<p>ಆಡಳಿತ ಕಾಂಗ್ರೆಸ್ ಜತೆವಿಲೀನಕ್ಕೆ ವಿರೋಧ</p>.<p><strong>ನವದೆಹಲಿ, ಜುಲೈ 5–</strong> ಭಾರತೀಯ ಕ್ರಾಂತಿದಳ ಮತ್ತು ಆಡಳಿತ ಕಾಂಗ್ರೆಸ್ ವಿಲೀನ ಪ್ರಶ್ನೆಯನ್ನು ‘ಎಲ್ಲ ದೃಷ್ಟಿಯಿಂದಲೂ ಪರಿಶೀಲಿಸಿ’ ಸಲಹೆ ಸಲ್ಲಿಸುವಂತೆ ದಳದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಇಂದು ಪಕ್ಷದ ಅಧ್ಯಕ್ಷ ಚರಣ್ ಸಿಂಗ್ರವರಿಗೆ ಅಧಿಕಾರ ನೀಡಿತು.</p>.<p>ಬಿ.ಕೆ.ಡಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಇಂದು ಇಲ್ಲಿ ಒಂಬತ್ತು ಗಂಟೆ ಕಾಲ ವಿಲೀನ ಪ್ರಶ್ನೆಯನ್ನು ಚರ್ಚಿಸಿತು. ನಂತರ ಸುದ್ದಿಗಾರರೊಡನೆ ಮಾತನಾಡಿದ ಅಧ್ಯಕ್ಷ ಚರಣ್ ಸಿಂಗ್ ಅವರು ಕಾರ್ಯನಿರ್ವಾಹಕ ಸಮಿತಿಯ ಬಹುತೇಕ ಸದಸ್ಯರ ಪ್ರಥಮ ಪ್ರತಿಕ್ರಿಯೆ ವಿಲೀನಕ್ಕೆ ವಿರೋಧ ವಾಗಿತ್ತೆಂದು ನುಡಿದರು. ಆದರೆ ಈ ಸದಸ್ಯರ ವಿರೋಧ ಅಂತಿಮವಲ್ಲ ಎಂದು ಅವರು ಹೇಳಿದರು.</p>.<p><strong>ಸರ್ಕಾರಿ ಉದ್ಯಮಗಳಲ್ಲಿ ಹೆಚ್ಚುದಕ್ಷ ಆಡಳಿತ ಅಗತ್ಯ: ಭಗತ್ ಒಪ್ಪಿಗೆ</strong></p>.<p><strong>ಪಣಜಿ, ಜುಲೈ 5–</strong> ಸರ್ಕಾರಿ ಕ್ಷೇತ್ರದ ಉದ್ಯಮಗಳ ಆಡಳಿತದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯ ಅಭಿವೃದ್ಧಿಗೆ ಅವಕಾಶ ಇದೆಯೆಂದು ಕೇಂದ್ರ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಸಚಿವ ಬಿ.ಆರ್.ಭಗತ್ರವರು ಇಲ್ಲಿ ಇಂದು ಒಪ್ಪಿಕೊಂಡರು.</p>.<p>ಪತ್ರಕರ್ತರೊಡನೆ ಮಾತನಾಡುತ್ತಾ, ಸರ್ಕಾರಿ ಕ್ಷೇತ್ರದ ಉದ್ಯಮಗಳನ್ನು ಅವರು ಸಮರ್ಥಿಸಿಕೊಂಡರು. ‘ನಮ್ಮ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಈ ಸರ್ಕಾರಿ ಕ್ಷೇತ್ರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಡಳಿತ ಕಾಂಗ್ರೆಸ್ ಜತೆವಿಲೀನಕ್ಕೆ ವಿರೋಧ</p>.<p><strong>ನವದೆಹಲಿ, ಜುಲೈ 5–</strong> ಭಾರತೀಯ ಕ್ರಾಂತಿದಳ ಮತ್ತು ಆಡಳಿತ ಕಾಂಗ್ರೆಸ್ ವಿಲೀನ ಪ್ರಶ್ನೆಯನ್ನು ‘ಎಲ್ಲ ದೃಷ್ಟಿಯಿಂದಲೂ ಪರಿಶೀಲಿಸಿ’ ಸಲಹೆ ಸಲ್ಲಿಸುವಂತೆ ದಳದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಇಂದು ಪಕ್ಷದ ಅಧ್ಯಕ್ಷ ಚರಣ್ ಸಿಂಗ್ರವರಿಗೆ ಅಧಿಕಾರ ನೀಡಿತು.</p>.<p>ಬಿ.ಕೆ.ಡಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಇಂದು ಇಲ್ಲಿ ಒಂಬತ್ತು ಗಂಟೆ ಕಾಲ ವಿಲೀನ ಪ್ರಶ್ನೆಯನ್ನು ಚರ್ಚಿಸಿತು. ನಂತರ ಸುದ್ದಿಗಾರರೊಡನೆ ಮಾತನಾಡಿದ ಅಧ್ಯಕ್ಷ ಚರಣ್ ಸಿಂಗ್ ಅವರು ಕಾರ್ಯನಿರ್ವಾಹಕ ಸಮಿತಿಯ ಬಹುತೇಕ ಸದಸ್ಯರ ಪ್ರಥಮ ಪ್ರತಿಕ್ರಿಯೆ ವಿಲೀನಕ್ಕೆ ವಿರೋಧ ವಾಗಿತ್ತೆಂದು ನುಡಿದರು. ಆದರೆ ಈ ಸದಸ್ಯರ ವಿರೋಧ ಅಂತಿಮವಲ್ಲ ಎಂದು ಅವರು ಹೇಳಿದರು.</p>.<p><strong>ಸರ್ಕಾರಿ ಉದ್ಯಮಗಳಲ್ಲಿ ಹೆಚ್ಚುದಕ್ಷ ಆಡಳಿತ ಅಗತ್ಯ: ಭಗತ್ ಒಪ್ಪಿಗೆ</strong></p>.<p><strong>ಪಣಜಿ, ಜುಲೈ 5–</strong> ಸರ್ಕಾರಿ ಕ್ಷೇತ್ರದ ಉದ್ಯಮಗಳ ಆಡಳಿತದಲ್ಲಿ ಇನ್ನೂ ಹೆಚ್ಚಿನ ದಕ್ಷತೆಯ ಅಭಿವೃದ್ಧಿಗೆ ಅವಕಾಶ ಇದೆಯೆಂದು ಕೇಂದ್ರ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಸಚಿವ ಬಿ.ಆರ್.ಭಗತ್ರವರು ಇಲ್ಲಿ ಇಂದು ಒಪ್ಪಿಕೊಂಡರು.</p>.<p>ಪತ್ರಕರ್ತರೊಡನೆ ಮಾತನಾಡುತ್ತಾ, ಸರ್ಕಾರಿ ಕ್ಷೇತ್ರದ ಉದ್ಯಮಗಳನ್ನು ಅವರು ಸಮರ್ಥಿಸಿಕೊಂಡರು. ‘ನಮ್ಮ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಈ ಸರ್ಕಾರಿ ಕ್ಷೇತ್ರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>