<p><strong>ರಾಜಿ ಯತ್ನ ಬಿಟ್ಟು ಮುಷ್ಕರಕ್ಕೇ ಪಟ್ಟು ಹಿಡಿದರೆ ಬಿಗಿ ಕ್ರಮ</strong></p><p><strong>ನವದೆಹಲಿ, ಏ. 25</strong>– ತೃಪ್ತಿಕರ ರಾಜಿ ಇತ್ಯರ್ಥದ ಮೂಲಕ ರೈಲು ಮುಷ್ಕರ ತಪ್ಪಿಸಲು ತಾವು ಆಸಕ್ತಿ ವಹಿಸಿರುವುದಾಗಿ ರೈಲ್ವೆ ಸಚಿವ ಎಲ್.ಎನ್. ಮಿಶ್ರಾ ಅವರು ಇಂದು ಲೋಕಸಭೆಯಲ್ಲಿ ಮತ್ತೆ ಮತ್ತೆ ಆಶ್ವಾಸನೆ ನೀಡಿದರು.</p><p>ಆದರೆ, ಮುಷ್ಕರ ಹೂಡಿಯೇ ತೀರುವುದಾಗಿ ಪಟ್ಟುಹಿಡಿದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗಾಗಿ ಸೂಕ್ತ ಕಂಡ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.</p><p>ಉದ್ದೇಶಿತ ರೈಲು ಮುಷ್ಕರ ಕುರಿತು ಮಾರ್ಕ್ಸಿಸ್ಟ್ ನಾಯಕ ಎ.ಕೆ. ಗೋಪಾಲನ್ ಮತ್ತು ಇತರ ನಾಲ್ವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಾ, ಸಂಧಾನ ಯತ್ನ ನಡೆಯುತ್ತಿರುವಾಗಲೇ ಮುಷ್ಕರಕ್ಕೆ ನೋಟಿಸ್ ಜಾರಿಗೊಳಿಸುವುದು ಸರಿಯಾದ ಕ್ರಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p><p>ರೈಲ್ವೆ ಉಪಸಚಿವ ಮಹಮ್ಮದ್ ಷಫೀ ಖುರೇಷಿ ಮತ್ತು ಕಾರ್ಮಿಕರ ನಡುವೆ ಏ. 27ರಂದು ನಡೆಯುವ ಸಂಧಾನದಲ್ಲಿ ಉಭಯ ಬಣಗಳೂ ಪ್ರತಿಪಕ್ಷ ನೀಡುವ ಸಹಕಾರದ ಬಗ್ಗೆ ಗಮನ ಕೇಂದ್ರೀಕರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜಿ ಯತ್ನ ಬಿಟ್ಟು ಮುಷ್ಕರಕ್ಕೇ ಪಟ್ಟು ಹಿಡಿದರೆ ಬಿಗಿ ಕ್ರಮ</strong></p><p><strong>ನವದೆಹಲಿ, ಏ. 25</strong>– ತೃಪ್ತಿಕರ ರಾಜಿ ಇತ್ಯರ್ಥದ ಮೂಲಕ ರೈಲು ಮುಷ್ಕರ ತಪ್ಪಿಸಲು ತಾವು ಆಸಕ್ತಿ ವಹಿಸಿರುವುದಾಗಿ ರೈಲ್ವೆ ಸಚಿವ ಎಲ್.ಎನ್. ಮಿಶ್ರಾ ಅವರು ಇಂದು ಲೋಕಸಭೆಯಲ್ಲಿ ಮತ್ತೆ ಮತ್ತೆ ಆಶ್ವಾಸನೆ ನೀಡಿದರು.</p><p>ಆದರೆ, ಮುಷ್ಕರ ಹೂಡಿಯೇ ತೀರುವುದಾಗಿ ಪಟ್ಟುಹಿಡಿದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗಾಗಿ ಸೂಕ್ತ ಕಂಡ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.</p><p>ಉದ್ದೇಶಿತ ರೈಲು ಮುಷ್ಕರ ಕುರಿತು ಮಾರ್ಕ್ಸಿಸ್ಟ್ ನಾಯಕ ಎ.ಕೆ. ಗೋಪಾಲನ್ ಮತ್ತು ಇತರ ನಾಲ್ವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡುತ್ತಾ, ಸಂಧಾನ ಯತ್ನ ನಡೆಯುತ್ತಿರುವಾಗಲೇ ಮುಷ್ಕರಕ್ಕೆ ನೋಟಿಸ್ ಜಾರಿಗೊಳಿಸುವುದು ಸರಿಯಾದ ಕ್ರಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p><p>ರೈಲ್ವೆ ಉಪಸಚಿವ ಮಹಮ್ಮದ್ ಷಫೀ ಖುರೇಷಿ ಮತ್ತು ಕಾರ್ಮಿಕರ ನಡುವೆ ಏ. 27ರಂದು ನಡೆಯುವ ಸಂಧಾನದಲ್ಲಿ ಉಭಯ ಬಣಗಳೂ ಪ್ರತಿಪಕ್ಷ ನೀಡುವ ಸಹಕಾರದ ಬಗ್ಗೆ ಗಮನ ಕೇಂದ್ರೀಕರಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>