ಕಾವೇರಿ: ಸತತ ಮಾತುಕತೆ– ಪ್ರಧಾನಿ ಪರಿಹಾರ ಸೂತ್ರ ಸಂಭವ
ನವದೆಹಲಿ, ಡಿ. 31– ತೀರಾ ಜಟಿಲವಾಗಿರುವ ಕಾವೇರಿ ಜಲ ವಿವಾದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆ ಆರಂಭಿಸಿರುವ ಪ್ರಧಾನಿ
ಪಿ.ವಿ.ನರಸಿಂಹ ರಾವ್ ಅವರು ಇಂದು ಕರ್ನಾಟಕ ಮತ್ತು ತಮಿಳುನಾಡಿನ ಕಾಂಗ್ರೆಸ್ ಮುಖಂಡರು ಮತ್ತು ದೇವೇಗೌಡ, ಜಯಲಲಿತಾ ಸೇರಿ ನದಿ ಪಾತ್ರದಲ್ಲಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.