ಠಾಣೆಗೆ ವೀರಪ್ಪನ್ ಹಠಾತ್ ದಾಳಿ ಹಣ, ಬಂದೂಕು ಲೂಟಿ
ಕೊಯಮತ್ತೂರು, ಡಿ. 20 (ಪಿಟಿಐ)– ಕುಖ್ಯಾತ ದಂತಚೋರ ವೀರಪ್ಪನ್ ತನ್ನ ಒಂಬತ್ತು ಮಂದಿ ಸಹಚರರೊಂದಿಗೆ ಈರೋಡ್ ಜಿಲ್ಲೆಯ ಅಂದಿಯೂರು ಸಮೀಪದ ವೆಲ್ಲಿತಿರುಪೂರು ಪೊಲೀಸ್ ಠಾಣೆಗೆ ಇಂದು ರಾತ್ರಿ ಹಠಾತ್ ದಾಳಿ ನಡೆಸಿ, ರೂ. 5 ಸಾವಿರ ನಗದು, 9 ಬಂದೂಕು ಮತ್ತು ಮದ್ದುಗುಂಡುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.