<p><strong>ಮೈಸೂರು–ಮಹಾರಾಷ್ಟ್ರ ಗಡಿ ವಿವಾದ: ಉಭಯ ಸಮ್ಮತ ರಾಜಕೀಯ ಇತ್ಯರ್ಥ– ಕೇಂದ್ರದ ಯತ್ನ<br />ನವದೆಹಲಿ, ಮಾರ್ಚ್ 3–</strong> ತನ್ನ ಸಲಹೆಗಳಿಗೆ ಮೈಸೂರು ಮತ್ತು ಮಹಾರಾಷ್ಟ್ರಗಳೆರಡರ ಅತಿ ಹೆಚ್ಚು ಸಮ್ಮತಿ ಗಳಿಸುವುದೇ ಕೇಂದ್ರ ಸರ್ಕಾರದ ಯತ್ನವಾಗಿದೆ ಎಂದು ರಾಜ್ಯಸಭೆಯಲ್ಲಿ ಇಂದು ಗಡಿ ವಿವಾದ ಕುರಿತ ಪ್ರಶ್ನೆಗಳಿಗೆ ಗೃಹ ಶಾಖೆ ಸ್ಟೇಟ್ ಸಚಿವ ವಿದ್ಯಾಚರಣ ಶುಕ್ಲಾ ಉತ್ತರವಿತ್ತರು.</p>.<p><strong>ಕಾವೇರಿ ಜಲ ವಿವಾದ: ಕೇಂದ್ರದ ಮಧ್ಯಪ್ರವೇಶಕ್ಕೆ ಕರುಣಾನಿಧಿ ಒತ್ತಾಯ<br />ಮದ್ರಾಸ್, ಮಾರ್ಚ್ 3–</strong> ತಮಿಳುನಾಡು ಮತ್ತು ಮೈಸೂರು ರಾಜ್ಯಗಳ ನಡುವಣ ಕಾವೇರಿ ಜಲ ವಿವಾದದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದೂ ಸಮಸ್ಯೆಯ ಇತ್ಯರ್ಥ ಇನ್ನು ತಡವಾದರೆ ಅಪಾಯಕಾರಿ ಪರಿಣಾಮಗಳು ಉಂಟಾಗುವುವೆಂದೂ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.</p>.<p>ಹೇಮಾವತಿ ಯೋಜನೆ ಪೂರ್ಣಗೊಂಡ ನಂತರ ಹೇಮಾವತಿ ನದಿಯಲ್ಲಿ ಮದ್ರಾಸಿಗೆ ಈಗ ಹರಿಯುತ್ತಿರುವಷ್ಟೇ ನೀರನ್ನು ಬಿಡುವ ಭರವಸೆ ಏನನ್ನೂ ಮೈಸೂರು ಸರ್ಕಾರ ನೀಡಿಲ್ಲವೆಂದು ಮೈಸೂರಿನ ಮುಖ್ಯಮಂತ್ರಿ ನಿನ್ನೆ ತಿಳಿಸಿರುವುದು ತಮಿಳುನಾಡು ಸರ್ಕಾರಕ್ಕೆ ತೀವ್ರ ಕಳವಳವನ್ನುಂಟು ಮಾಡಿದೆಯೆಂದು ಕರುಣಾನಿಧಿ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು–ಮಹಾರಾಷ್ಟ್ರ ಗಡಿ ವಿವಾದ: ಉಭಯ ಸಮ್ಮತ ರಾಜಕೀಯ ಇತ್ಯರ್ಥ– ಕೇಂದ್ರದ ಯತ್ನ<br />ನವದೆಹಲಿ, ಮಾರ್ಚ್ 3–</strong> ತನ್ನ ಸಲಹೆಗಳಿಗೆ ಮೈಸೂರು ಮತ್ತು ಮಹಾರಾಷ್ಟ್ರಗಳೆರಡರ ಅತಿ ಹೆಚ್ಚು ಸಮ್ಮತಿ ಗಳಿಸುವುದೇ ಕೇಂದ್ರ ಸರ್ಕಾರದ ಯತ್ನವಾಗಿದೆ ಎಂದು ರಾಜ್ಯಸಭೆಯಲ್ಲಿ ಇಂದು ಗಡಿ ವಿವಾದ ಕುರಿತ ಪ್ರಶ್ನೆಗಳಿಗೆ ಗೃಹ ಶಾಖೆ ಸ್ಟೇಟ್ ಸಚಿವ ವಿದ್ಯಾಚರಣ ಶುಕ್ಲಾ ಉತ್ತರವಿತ್ತರು.</p>.<p><strong>ಕಾವೇರಿ ಜಲ ವಿವಾದ: ಕೇಂದ್ರದ ಮಧ್ಯಪ್ರವೇಶಕ್ಕೆ ಕರುಣಾನಿಧಿ ಒತ್ತಾಯ<br />ಮದ್ರಾಸ್, ಮಾರ್ಚ್ 3–</strong> ತಮಿಳುನಾಡು ಮತ್ತು ಮೈಸೂರು ರಾಜ್ಯಗಳ ನಡುವಣ ಕಾವೇರಿ ಜಲ ವಿವಾದದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂದೂ ಸಮಸ್ಯೆಯ ಇತ್ಯರ್ಥ ಇನ್ನು ತಡವಾದರೆ ಅಪಾಯಕಾರಿ ಪರಿಣಾಮಗಳು ಉಂಟಾಗುವುವೆಂದೂ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.</p>.<p>ಹೇಮಾವತಿ ಯೋಜನೆ ಪೂರ್ಣಗೊಂಡ ನಂತರ ಹೇಮಾವತಿ ನದಿಯಲ್ಲಿ ಮದ್ರಾಸಿಗೆ ಈಗ ಹರಿಯುತ್ತಿರುವಷ್ಟೇ ನೀರನ್ನು ಬಿಡುವ ಭರವಸೆ ಏನನ್ನೂ ಮೈಸೂರು ಸರ್ಕಾರ ನೀಡಿಲ್ಲವೆಂದು ಮೈಸೂರಿನ ಮುಖ್ಯಮಂತ್ರಿ ನಿನ್ನೆ ತಿಳಿಸಿರುವುದು ತಮಿಳುನಾಡು ಸರ್ಕಾರಕ್ಕೆ ತೀವ್ರ ಕಳವಳವನ್ನುಂಟು ಮಾಡಿದೆಯೆಂದು ಕರುಣಾನಿಧಿ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>