ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, ಮಾರ್ಚ್ 06, 1998

Last Updated 5 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ರಂಗ ತಾನಾಗಿ ಬೆಂಬಲ ನೀಡಿದರೆ ಸರ್ಕಾರ ರಚನೆ ಯತ್ನ: ಕಾಂಗ್ರೆಸ್‌
ನವದೆಹಲಿ, ಮಾರ್ಚ್‌ 5–
ಸಂಯುಕ್ತ ರಂಗವು ತಾನಾಗಿಯೇ ಬೆಂಬಲ ನೀಡಲು ಮುಂದಾದರೆ ಕೇಂದ್ರದಲ್ಲಿ ‘ಜಾತ್ಯಾತೀತ’ ಸರ್ಕಾರ ರಚಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಇಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯು ತೀರ್ಮಾನಿಸಿದ್ದರಿಂದ ಬಿಜೇಪಿಯೇತರ ಸರ್ಕಾರ ರಚನೆಯ ಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಸಂಯುಕ್ತ ರಂಗದ ಚಾಲನಾ ಸಮಿತಿ ಸಭೆಯು ಇಂದು ನಡೆಯದೆ ಮುಂದಕ್ಕೆ ಹೋದುದರಿಂದ, ಕಾಂಗ್ರೆಸ್ ಪಕ್ಷವು ರಂಗದ ನಿರ್ಧಾರದ ಬಗೆಗೆ ಕಾದು ನೋಡುವ ತೀರ್ಮಾನ ಕೈಗೊಂಡಿತು.

ಎಐಎಡಿಎಂಕೆ, ತೃಣಮೂಲ ಸೇರ್ಪಡೆ: ಬಿಜೆಪಿ ವಿಶ್ವಾಸ
ನವದೆಹಲಿ, ಮಾರ್ಚ್‌ 5 (ಪಿಟಿಐ)–
ಕೇಂದ್ರದಲ್ಲಿ ಬಿಜೆಪಿ ರಚಿಸುವ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲು ನಿರ್ಧರಿಸಿದ್ದರೂ ಸಹ ಎಐಎಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಸರ್ಕಾರದಲ್ಲಿ ಭಾಗಿಯಾಗುತ್ತವೆ ಎಂಬ ವಿಶ್ವಾಸವನ್ನು ಭಾರತೀಯ ಜನತಾ ಪಕ್ಷ ವ್ಯಕ್ತಪಡಿಸಿದೆ.

ಎಐಎಡಿಎಂಕೆ ಪಕ್ಷದ ನಾಯಕಿ ಜಯಲಲಿತಾ ಅವರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಚೆನ್ನಥನಲ್ಲಿ ತಮಗೆ ತಿಳಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವೆಂಕಯ್ಯ ನಾಯ್ಡು ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ನಾಳೆ ಇಲ್ಲಿ ನಡೆಯುವ ಬಿಜೆಪಿ ಮೈತ್ರಿಕೂಟದ ಸಭೆಯಲ್ಲಿ ಜಯಲಲಿತಾ ಅವರು ಪಾಲ್ಗೊಳ್ಳುವುದಿಲ್ಲವಾದರೂ ಅವರು ದೆಹಲಿಗೆ ಮಾರ್ಚ್‌ 8ಕ್ಕೆ ಬರುವರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT