<p><strong>ಗಲಭೆ ಗೊಂದಲ ಮಧ್ಯೆ ಸಂವಿಧಾನ ತಿದ್ದುಪಡಿಗೆ ಮಸೂದೆ ಮಂಡನೆ</strong></p>.<p><strong>ನವದೆಹಲಿ, ಜುಲೈ 28– </strong>ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ಚರ್ಚೆ, ವಾದ–ವಿವಾದ ಮುಂತಾದ ಗಲಭೆ, ಗೊಂದಲದ ನಂತರ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರು ಮೂಲಭೂತ ಹಕ್ಕುಗಳ ಕುರಿತ ಸಂವಿಧಾನ ತಿದ್ದುಪಡಿಗೆ ಎರಡು ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು.</p>.<p>ಈ ತಿದ್ದುಪಡಿ ಅಂಗೀಕೃತವಾದರೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಕುರಿತ ಅಧ್ಯಾಯದ ತಿದ್ದುಪಡಿಗೆ ಸಂಸತ್ತಿಗೆ ಅಧಿಕಾರ ದೊರೆಯುತ್ತದೆ.</p>.<p><strong>ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ಸಾರ್ವತ್ರಿಕ ಬೆಂಬಲ</strong></p>.<p><strong>ನವದೆಹಲಿ, ಜುಲೈ 28– </strong>ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವುದಕ್ಕೆ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಆಸ್ತಿ–ಪಾಸ್ತಿ ಬಗ್ಗೆ ಪರಿಹಾರದ ಪ್ರಶ್ನೆಯನ್ನು ನ್ಯಾಯಾಂಗ ಪರಿಶೀಲಿಸುವುದನ್ನು ತಡೆಯುವುದಕ್ಕೆ ಸಂಸತ್ತಿಗೆ ಅಧಿಕಾರ ನೀಡುವ ಎರಡು ಮಸೂದೆಗಳಿಗೆ ಇಂದು ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸಾಮಾನ್ಯ ಬೆಂಬಲ ದೊರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಲಭೆ ಗೊಂದಲ ಮಧ್ಯೆ ಸಂವಿಧಾನ ತಿದ್ದುಪಡಿಗೆ ಮಸೂದೆ ಮಂಡನೆ</strong></p>.<p><strong>ನವದೆಹಲಿ, ಜುಲೈ 28– </strong>ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ಚರ್ಚೆ, ವಾದ–ವಿವಾದ ಮುಂತಾದ ಗಲಭೆ, ಗೊಂದಲದ ನಂತರ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರು ಮೂಲಭೂತ ಹಕ್ಕುಗಳ ಕುರಿತ ಸಂವಿಧಾನ ತಿದ್ದುಪಡಿಗೆ ಎರಡು ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು.</p>.<p>ಈ ತಿದ್ದುಪಡಿ ಅಂಗೀಕೃತವಾದರೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಕುರಿತ ಅಧ್ಯಾಯದ ತಿದ್ದುಪಡಿಗೆ ಸಂಸತ್ತಿಗೆ ಅಧಿಕಾರ ದೊರೆಯುತ್ತದೆ.</p>.<p><strong>ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ಸಾರ್ವತ್ರಿಕ ಬೆಂಬಲ</strong></p>.<p><strong>ನವದೆಹಲಿ, ಜುಲೈ 28– </strong>ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವುದಕ್ಕೆ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಆಸ್ತಿ–ಪಾಸ್ತಿ ಬಗ್ಗೆ ಪರಿಹಾರದ ಪ್ರಶ್ನೆಯನ್ನು ನ್ಯಾಯಾಂಗ ಪರಿಶೀಲಿಸುವುದನ್ನು ತಡೆಯುವುದಕ್ಕೆ ಸಂಸತ್ತಿಗೆ ಅಧಿಕಾರ ನೀಡುವ ಎರಡು ಮಸೂದೆಗಳಿಗೆ ಇಂದು ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸಾಮಾನ್ಯ ಬೆಂಬಲ ದೊರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>