ನವದೆಹಲಿ, ಡಿ. 16 (ಪಿಟಿಐ, ಯುಎನ್ಐ)– ಜಿನೀವಾದಲ್ಲಿ ನಿನ್ನೆ ‘ಗ್ಯಾಟ್’ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರವನ್ನು ಅಮೆರಿಕಕ್ಕೆ ‘ಮಾರಿಕೊಂಡಿದೆ’ ಎಂದು ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ಸಂಬಂಧ ಪ್ರಧಾನಿ ನರಸಿಂಹರಾವ್ ಅವರು ಹೇಳಿಕೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದುದರಿಂದ ಉಭಯ ಸದನಗಳಲ್ಲಿ ಎರಡನೇ ದಿನವಾದ ಇಂದೂ ಸಹ ಗದ್ದಲ, ಕೋಲಾಹಲ ಉಂಟಾಗಿ ಕಲಾಪ ಪೂರ್ಣ ಅಸ್ತವ್ಯಸ್ತಗೊಂಡಿತು.