<p><strong>ಕೃಷ್ಣಾ ನೀರಾವರಿ ಬಾಂಡ್ಗೆ ಒಪ್ಪಿಗೆ: ರಾಜ್ಯದ ವಾರ್ಷಿಕ ಯೋಜನೆ ಮೊತ್ತ 3275 ಕೋಟಿ ರೂ.</strong></p>.<p>ನವದೆಹಲಿ, ಡಿ. 14– ಕರ್ನಾಟಕದ 1994–95ನೇ ಸಾಲಿನ ಯೋಜನೆ ಗಾತ್ರವು ಶೇಕಡಾ 8 ರಷ್ಟು ಹೆಚ್ಚಿದೆ; ಅಂದರೆ ವಾರ್ಷಿಕ ಯೋಜನೆಯ ಒಟ್ಟು ವೆಚ್ಚ 3,275 ಕೋಟಿ ರೂ. ಆಗಲಿದೆ. ಪ್ರಸಕ್ತ ವರ್ಷದ ಯೋಜನೆ ವೆಚ್ಚ 3025 ಕೋಟಿ ರೂ. ಆಗಿತ್ತು.</p>.<p><strong>ಅತ್ಯಾಕರ್ಷಕ ವೈಮಾನಿಕ ಪ್ರದರ್ಶನ</strong></p>.<p>ಬೆಂಗಳೂರು, ಡಿ. 14– ಭಾರತದಲ್ಲಿ ನಡೆಯುತ್ತಿರುವ ಪ್ರಥಮ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ‘ಏವಿಯಾ ಇಂಡಿಯಾ–93’ ನೀಡಲಿರುವ ಆವಿಸ್ಮರಣೀಯ ವೈಮಾನಿಕ ಕಸರತ್ತು–ಚಾಕಚಕ್ಯತೆಗೆ ಸಾಕ್ಷಿಯಾಗಲು ನಗರದ ಯಲಹಂಕದಲ್ಲಿನ ವಾಯುಪಡೆ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಇಲ್ಲಿನ ವಾಯುಮಂಡಲವಿಡೀ ಕಸರತ್ತುಗಾರರ ಅಂಕೆಗೆ ಒಳಪಡಲಿದೆ.</p>.<p><strong>ನೋಟೀಸಿಗೆ ಬಂಗಾರಪ್ಪ ಉತ್ತರ</strong></p>.<p>ಮೈಸೂರು, ಡಿ. 14– ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಲಿ ತಮಗೆ ನೀಡಿದ್ದ ಷೋಕಾಸ್ ನೋಟೀಸಿಗೆ ಇಂದು ಉತ್ತರ ಕಳುಹಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಇಂದು ಇಲ್ಲಿ ಹೇಳಿದರು.</p>.<p>ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ಆಧರಿಸಿ ಷೋಕಾಸ್ ನೋಟೀಸ್ ನೀಡಲಾಗಿತ್ತು. ಆ ಸಂದರ್ಶನವನ್ನು ಈಗಲೂ ನಾನು ಸಮರ್ಥಿಸುತ್ತೇನೆ’ ಎಂದರು.</p>.<p>‘ಯಾವ ರೀತಿ ಉತ್ತರ ನೀಡಿದ್ದೀರಿ?’ ಎಂಬ ಪ್ರಶ್ನೆಗೆ ಷೋಕಾಸ್ ನೋಟೀಸ್ ಗುಟ್ಟಿನ ಮಾದರಿಯಲ್ಲಿತ್ತು. ಉತ್ತರ ಕೂಡ ಅದೇ ರೀತಿಯಲ್ಲಿದೆ. ಅದರ ವಿವರಗಳನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣಾ ನೀರಾವರಿ ಬಾಂಡ್ಗೆ ಒಪ್ಪಿಗೆ: ರಾಜ್ಯದ ವಾರ್ಷಿಕ ಯೋಜನೆ ಮೊತ್ತ 3275 ಕೋಟಿ ರೂ.</strong></p>.<p>ನವದೆಹಲಿ, ಡಿ. 14– ಕರ್ನಾಟಕದ 1994–95ನೇ ಸಾಲಿನ ಯೋಜನೆ ಗಾತ್ರವು ಶೇಕಡಾ 8 ರಷ್ಟು ಹೆಚ್ಚಿದೆ; ಅಂದರೆ ವಾರ್ಷಿಕ ಯೋಜನೆಯ ಒಟ್ಟು ವೆಚ್ಚ 3,275 ಕೋಟಿ ರೂ. ಆಗಲಿದೆ. ಪ್ರಸಕ್ತ ವರ್ಷದ ಯೋಜನೆ ವೆಚ್ಚ 3025 ಕೋಟಿ ರೂ. ಆಗಿತ್ತು.</p>.<p><strong>ಅತ್ಯಾಕರ್ಷಕ ವೈಮಾನಿಕ ಪ್ರದರ್ಶನ</strong></p>.<p>ಬೆಂಗಳೂರು, ಡಿ. 14– ಭಾರತದಲ್ಲಿ ನಡೆಯುತ್ತಿರುವ ಪ್ರಥಮ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ‘ಏವಿಯಾ ಇಂಡಿಯಾ–93’ ನೀಡಲಿರುವ ಆವಿಸ್ಮರಣೀಯ ವೈಮಾನಿಕ ಕಸರತ್ತು–ಚಾಕಚಕ್ಯತೆಗೆ ಸಾಕ್ಷಿಯಾಗಲು ನಗರದ ಯಲಹಂಕದಲ್ಲಿನ ವಾಯುಪಡೆ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಇಲ್ಲಿನ ವಾಯುಮಂಡಲವಿಡೀ ಕಸರತ್ತುಗಾರರ ಅಂಕೆಗೆ ಒಳಪಡಲಿದೆ.</p>.<p><strong>ನೋಟೀಸಿಗೆ ಬಂಗಾರಪ್ಪ ಉತ್ತರ</strong></p>.<p>ಮೈಸೂರು, ಡಿ. 14– ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಲಿ ತಮಗೆ ನೀಡಿದ್ದ ಷೋಕಾಸ್ ನೋಟೀಸಿಗೆ ಇಂದು ಉತ್ತರ ಕಳುಹಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಇಂದು ಇಲ್ಲಿ ಹೇಳಿದರು.</p>.<p>ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ಆಧರಿಸಿ ಷೋಕಾಸ್ ನೋಟೀಸ್ ನೀಡಲಾಗಿತ್ತು. ಆ ಸಂದರ್ಶನವನ್ನು ಈಗಲೂ ನಾನು ಸಮರ್ಥಿಸುತ್ತೇನೆ’ ಎಂದರು.</p>.<p>‘ಯಾವ ರೀತಿ ಉತ್ತರ ನೀಡಿದ್ದೀರಿ?’ ಎಂಬ ಪ್ರಶ್ನೆಗೆ ಷೋಕಾಸ್ ನೋಟೀಸ್ ಗುಟ್ಟಿನ ಮಾದರಿಯಲ್ಲಿತ್ತು. ಉತ್ತರ ಕೂಡ ಅದೇ ರೀತಿಯಲ್ಲಿದೆ. ಅದರ ವಿವರಗಳನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>