ಬೆಂಗಳೂರು ತಿರುಪತಿ ಮಧ್ಯೆ ನೇರ ವಿಮಾನ ಸಂಚಾರ
ಬೆಂಗಳೂರು, ನವೆಂಬರ್ 12– ನಗರದ ವಿಮಾನ ನಿಲ್ದಾಣವನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನೀಕರಣಗೊಳಿಸುವುದರ ಜೊತೆಗೆ ವಿಸ್ತರಿಸಲಾಗುವುದೆಂದು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಹಾಗೂ ವಿಮಾನ ಸಂಚಾರ ಸಾರಿಗೆ ಸಚಿವೆ ಡಾ. ಸರೋಜಿನಿ ಮಹಿಷಿ ಅವರು ಇಂದು ಇಲ್ಲಿ ಪ್ರಕಟಿಸಿದರು. ದೇಶದ ಪ್ರಸಿದ್ಧ ಯಾತ್ರಾ ಸ್ಥಳವಾದ ಏಳು ಬೆಟ್ಟದ ತಿರುಪತಿ ಹಾಗೂ ನಗರದ ನಡುವೆ ಸಂಪರ್ಕವನ್ನು ಬೆಳಿಗ್ಗೆ ಎಚ್.ಎ.ಎಲ್ ವಿಮಾನ ನಿಲ್ದಾಣದ ಬಳಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.