<p><strong>ಕಾವೇರಿ: ಸತತ ಮಾತುಕತೆ– ಪ್ರಧಾನಿ ಪರಿಹಾರ ಸೂತ್ರ ಸಂಭವ<br />ನವದೆಹಲಿ, ಡಿ. 31–</strong> ತೀರಾ ಜಟಿಲವಾಗಿರುವ ಕಾವೇರಿ ಜಲ ವಿವಾದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿರುವ ಪ್ರಧಾನಿ<br />ಪಿ.ವಿ.ನರಸಿಂಹ ರಾವ್ ಅವರು ಇಂದು ಕರ್ನಾಟಕ ಮತ್ತು ತಮಿಳುನಾಡಿನ ಕಾಂಗ್ರೆಸ್ ಮುಖಂಡರು ಮತ್ತು ದೇವೇಗೌಡ, ಜಯಲಲಿತಾ ಸೇರಿ ನದಿ ಪಾತ್ರದಲ್ಲಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.</p>.<p>ತಮ್ಮ ಮೊದಲ ಆದ್ಯತೆ ಯಾವುದೇ ರಾಜ್ಯಗಳ ಬೆಳೆ ಹಾಳಾಗದಂತೆ ರಕ್ಷಿಸುವುದು ಎಂದು ಪ್ರಧಾನಿ ಆಶ್ವಾಸನೆ ನೀಡಿದರು. ದೇವೇಗೌಡ ಮತ್ತು ಜಯಲಲಿತಾ ಅವರು ಪ್ರಧಾನಿಯವರ ಸಲಹೆ ಒಪ್ಪಿಕೊಂಡರೆ ನಾಳೆ ಸಂಜೆಯ ವೇಳೆಗೆ ಎರಡೂ ರಾಜ್ಯಗಳಿಗೆ ಸಮ್ಮತವಾಗುವ ಪರಿಹಾರ ಸೂತ್ರ ಹೊರಬೀಳುವ ಸಾಧ್ಯತೆಯಿದೆ.</p>.<p><strong>ಗೊಬ್ಬರ ದರ ಏರಿಕೆ: ಇಂದಿನಿಂದ ಜಾರಿ<br />ಬೆಂಗಳೂರು, ಡಿ. 31–</strong> ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಸಂಯುಕ್ತ ಗೊಬ್ಬರಗಳಿಗೆ ಗರಿಷ್ಠ ಮಾರಾಟ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ದರಕ್ಕಿಂತ ಶೇಕಡ ಒಂದರಿಂದ ಆರರಷ್ಟು ದರ ಹೆಚ್ಚಳ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ಸತತ ಮಾತುಕತೆ– ಪ್ರಧಾನಿ ಪರಿಹಾರ ಸೂತ್ರ ಸಂಭವ<br />ನವದೆಹಲಿ, ಡಿ. 31–</strong> ತೀರಾ ಜಟಿಲವಾಗಿರುವ ಕಾವೇರಿ ಜಲ ವಿವಾದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿರುವ ಪ್ರಧಾನಿ<br />ಪಿ.ವಿ.ನರಸಿಂಹ ರಾವ್ ಅವರು ಇಂದು ಕರ್ನಾಟಕ ಮತ್ತು ತಮಿಳುನಾಡಿನ ಕಾಂಗ್ರೆಸ್ ಮುಖಂಡರು ಮತ್ತು ದೇವೇಗೌಡ, ಜಯಲಲಿತಾ ಸೇರಿ ನದಿ ಪಾತ್ರದಲ್ಲಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.</p>.<p>ತಮ್ಮ ಮೊದಲ ಆದ್ಯತೆ ಯಾವುದೇ ರಾಜ್ಯಗಳ ಬೆಳೆ ಹಾಳಾಗದಂತೆ ರಕ್ಷಿಸುವುದು ಎಂದು ಪ್ರಧಾನಿ ಆಶ್ವಾಸನೆ ನೀಡಿದರು. ದೇವೇಗೌಡ ಮತ್ತು ಜಯಲಲಿತಾ ಅವರು ಪ್ರಧಾನಿಯವರ ಸಲಹೆ ಒಪ್ಪಿಕೊಂಡರೆ ನಾಳೆ ಸಂಜೆಯ ವೇಳೆಗೆ ಎರಡೂ ರಾಜ್ಯಗಳಿಗೆ ಸಮ್ಮತವಾಗುವ ಪರಿಹಾರ ಸೂತ್ರ ಹೊರಬೀಳುವ ಸಾಧ್ಯತೆಯಿದೆ.</p>.<p><strong>ಗೊಬ್ಬರ ದರ ಏರಿಕೆ: ಇಂದಿನಿಂದ ಜಾರಿ<br />ಬೆಂಗಳೂರು, ಡಿ. 31–</strong> ಕೇಂದ್ರ ಸರ್ಕಾರದ ಸಹಾಯಧನ ಯೋಜನೆಯಲ್ಲಿ ಸಂಯುಕ್ತ ಗೊಬ್ಬರಗಳಿಗೆ ಗರಿಷ್ಠ ಮಾರಾಟ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ದರಕ್ಕಿಂತ ಶೇಕಡ ಒಂದರಿಂದ ಆರರಷ್ಟು ದರ ಹೆಚ್ಚಳ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>