<p><strong>ಕಾಶ್ಮೀರದಿಂದ ಸೇನೆ ವಾಪಸಿಗೆ ಪಾಕ್ ಆಗ್ರಹ</strong></p>.<p>ಇಸ್ಲಾಮಾಬಾದ್, ಜ. 2 (ಪಿಟಿಐ, ಯುಎನ್ಐ)– ಕಾಶ್ಮೀರ ವಿವಾದದ ಕುರಿತು ತನ್ನ ಬಿಗಿ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳಿಗೆ ಸಂಬಂಧಪಟ್ಟಂತೆ ಭಾರತವು ‘ನಿರ್ದಿಷ್ಟ’ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯಪಡಿಸಿದ್ದಾರೆ.</p>.<p>ಕಾಶ್ಮೀರ ಕಣಿವೆಯಿಂದ ಭಾರತದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದೂ ಸೇರಿದಂತೆ ದಮನಕಾರಿ ಕ್ರಮಗಳನ್ನು ರದ್ದುಗೊಳಿಸಬೇಕೆಂಬುದು ಪಾಕಿಸ್ತಾನದ ಪ್ರಮುಖ ಬೇಡಿಕೆಯಾಗಿರುವುದು ಸ್ಪಷ್ಟವಾಗಿದೆ.</p>.<p>ಭಾರತದ ವಿದೇಶಾಂಗ ಕಾರ್ಯದರ್ಶಿ ಜೆ.ಎನ್. ದೀಕ್ಷಿತ್ ಅವರು ಪಾಕಿಸ್ತಾನದ ಷಹರ್ಯಾರ್ ಖಾನ್ ಅವರೊಡನೆ ಇಂದು ಇಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿದ ನಂತರ ಬೆನಜೀರ್ ಅವರನ್ನು ಭೇಟಿಯಾದಾಗ ಅವರು ಪಾಕಿಸ್ತಾನದ ಈ ನಿಲುವನ್ನು ತಿಳಿಸಿದರು.</p>.<p><strong>ಹರ್ಷದ್ ವಿರುದ್ಧ ಆರೋಪಪಟ್ಟಿ ಸಿದ್ಧ</strong></p>.<p>ನವದೆಹಲಿ, ಜ. 2 (ಪಿಟಿಐ)– ರಾಷ್ಟ್ರೀಯ ಗೃಹ ನಿರ್ಮಾಣ ಮಂಡಳಿಗೆ (ಎನ್ಎಚ್ಬಿ) 1,214 ಕೋಟಿ ರೂಪಾಯಿಗಳಷ್ಟು ಹಣ ವಂಚಿಸಿದ ಆರೋಪದ ಮೇಲೆ ಷೇರು ದಳ್ಳಾಳಿ ಹರ್ಷದ್ ಮೆಹ್ತಾ ಅವರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಪಟ್ಟಿಯೊಂದನ್ನು ಅಂತಿಮಗೊಳಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರದಿಂದ ಸೇನೆ ವಾಪಸಿಗೆ ಪಾಕ್ ಆಗ್ರಹ</strong></p>.<p>ಇಸ್ಲಾಮಾಬಾದ್, ಜ. 2 (ಪಿಟಿಐ, ಯುಎನ್ಐ)– ಕಾಶ್ಮೀರ ವಿವಾದದ ಕುರಿತು ತನ್ನ ಬಿಗಿ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳಿಗೆ ಸಂಬಂಧಪಟ್ಟಂತೆ ಭಾರತವು ‘ನಿರ್ದಿಷ್ಟ’ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯಪಡಿಸಿದ್ದಾರೆ.</p>.<p>ಕಾಶ್ಮೀರ ಕಣಿವೆಯಿಂದ ಭಾರತದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದೂ ಸೇರಿದಂತೆ ದಮನಕಾರಿ ಕ್ರಮಗಳನ್ನು ರದ್ದುಗೊಳಿಸಬೇಕೆಂಬುದು ಪಾಕಿಸ್ತಾನದ ಪ್ರಮುಖ ಬೇಡಿಕೆಯಾಗಿರುವುದು ಸ್ಪಷ್ಟವಾಗಿದೆ.</p>.<p>ಭಾರತದ ವಿದೇಶಾಂಗ ಕಾರ್ಯದರ್ಶಿ ಜೆ.ಎನ್. ದೀಕ್ಷಿತ್ ಅವರು ಪಾಕಿಸ್ತಾನದ ಷಹರ್ಯಾರ್ ಖಾನ್ ಅವರೊಡನೆ ಇಂದು ಇಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿದ ನಂತರ ಬೆನಜೀರ್ ಅವರನ್ನು ಭೇಟಿಯಾದಾಗ ಅವರು ಪಾಕಿಸ್ತಾನದ ಈ ನಿಲುವನ್ನು ತಿಳಿಸಿದರು.</p>.<p><strong>ಹರ್ಷದ್ ವಿರುದ್ಧ ಆರೋಪಪಟ್ಟಿ ಸಿದ್ಧ</strong></p>.<p>ನವದೆಹಲಿ, ಜ. 2 (ಪಿಟಿಐ)– ರಾಷ್ಟ್ರೀಯ ಗೃಹ ನಿರ್ಮಾಣ ಮಂಡಳಿಗೆ (ಎನ್ಎಚ್ಬಿ) 1,214 ಕೋಟಿ ರೂಪಾಯಿಗಳಷ್ಟು ಹಣ ವಂಚಿಸಿದ ಆರೋಪದ ಮೇಲೆ ಷೇರು ದಳ್ಳಾಳಿ ಹರ್ಷದ್ ಮೆಹ್ತಾ ಅವರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಪಟ್ಟಿಯೊಂದನ್ನು ಅಂತಿಮಗೊಳಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>