ಜೈಪಾಲ್ ರೆಡ್ಡಿ (ವಾರ್ತಾ ಮತ್ತು ಪ್ರಸಾರ), ಚಿದಂಬರಂ (ಹಣಕಾಸು), ಎಂ. ಅರುಣಾಚಲಂ (ಕಾರ್ಮಿಕ) ಅವರು ಸಂಪುಟ ದರ್ಜೆಯ ಸಚಿವರುಗಳಾಗಿ, ಮಕ್ಬೂಲ್ ಧರ್ (ಗೃಹ ಖಾತೆ), ಧನುಷ್ಕೋಡಿ ಆದಿತ್ಯನ್ (ಯುವಜನ ಸೇವೆ ಮತ್ತು ಕ್ರೀಡೆ) ಮತ್ತು ಎಸ್.ಆರ್. ಬಾಲಸುಬ್ರಮಣ್ಯಂ (ಸಂಸದೀಯ ವ್ಯವಹಾರ) ರಾಜ್ಯ ಸಚಿವರುಗಳಾಗಿ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.