ಇದಕ್ಕೂ ಮೊದಲು ಸಭೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರು ಪ್ರತ್ಯೇಕ ರಾಜ್ಯ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಇದಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಹೇಳಿದಾಗ ಎಬಿವಿಪಿ ಸದಸ್ಯರು ಮತ್ತು ವೇದಿಕೆ ಕಾರ್ಯಕರ್ತರ ನಡುವೆ ತಳ್ಳಾಟ, ಹೊಡೆದಾಟ ನಡೆಯಿತು. ಎಬಿವಿಪಿ ಹುಬ್ಬಳ್ಳಿ ಘಟಕದ ಜಂಟಿ ಕಾರ್ಯದರ್ಶಿ ಉಮೇಶ ಜೋಶಿ ಘರ್ಷಣೆಯಲ್ಲಿ ಗಾಯಗೊಂಡರು.