<p>ಎಸ್.ಎಂ. ಕೃಷ್ಣ ಸೇರಿ ಎಂಟು ಸಚಿವರ ರಾಜೀನಾಮೆ</p>.<p>ಬೆಂಗಳೂರು, ಜ. 3– ವಿಧಾನ ಸಭೆಯಲ್ಲಿ ಇಂದು ನಡೆದ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸೇರಿದಂತೆ ಎಂಟು ಮಂದಿ ಭಿನ್ನಮತೀಯ ಸಚಿವರು ರಾಜ್ಯಪಾಲರಿಗೇ ನೇರವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p>ವಿಧಾನಸಭೆಯ ಕಲಾಪಗಳ ಮಧ್ಯೆ ಸದನ ಬಿಟ್ಟು ಹೊರ ನಡೆದ ಕೃಷ್ಣ ಅವರನ್ನು ಭಿನ್ನ ಸಚಿವರು ಹಿಂಬಾಲಿಸಿದರು. ಅವರ<br />ಮನೆಯಲ್ಲಿ ತುಸು ಹೊತ್ತು ಸಭೆ ನಡೆಸಿ ನಂತರ ಒಟ್ಟಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಎಲ್ಲರೂ ಪ್ರತ್ಯೇಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p><strong>ಸದನ ವಿಸರ್ಜನೆಗೆ ಪ್ರತಿಪಕ್ಷ ಆಗ್ರಹ</strong></p>.<p>ಬೆಂಗಳೂರು, ಜ. 3– ಬಹುಮತ ಕಳೆದು ಕೊಂಡಿರುವ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರವನ್ನು ವಜಾ ಮಾಡಿ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ವಿರೋಧ ಪಕ್ಷಗಳು ಇಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರನ್ನು ಒತ್ತಾಯಿಸಿದವು.</p>.<p><strong>ಲಂಕೇಶ್ಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ</strong></p>.<p>ಬೆಂಗಳೂರು, ಜ. 3– ಕನ್ನಡದ ಪ್ರಖ್ಯಾತ ಸೃಜನಶೀಲ ಬರಹಗಾರ ಪಿ. ಲಂಕೇಶ್ ಅವರ ‘ಕಲ್ಲು ಕರಗುವ ಸಮಯ’ ಕಥಾ<br />ಸಂಕಲನಕ್ಕೆ 1993ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.</p>.<p>ಪ್ರೊ. ಕೀರ್ತಿನಾಥ ಕುರ್ತಕೋಟಿ ಅವರು ಅನುವಾದಿಸಿದ ‘ಮರಾಠಿ ಸಂಸ್ಕೃತಿ– ಕೆಲವು ಸಮಸ್ಯೆಗಳು’ ಕೃತಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಗಳಿಸಿದೆ. ವಿವಿಧ ಭಾಷೆಗಳ 21 ಕೃತಿಗಳು ಈ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು 17 ಅನುವಾದ ಕೃತಿಗಳೂ ಪ್ರಶಸ್ತಿಗೆ ಆಯ್ಕೆಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಸ್.ಎಂ. ಕೃಷ್ಣ ಸೇರಿ ಎಂಟು ಸಚಿವರ ರಾಜೀನಾಮೆ</p>.<p>ಬೆಂಗಳೂರು, ಜ. 3– ವಿಧಾನ ಸಭೆಯಲ್ಲಿ ಇಂದು ನಡೆದ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸೇರಿದಂತೆ ಎಂಟು ಮಂದಿ ಭಿನ್ನಮತೀಯ ಸಚಿವರು ರಾಜ್ಯಪಾಲರಿಗೇ ನೇರವಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p>ವಿಧಾನಸಭೆಯ ಕಲಾಪಗಳ ಮಧ್ಯೆ ಸದನ ಬಿಟ್ಟು ಹೊರ ನಡೆದ ಕೃಷ್ಣ ಅವರನ್ನು ಭಿನ್ನ ಸಚಿವರು ಹಿಂಬಾಲಿಸಿದರು. ಅವರ<br />ಮನೆಯಲ್ಲಿ ತುಸು ಹೊತ್ತು ಸಭೆ ನಡೆಸಿ ನಂತರ ಒಟ್ಟಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಎಲ್ಲರೂ ಪ್ರತ್ಯೇಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.</p>.<p><strong>ಸದನ ವಿಸರ್ಜನೆಗೆ ಪ್ರತಿಪಕ್ಷ ಆಗ್ರಹ</strong></p>.<p>ಬೆಂಗಳೂರು, ಜ. 3– ಬಹುಮತ ಕಳೆದು ಕೊಂಡಿರುವ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರವನ್ನು ವಜಾ ಮಾಡಿ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ವಿರೋಧ ಪಕ್ಷಗಳು ಇಂದು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರನ್ನು ಒತ್ತಾಯಿಸಿದವು.</p>.<p><strong>ಲಂಕೇಶ್ಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ</strong></p>.<p>ಬೆಂಗಳೂರು, ಜ. 3– ಕನ್ನಡದ ಪ್ರಖ್ಯಾತ ಸೃಜನಶೀಲ ಬರಹಗಾರ ಪಿ. ಲಂಕೇಶ್ ಅವರ ‘ಕಲ್ಲು ಕರಗುವ ಸಮಯ’ ಕಥಾ<br />ಸಂಕಲನಕ್ಕೆ 1993ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.</p>.<p>ಪ್ರೊ. ಕೀರ್ತಿನಾಥ ಕುರ್ತಕೋಟಿ ಅವರು ಅನುವಾದಿಸಿದ ‘ಮರಾಠಿ ಸಂಸ್ಕೃತಿ– ಕೆಲವು ಸಮಸ್ಯೆಗಳು’ ಕೃತಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಗಳಿಸಿದೆ. ವಿವಿಧ ಭಾಷೆಗಳ 21 ಕೃತಿಗಳು ಈ ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು 17 ಅನುವಾದ ಕೃತಿಗಳೂ ಪ್ರಶಸ್ತಿಗೆ ಆಯ್ಕೆಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>