ಬೆಂಗಳೂರು, ಜ. 1– ದೇಶದ ಭದ್ರತೆಗೆ ಮಾರಕವಾದ ‘ಗ್ಯಾಟ್’ ಒಪ್ಪಂದವನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾದ ಭಾರತ ಸರ್ಕಾರ ಅದರ ಷರತ್ತುಗಳನ್ನು ಮೀರಿ ರಾಷ್ಟ್ರದ ಬಿತ್ತನೆ ಬೀಜ ಕಾನೂನನ್ನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಶಾಸಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಇಂದು ಇಲ್ಲಿ ಆಪಾದಿಸಿದರು.