರಿಯ ಸಚಿವರಾದ ಆರ್‌.ಎಲ್‌.ಜಾಲಪ್ಪ,ಪಿ.ಜಿ.ಆರ್‌.ಸಿಂಧ್ಯ, ವೈಜನಾಥ್‌ ಪಾಟೀಲ್‌ ಮತ್ತು ಶಿವಾನಂದ ಕೌಜಲಗಿ ಅವರೂ ಸೇರಿದಂತೆ ಒಟ್ಟು ಏಳು ಜನ ಸಚಿವರಿಗೆ ರಾಜ್ಯ ಜನತಾ ದಳದ ಸಂಸದೀಯ ಮಂಡಲಿ ಆದೇಶ ನೀಡಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಸಚಿವರು ಹಿಂದೇಟು ಹಾಕುತ್ತಿರುವಾಗಲೇ ಸಚಿವರಿಗೆ ಮಂಡಲಿ ಈ ಆದೇಶ ನೀಡಿರುವುದು ದಳದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಹವಾಲ: 7 ಮಾಜಿ ಸಚಿವರಿಗೆ ಟಿಕೆಟ್‌ ಇಲ್ಲ

ನವದೆಹಲಿ, ಏ. 1 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಏಳು ಮಾಜಿ ಸಚಿವರಿಗೆ ಲೋಕಸಭಾ ಚುನಾವಣೆಗೆ ಕಾಂಗೈ ಟಿಕೆಟ್‌ ನಿರಾಕರಿಸಿದೆ. ಇವರಲ್ಲಿ ಬಲರಾಂ ಜಾಖಡ್‌, ಆರ್‌.ಕೆ.ಧವನ್‌, ಮಾಧವರಾವ್‌ ಸಿಂಧಿಯಾ, ವಿ.ಸಿ.ಶುಕ್ಲಾ, ಬೂಟಾ ಸಿಂಗ್‌, ಕಮಲನಾಥ್‌, ಅರವಿಂದ ನೇತಂ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT