ಜಿಲ್ಲಾ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ್ದ ಸಚಿವರುಹಾಜರಿ ಪುಸ್ತಕ ತರಲು ಸೂಪರಿಂಟೆಂಡೆಂಟ್ ಅವರಿಗೆ ತಿಳಿಸಿದಾಗ ಅವರು ಹಾಜರಿ ಪುಸ್ತಕ ತರಲು ತಡವಾದುದನ್ನು ಸಹಿಸದ ಸಚಿವರು ಕೂಡಲೇ ಹಾಲ್ಗೆ ನುಗ್ಗಿ ಇವರಿಗೆ ಬೆನ್ನು ಹಾಕಿ ನಿಂತಿದ್ದ ಸೂಪರಿಂಟೆಂಡೆಂಟ್ ಎಚ್. ವೆಂಕಣ್ಣ ಅವರ ಬೆನ್ನಿಗೆ ಅವರ ಕೈಲಿದ್ದ ಊರುಗೋಲಿನಿಂದ ಬಲವಾಗಿ ತಿವಿದುದಾಗಿಯೂ, ಮತ್ತೊಬ್ಬ ಸೂಪರಿಂಟೆಂಡೆಂಟ್ ಮಂಜುನಾಥ್ ಅವರ ಎಡ ಕಪಾಳಕ್ಕೆ ಬೀಸಿ ಹೊಡೆದುದಾಗಿಯೂ ಇವರಿಬ್ಬರೂ ತಿಳಿಸಿದರು. ಸಚಿವರ ವಿರುದ್ಧ ಅಧಿಕಾರಿಗಳು ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.