<p><strong>5ನೇ ಯೋಜನೆ ಧೋರಣೆ ಕರಡುವಿಗೆ ವ್ಯಾಪಕ ಸ್ವಾಗತ<br />ನವದೆಹಲಿ, ಜ. 19– </strong>ಐದನೇ ಯೋಜನೆಯ ಧೋರಣೆ ಕುರಿತು ಯೋಜನಾ ಆಯೋಗ ಸಿದ್ಧಪಡಿಸಿರುವ ಕರಡುವಿಗೆ ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯ ಮೊದಲ ದಿನದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದ ಎಲ್ಲ ರಾಜ್ಯಗಳಿಂದಲೂ ಪೂರ್ಣ ಬೆಂಬಲ ದೊರಕಿತು.</p>.<p>ದಾರಿದ್ರ್ಯ ನಿವಾರಣೆ ಮತ್ತು ಸ್ವಾವಲಂಬನೆ ಸಾಧನೆಯ ಗುರಿಗಳನ್ನು ಮುಟ್ಟುವ ದೃಷ್ಟಿಯಿಂದ ರೂಪಿಸಿರುವ ಈ ಕರಡನ್ನು ಪರಿಶೀಲಿಸಲು, ಪ್ರಧಾನಿ ಇಂದಿರಾ ಗಾಂಧಿ ಅವರು ಅಧ್ಯಕ್ಷರಾಗಿರುವ ಈ ಮಂಡಲಿ ಸಭೆಯನ್ನು ಕರೆಯಲಾಗಿತ್ತು.</p>.<p>ಇಂದು ಹದಿನೆಂಟು ಜನ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು.</p>.<p><strong>ಈ ವರ್ಷದಲ್ಲೇ ಐದು ಲಕ್ಷ ಶಿಕ್ಷಿತರಿಗೆ ಉದ್ಯೋಗ ಸೌಲಭ್ಯ<br />ನವದೆಹಲಿ, ಜ. 19–</strong> ಐದು ಲಕ್ಷ ಶಿಕ್ಷಿತ ನಿರುದ್ಯೋಗಿಗಳಿಗೆ 1973–74ನೇ ಸಾಲಿನಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಲು ಉದ್ದೇಶಿ ಸಲಾಗಿರುವುದೆಂದು ಯೋಜನೆ ಸಚಿವ ಡಿ.ಪಿ.ಧರ್ ಅವರು ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಗೆ ತಿಳಿಸಿದರು.</p>.<p>1974ರಿಂದ ಆರಂಭವಾಗಿ 1979ರಲ್ಲಿ ಅಂತ್ಯವಾಗುವ ಇಡೀ ಐದನೇ ಪಂಚವಾರ್ಷಿಕ ಯೋಜನೆಯ ಉದ್ದಕ್ಕೂ ಇದೇ ಪ್ರಮಾಣದಲ್ಲಿ ವಾರ್ಷಿಕವಾಗಿ ಉದ್ಯೋಗ ಕಲ್ಪಿಸಲಾಗುವುದೆಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>5ನೇ ಯೋಜನೆ ಧೋರಣೆ ಕರಡುವಿಗೆ ವ್ಯಾಪಕ ಸ್ವಾಗತ<br />ನವದೆಹಲಿ, ಜ. 19– </strong>ಐದನೇ ಯೋಜನೆಯ ಧೋರಣೆ ಕುರಿತು ಯೋಜನಾ ಆಯೋಗ ಸಿದ್ಧಪಡಿಸಿರುವ ಕರಡುವಿಗೆ ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಯ ಮೊದಲ ದಿನದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದ್ದ ಎಲ್ಲ ರಾಜ್ಯಗಳಿಂದಲೂ ಪೂರ್ಣ ಬೆಂಬಲ ದೊರಕಿತು.</p>.<p>ದಾರಿದ್ರ್ಯ ನಿವಾರಣೆ ಮತ್ತು ಸ್ವಾವಲಂಬನೆ ಸಾಧನೆಯ ಗುರಿಗಳನ್ನು ಮುಟ್ಟುವ ದೃಷ್ಟಿಯಿಂದ ರೂಪಿಸಿರುವ ಈ ಕರಡನ್ನು ಪರಿಶೀಲಿಸಲು, ಪ್ರಧಾನಿ ಇಂದಿರಾ ಗಾಂಧಿ ಅವರು ಅಧ್ಯಕ್ಷರಾಗಿರುವ ಈ ಮಂಡಲಿ ಸಭೆಯನ್ನು ಕರೆಯಲಾಗಿತ್ತು.</p>.<p>ಇಂದು ಹದಿನೆಂಟು ಜನ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು.</p>.<p><strong>ಈ ವರ್ಷದಲ್ಲೇ ಐದು ಲಕ್ಷ ಶಿಕ್ಷಿತರಿಗೆ ಉದ್ಯೋಗ ಸೌಲಭ್ಯ<br />ನವದೆಹಲಿ, ಜ. 19–</strong> ಐದು ಲಕ್ಷ ಶಿಕ್ಷಿತ ನಿರುದ್ಯೋಗಿಗಳಿಗೆ 1973–74ನೇ ಸಾಲಿನಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಲು ಉದ್ದೇಶಿ ಸಲಾಗಿರುವುದೆಂದು ಯೋಜನೆ ಸಚಿವ ಡಿ.ಪಿ.ಧರ್ ಅವರು ಇಂದು ಇಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆಗೆ ತಿಳಿಸಿದರು.</p>.<p>1974ರಿಂದ ಆರಂಭವಾಗಿ 1979ರಲ್ಲಿ ಅಂತ್ಯವಾಗುವ ಇಡೀ ಐದನೇ ಪಂಚವಾರ್ಷಿಕ ಯೋಜನೆಯ ಉದ್ದಕ್ಕೂ ಇದೇ ಪ್ರಮಾಣದಲ್ಲಿ ವಾರ್ಷಿಕವಾಗಿ ಉದ್ಯೋಗ ಕಲ್ಪಿಸಲಾಗುವುದೆಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>