<p><strong>ಭಾರತದ ಆರ್ಥಿಕ ಅಭಿವೃದ್ಧಿಗೆ ಎಲ್ಲ ನೆರವು: ಅಮೆರಿಕ ಭರವಸೆ</strong></p>.<p>ನವದೆಹಲಿ, ಜ. 15 (ಪಿಟಿಐ)– ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ವೃದ್ಧಿಪಡಿಸಿಕೊಳ್ಳಲು ಅಮೆರಿಕ ಬದ್ಧವಾಗಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಅರ್ಹ ಸ್ಥಾನ ಗಳಿಸಿಕೊಳ್ಳು<br />ವಂತೆ ಮಾಡಲು ಅದರ ಆರ್ಥಿಕ ಸುಧಾರಣೆಗಳಿಗೆ ತಮ್ಮ ದೇಶ ಬೆಂಬಲ ನೀಡುವುದು ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ರೊನಾಲ್ಡ್ ಬ್ರೌನ್ ಹೇಳಿದರು.</p>.<p>ಉನ್ನತ ನಿಯೋಗದ ನಾಯಕರಾಗಿ ಭಾರತಕ್ಕೆ ಆಗಮಿಸಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.</p>.<p><strong>ಕಿಡ್ನಿ ವಲಸೆ</strong></p>.<p>ನವದೆಹಲಿ, ಜ. 15 (ಯುಎನ್ಐ)– ಭಾರತೀಯರು ಹೆಚ್ಚು ಹೆಚ್ಚಾಗಿ ವಿದೇಶಗಳಲ್ಲಿ ಕಿಡ್ನಿ ಮಾರಾಟ ಮಾಡಲು ಆರಂಭಿಸಿರುವ ಕಾರಣ ದೇಶದಲ್ಲಿ ಈಗ ಕಿಡ್ನಿಗಳ ವಲಸೆ ಆರಂಭವಾಗಿದೆ.</p>.<p>ಪ್ರವಾಸಕ್ಕಾಗಿ ವಿದೇಶಗಳಿಗೆ ಹೋಗಿ ಕಿಡ್ನಿ ಮಾರಾಟ ಮಾಡಿ ಬರುವ ಜಾಲವೊಂದನ್ನು ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಯಾಣಿಕರು ತಮ್ಮ ಹೊಟ್ಟೆಯಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ನಡೆಸುತ್ತಿದ್ದಾರೆಯೇ ಎಂದು ಪರೀಕ್ಷಿಸಿದಾಗ ಈ ವಿಷಯ ಪತ್ತೆಯಾಯಿತು.</p>.<p><strong>ಧ್ವಜಾರೋಹಣ: ಬಿಜೆಪಿ ಗಡುವು</strong></p>.<p>ಬೆಳಗಾವಿ, ಜ. 15– ಹುಬ್ಬಳ್ಳಿಯ ವಿವಾದಿತ ಈದಗಾ ಮೈದಾನದಲ್ಲಿ ಈ ಸಾರಿಯಾದರೂ ಗಣರಾಜ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡುವ ಸಂಬಂಧದಲ್ಲಿ ಇದೇ 19ರೊಳಗಾಗಿ ಸರ್ಕಾರ ಖಚಿತ ನಿಲುವನ್ನು ತಿಳಿಸಬೇಕು ಎಂದು ಬಿಜೆಪಿ ಧುರೀಣ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಗಡುವು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತದ ಆರ್ಥಿಕ ಅಭಿವೃದ್ಧಿಗೆ ಎಲ್ಲ ನೆರವು: ಅಮೆರಿಕ ಭರವಸೆ</strong></p>.<p>ನವದೆಹಲಿ, ಜ. 15 (ಪಿಟಿಐ)– ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ವೃದ್ಧಿಪಡಿಸಿಕೊಳ್ಳಲು ಅಮೆರಿಕ ಬದ್ಧವಾಗಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಅರ್ಹ ಸ್ಥಾನ ಗಳಿಸಿಕೊಳ್ಳು<br />ವಂತೆ ಮಾಡಲು ಅದರ ಆರ್ಥಿಕ ಸುಧಾರಣೆಗಳಿಗೆ ತಮ್ಮ ದೇಶ ಬೆಂಬಲ ನೀಡುವುದು ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ರೊನಾಲ್ಡ್ ಬ್ರೌನ್ ಹೇಳಿದರು.</p>.<p>ಉನ್ನತ ನಿಯೋಗದ ನಾಯಕರಾಗಿ ಭಾರತಕ್ಕೆ ಆಗಮಿಸಿರುವ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.</p>.<p><strong>ಕಿಡ್ನಿ ವಲಸೆ</strong></p>.<p>ನವದೆಹಲಿ, ಜ. 15 (ಯುಎನ್ಐ)– ಭಾರತೀಯರು ಹೆಚ್ಚು ಹೆಚ್ಚಾಗಿ ವಿದೇಶಗಳಲ್ಲಿ ಕಿಡ್ನಿ ಮಾರಾಟ ಮಾಡಲು ಆರಂಭಿಸಿರುವ ಕಾರಣ ದೇಶದಲ್ಲಿ ಈಗ ಕಿಡ್ನಿಗಳ ವಲಸೆ ಆರಂಭವಾಗಿದೆ.</p>.<p>ಪ್ರವಾಸಕ್ಕಾಗಿ ವಿದೇಶಗಳಿಗೆ ಹೋಗಿ ಕಿಡ್ನಿ ಮಾರಾಟ ಮಾಡಿ ಬರುವ ಜಾಲವೊಂದನ್ನು ಇತ್ತೀಚೆಗೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಯಾಣಿಕರು ತಮ್ಮ ಹೊಟ್ಟೆಯಲ್ಲಿ ಮಾದಕದ್ರವ್ಯ ಕಳ್ಳಸಾಗಣೆ ನಡೆಸುತ್ತಿದ್ದಾರೆಯೇ ಎಂದು ಪರೀಕ್ಷಿಸಿದಾಗ ಈ ವಿಷಯ ಪತ್ತೆಯಾಯಿತು.</p>.<p><strong>ಧ್ವಜಾರೋಹಣ: ಬಿಜೆಪಿ ಗಡುವು</strong></p>.<p>ಬೆಳಗಾವಿ, ಜ. 15– ಹುಬ್ಬಳ್ಳಿಯ ವಿವಾದಿತ ಈದಗಾ ಮೈದಾನದಲ್ಲಿ ಈ ಸಾರಿಯಾದರೂ ಗಣರಾಜ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡುವ ಸಂಬಂಧದಲ್ಲಿ ಇದೇ 19ರೊಳಗಾಗಿ ಸರ್ಕಾರ ಖಚಿತ ನಿಲುವನ್ನು ತಿಳಿಸಬೇಕು ಎಂದು ಬಿಜೆಪಿ ಧುರೀಣ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಇಲ್ಲಿ ಗಡುವು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>