ನವದೆಹಲಿ, ಜ. 4– ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ್ ಅವರು ನೀಡಲಿರುವ ವರದಿ ಆಧರಿಸಿ ರಾಜ್ಯ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು ಪಕ್ಷದ ವರಿಷ್ಠ ಮಂಡಳಿ ನಿರ್ಧರಿಸಿದೆ. ಬಿಕ್ಕಟ್ಟು ನಿವಾರಣೆ ದಿಶೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಸಾಧ್ಯತೆಯನ್ನೂ ವರಿಷ್ಠ ಮಂಡಳಿ ತಳ್ಳಿ ಹಾಕಿಲ್ಲ.