ಆಮೆಗತಿಯಲ್ಲಿ ಕಾಂಗೈ– ಅತಂತ್ರ ಲೋಕಸಭೆ ಖಚಿತ
ನವದೆಹಲಿ, ಮೇ 9 (ಪಿಟಿಐ, ಯುಎನ್ಐ)– ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ತಾವು ಸ್ಪರ್ಧಿಸಿರುವ ಬರ್ಹಾಂಪುರ ಮತ್ತು ನಂದ್ಯಾಲ ಕ್ಷೇತ್ರಗಳೆರಡರಲ್ಲೂ ಜಯ ಗಳಿಸಿದ್ದರೂ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ರಂಗ– ಎಡಪಕ್ಷಗಳಿಂದ ಹಿಂದೆಂದೂ ಇಲ್ಲದಷ್ಟು ಭಾರಿ ಪರಾಜಯ ಅನುಭವಿಸಿದೆ. ಅತಂತ್ರ ಸಂಸತ್ತಿನಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆಯದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಖಚಿತ ಸೂಚನೆಗಳಿವೆ.