<p><strong>ಹಜರತ್ಬಾಲ್ ಮುಕ್ತಿ ಯತ್ನ ವಿಫಲ</strong></p>.<p><strong>ಶ್ರೀನಗರ, ಮಾರ್ಚ್ 25 (ಯುಎನ್ಐ, ಪಿಟಿಐ)–</strong> ಹಜರತ್ಬಾಲ್ ಮಸೀದಿಯನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಷಬ್ಬೀರ್ ಸಿದ್ದೀಖ್ ಗುಂಪು) ಹಿಡಿತದಿಂದ ತಪ್ಪಿಸಲು ಬೆಳಿಗ್ಗೆಯಿಂದ ನಡೆಸಿದ ಯತ್ನ ವಿಫಲವಾಗಿದೆ.</p>.<p>ಮಸೀದಿಯಿಂದ ಹೊರಬರುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಭಯೋತ್ಪಾದಕರು ತಿರಸ್ಕರಿಸಿದ್ದಾರೆ. ಮಸೀದಿಯ ಆವರಣದಲ್ಲಿ ವಿಧಿಸಲಾಗಿರುವ ಅನಿರ್ದಿಷ್ಟ ಅವಧಿಯ ಕರ್ಫ್ಯೂ ಮುಂದುವರಿದಿದೆ.</p>.<p>ಈ ನಡುವೆ, ಮಸೀದಿ ಆವರಣದಲ್ಲಿ ನಿನ್ನೆ ನಡೆದ ಕಾಳಗದಲ್ಲಿ ಭದ್ರತಾ ಪಡೆಯ 16 ಮಂದಿ ಮತ್ತು 14 ಮಂದಿ ಭಯೋತ್ಪಾದಕರು ಸತ್ತಿದ್ದಾರೆ ಎಂದು ಜೆಕೆಎಲ್ಎಫ್ ವಕ್ತಾರರು ಹೇಳಿದ್ದಾರೆ. ಈ ಹೇಳಿಕೆಯನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಕಾಳಗದಲ್ಲಿ ಮೃತರಾದವರ ದೇಹಗಳನ್ನು ತೆಗೆಯಲು ಉಗ್ರಗಾಮಿಗಳು ಅವಕಾಶ ನೀಡಲಿಲ್ಲ.</p>.<p><strong>ಬಿಜೆಪಿ ಮೊದಲ ಪಟ್ಟಿಯಲ್ಲಿ 272 ಮಂದಿಗೆ ಟಿಕೆಟ್</strong></p>.<p><strong>ನವದೆಹಲಿ, ಮಾರ್ಚ್ 25– </strong>ಲೋಕಸಭೆಯ ಚುನಾವಣೆಗೆ 475 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಭಾರತೀಯ ಜನತಾ ಪಕ್ಷವು ಕರ್ನಾಟಕದ 22 ಹಾಗೂ 17 ರಾಜ್ಯಗಳ 272 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಇಲ್ಲಿ ಬಿಡುಗಡೆ ಮಾಡಿದೆ.</p>.<p>ಪ್ರಧಾನಿ ಪಟ್ಟಕ್ಕೆ ಹೆಸರಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್, ಲೋಕಸಭೆಯ ಉಪಸಭಾಪತಿ ಎಸ್.ಮಲ್ಲಿಕಾರ್ಜುನಯ್ಯ, ಪಕ್ಷದ ಮಾಜಿ ಅಧ್ಯಕ್ಷ ಡಾ. ಮುರಳಿ ಮನೋಹರ ಜೋಷಿ, ರಾಜಮಾತಾ ವಿಜಯರಾಜೇ ಸಿಂಧಿಯಾ, ಸಿಕಂದರ್ ಬಖ್ತ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಜರತ್ಬಾಲ್ ಮುಕ್ತಿ ಯತ್ನ ವಿಫಲ</strong></p>.<p><strong>ಶ್ರೀನಗರ, ಮಾರ್ಚ್ 25 (ಯುಎನ್ಐ, ಪಿಟಿಐ)–</strong> ಹಜರತ್ಬಾಲ್ ಮಸೀದಿಯನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಷಬ್ಬೀರ್ ಸಿದ್ದೀಖ್ ಗುಂಪು) ಹಿಡಿತದಿಂದ ತಪ್ಪಿಸಲು ಬೆಳಿಗ್ಗೆಯಿಂದ ನಡೆಸಿದ ಯತ್ನ ವಿಫಲವಾಗಿದೆ.</p>.<p>ಮಸೀದಿಯಿಂದ ಹೊರಬರುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಭಯೋತ್ಪಾದಕರು ತಿರಸ್ಕರಿಸಿದ್ದಾರೆ. ಮಸೀದಿಯ ಆವರಣದಲ್ಲಿ ವಿಧಿಸಲಾಗಿರುವ ಅನಿರ್ದಿಷ್ಟ ಅವಧಿಯ ಕರ್ಫ್ಯೂ ಮುಂದುವರಿದಿದೆ.</p>.<p>ಈ ನಡುವೆ, ಮಸೀದಿ ಆವರಣದಲ್ಲಿ ನಿನ್ನೆ ನಡೆದ ಕಾಳಗದಲ್ಲಿ ಭದ್ರತಾ ಪಡೆಯ 16 ಮಂದಿ ಮತ್ತು 14 ಮಂದಿ ಭಯೋತ್ಪಾದಕರು ಸತ್ತಿದ್ದಾರೆ ಎಂದು ಜೆಕೆಎಲ್ಎಫ್ ವಕ್ತಾರರು ಹೇಳಿದ್ದಾರೆ. ಈ ಹೇಳಿಕೆಯನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಕಾಳಗದಲ್ಲಿ ಮೃತರಾದವರ ದೇಹಗಳನ್ನು ತೆಗೆಯಲು ಉಗ್ರಗಾಮಿಗಳು ಅವಕಾಶ ನೀಡಲಿಲ್ಲ.</p>.<p><strong>ಬಿಜೆಪಿ ಮೊದಲ ಪಟ್ಟಿಯಲ್ಲಿ 272 ಮಂದಿಗೆ ಟಿಕೆಟ್</strong></p>.<p><strong>ನವದೆಹಲಿ, ಮಾರ್ಚ್ 25– </strong>ಲೋಕಸಭೆಯ ಚುನಾವಣೆಗೆ 475 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಭಾರತೀಯ ಜನತಾ ಪಕ್ಷವು ಕರ್ನಾಟಕದ 22 ಹಾಗೂ 17 ರಾಜ್ಯಗಳ 272 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಇಲ್ಲಿ ಬಿಡುಗಡೆ ಮಾಡಿದೆ.</p>.<p>ಪ್ರಧಾನಿ ಪಟ್ಟಕ್ಕೆ ಹೆಸರಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್, ಲೋಕಸಭೆಯ ಉಪಸಭಾಪತಿ ಎಸ್.ಮಲ್ಲಿಕಾರ್ಜುನಯ್ಯ, ಪಕ್ಷದ ಮಾಜಿ ಅಧ್ಯಕ್ಷ ಡಾ. ಮುರಳಿ ಮನೋಹರ ಜೋಷಿ, ರಾಜಮಾತಾ ವಿಜಯರಾಜೇ ಸಿಂಧಿಯಾ, ಸಿಕಂದರ್ ಬಖ್ತ್ ಅವರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>