<p><strong>ಕಾವೇರಿ: ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ</strong></p>.<p>ನವದೆಹಲಿ, ಡಿ. 16– ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಬಿಳಿಗುಂಡ್ಲು ಹಾಗೂ ಮೆಟ್ಟೂರುಗಳಲ್ಲಿ ಹರಿದು ಬರುವ ನೀರಿನ ಪ್ರಮಾಣ ಹಾಗೂ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲು ಇಂದು ಇಲ್ಲಿ ಸೇರಿದ ದಕ್ಷಿಣದ ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳ ಸಭೆ ನಿರ್ಧರಿಸಿತು.</p>.<p><strong>‘ಗ್ಯಾಟ್’ ಒಪ್ಪಂದ ವಿರುದ್ಧ ಮತ್ತೆ ಸಂಸತ್ತಿನಲ್ಲಿ ಗದ್ದಲ</strong></p>.<p>ನವದೆಹಲಿ, ಡಿ. 16 (ಪಿಟಿಐ, ಯುಎನ್ಐ)– ಜಿನೀವಾದಲ್ಲಿ ನಿನ್ನೆ ‘ಗ್ಯಾಟ್’ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಮೆರಿಕಕ್ಕೆ ‘ಮಾರಿಕೊಂಡಿದೆ’ ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ಸಂಬಂಧ ಪ್ರಧಾನಿ ನರಸಿಂಹರಾವ್ ಅವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದುದರಿಂದ ಉಭಯ ಸದನಗಳಲ್ಲಿ ಎರಡನೇ ದಿನವಾದ ಇಂದೂ ಸಹ ಗದ್ದಲ, ಕೋಲಾಹಲ ಉಂಟಾಗಿ ಕಲಾಪ ಪೂರ್ಣ ಅಸ್ತವ್ಯಸ್ತಗೊಂಡಿತು.</p>.<p><strong>ಅನಕ್ಷರತೆ ನಿರ್ಮೂಲನ: 9 ರಾಷ್ಟ್ರ ನಿರ್ಧಾರ</strong></p>.<p>ನವದೆಹಲಿ, ಡಿ. 16 (ಪಿಟಿಐ)– ಪ್ರಸ್ತುತ ಶತಮಾನದಂತ್ಯದ ವೇಳೆಗೆ ಅನಕ್ಷರತೆ ನಿರ್ಮೂಲನಕ್ಕೆ ಪಣ ತೊಟ್ಟ ಅನಕ್ಷರಸ್ಥರ ಸಂಖ್ಯೆ ಅತಿಯಾಗಿರುವ ಒಂಬತ್ತು ರಾಷ್ಟ್ರಗಳು ಈ ದಿಸೆಯಲ್ಲಿ ಕೈಗೊಳ್ಳಲಿರುವ ಶಿಕ್ಷಣ ಕಾರ್ಯಕ್ರಮಗಳಿಗೆ ಅಧಿಕ ಆರ್ಥಿಕ ನೆರವು ನೀಡುವಂತೆ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮನವಿ ಮಾಡಿದವು.</p>.<p><strong>‘ಭಾರತಕ್ಕೆ ಲಾಭವೇ ಹೆಚ್ಚು’</strong></p>.<p>ನವದೆಹಲಿ, ಡಿ. 16 (ಯುಎನ್ಐ)– ಉರುಗ್ವೆ ಒಪ್ಪಂದ ಮೂಲಕ ವಿಶ್ವ ವಾಣಿಜ್ಯವನ್ನು ವಿಸ್ತರಿಸುವುದರಿಂದ ಭಾರತಕ್ಕೆ ಹೆಚ್ಚು ಲಾಭ ಆಗುವುದೆಂಬುದು ಸರ್ಕಾರದ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ</strong></p>.<p>ನವದೆಹಲಿ, ಡಿ. 16– ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಬಿಳಿಗುಂಡ್ಲು ಹಾಗೂ ಮೆಟ್ಟೂರುಗಳಲ್ಲಿ ಹರಿದು ಬರುವ ನೀರಿನ ಪ್ರಮಾಣ ಹಾಗೂ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲು ಇಂದು ಇಲ್ಲಿ ಸೇರಿದ ದಕ್ಷಿಣದ ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳ ಸಭೆ ನಿರ್ಧರಿಸಿತು.</p>.<p><strong>‘ಗ್ಯಾಟ್’ ಒಪ್ಪಂದ ವಿರುದ್ಧ ಮತ್ತೆ ಸಂಸತ್ತಿನಲ್ಲಿ ಗದ್ದಲ</strong></p>.<p>ನವದೆಹಲಿ, ಡಿ. 16 (ಪಿಟಿಐ, ಯುಎನ್ಐ)– ಜಿನೀವಾದಲ್ಲಿ ನಿನ್ನೆ ‘ಗ್ಯಾಟ್’ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಮೆರಿಕಕ್ಕೆ ‘ಮಾರಿಕೊಂಡಿದೆ’ ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ಸಂಬಂಧ ಪ್ರಧಾನಿ ನರಸಿಂಹರಾವ್ ಅವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದುದರಿಂದ ಉಭಯ ಸದನಗಳಲ್ಲಿ ಎರಡನೇ ದಿನವಾದ ಇಂದೂ ಸಹ ಗದ್ದಲ, ಕೋಲಾಹಲ ಉಂಟಾಗಿ ಕಲಾಪ ಪೂರ್ಣ ಅಸ್ತವ್ಯಸ್ತಗೊಂಡಿತು.</p>.<p><strong>ಅನಕ್ಷರತೆ ನಿರ್ಮೂಲನ: 9 ರಾಷ್ಟ್ರ ನಿರ್ಧಾರ</strong></p>.<p>ನವದೆಹಲಿ, ಡಿ. 16 (ಪಿಟಿಐ)– ಪ್ರಸ್ತುತ ಶತಮಾನದಂತ್ಯದ ವೇಳೆಗೆ ಅನಕ್ಷರತೆ ನಿರ್ಮೂಲನಕ್ಕೆ ಪಣ ತೊಟ್ಟ ಅನಕ್ಷರಸ್ಥರ ಸಂಖ್ಯೆ ಅತಿಯಾಗಿರುವ ಒಂಬತ್ತು ರಾಷ್ಟ್ರಗಳು ಈ ದಿಸೆಯಲ್ಲಿ ಕೈಗೊಳ್ಳಲಿರುವ ಶಿಕ್ಷಣ ಕಾರ್ಯಕ್ರಮಗಳಿಗೆ ಅಧಿಕ ಆರ್ಥಿಕ ನೆರವು ನೀಡುವಂತೆ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮನವಿ ಮಾಡಿದವು.</p>.<p><strong>‘ಭಾರತಕ್ಕೆ ಲಾಭವೇ ಹೆಚ್ಚು’</strong></p>.<p>ನವದೆಹಲಿ, ಡಿ. 16 (ಯುಎನ್ಐ)– ಉರುಗ್ವೆ ಒಪ್ಪಂದ ಮೂಲಕ ವಿಶ್ವ ವಾಣಿಜ್ಯವನ್ನು ವಿಸ್ತರಿಸುವುದರಿಂದ ಭಾರತಕ್ಕೆ ಹೆಚ್ಚು ಲಾಭ ಆಗುವುದೆಂಬುದು ಸರ್ಕಾರದ ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>