ಹುಬ್ಬಳ್ಳಿ, ಜೂನ್ 12– ಅಕ್ಕಿ, ಜೋಳ ಮತ್ತು ಗೋಧಿ ಮಾರಾಟವನ್ನು ಹುಬ್ಬಳ್ಳಿ ವರ್ತಕರು ನಿಲ್ಲಿಸಿದ್ದು, ಪೇಟೆಯಲ್ಲಿ ಆಹಾರಧಾನ್ಯಗಳಿಲ್ಲದಿರುವುದರ ಜೊತೆಗೆ ಪಡಿತರ ಪದ್ಧತಿ ಕೂಡ ಅಸಮರ್ಪಕವಾಗಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಾಕಷ್ಟು ಆಹಾರಧಾನ್ಯ ಒದಗಿಸದಿದ್ದರೆ ಪರಿಸ್ಥಿತಿ ಸ್ಫೋಟಕವಾಗುವುದೆಂದು ಹುಬ್ಬಳ್ಳಿ–ಧಾರವಾಡ ಮೇಯರ್ ಶ್ರೀ ಎ.ಎಂ. ಬೆಂಗಳೂರಿ ಅವರು ಇಂದು ಮುಖ್ಯಮಂತ್ರಿಗೆ ಕಳುಹಿಸಿರುವ ಒಂದು ತಂತಿ ವರ್ತಮಾನದಲ್ಲಿ ತಿಳಿಸಿದ್ದಾರೆ.